ಯುಎಸ್ಎ, ನೆದರ್ಲ್ಯಾಂಡ್, ಉಕ್ರೇನ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಜಪಾನ್, ಫಿಲಿಫೈನ್ಸ್, ಯುಕೆಯಿಂದ ಮಂಗಳವಾರ ಬಂದ ವಿದೇಶಿಗರು ಬಸದಿಯ ಕಂಬಗಳ ಕೆತ್ತನೆಯ ಸೂಕ್ಷ್ಮತೆ ಕುರಿತು ಆಶ್ಚರ್ಯ ವ್ಯಕ್ತಪಡಿಸಿದರು.
ಮೂಡುಬಿದಿರೆ: ಇಲ್ಲಿನ ಇತಿಹಾಸ ಪ್ರಸಿದ್ಧ ಸಾವಿರಕಂಬದ ಬಸದಿಗೆ 120 ಮಂದಿ ವಿದೇಶಿಗರು ಭೇಟಿ ನೀಡಿ, ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿಯವರೊಂದಿಗೆ ಕ್ಷೇತ್ರದ ಕುರಿತು ಸಮಾಲೋಚನೆ ನಡೆಸಿದರು.ಯುಎಸ್ಎ, ನೆದರ್ಲ್ಯಾಂಡ್, ಉಕ್ರೇನ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಜಪಾನ್, ಫಿಲಿಫೈನ್ಸ್, ಯುಕೆಯಿಂದ ಮಂಗಳವಾರ ಬಂದ ವಿದೇಶಿಗರು ಬಸದಿಯ ಕಂಬಗಳ ಕೆತ್ತನೆಯ ಸೂಕ್ಷ್ಮತೆ ಕುರಿತು ಆಶ್ಚರ್ಯ ವ್ಯಕ್ತಪಡಿಸಿದರು.
ಮಂಗಳೂರು ಮೂಲದ ಕ್ಯಾಲಿಫೋರ್ನಿಯ ಉದ್ಯೋಗಿ ಸಚಿನ್ ಪಡಿವಾಳ್ ಅವರನ್ನು ಭಟ್ಟಾರಕ ಸ್ವಾಮೀಜಿ ಸನ್ಮಾನಿಸಿದರು. ಮಂಗಳೂರಿನ ಟ್ರಾವೆಲ್ ಗೈಡ್ ರೋಹನ್, ರೋಷನ್, ಶ್ರೀಕಾಂತ್ ಮೊದಲಾದವರು ಉಪಸ್ಥಿತರಿದ್ದು, ಬಸದಿ ಬಾಗಿಲು, ಭೈರಾದೇವಿ ಮಂಟಪ ಕೆಳ ಅಂತಸ್ತು ಪಟ್ಟಿಯ ವಿಶ್ವದ ವೈವಿಧ್ಯಮಯ ಚಿತ್ರಗಳ ವಿವರ ನೀಡಿದರು.
ಕಾರ್ಕಳ, ಸೋನ್ಸ್ ಫಾರ್ಮ್ಗೆ ವಿದೇಶಿ ಪ್ರವಾಸಿಗರು ಭೇಟಿ ನೀಡಿದು. ಈ ಸೀಸನ್ನ ಕೊನೆಯ ಹಡಗಿನಲ್ಲಿ ಬಂದ ಪ್ರವಾಸಿಗರು ಇವರು. ಮುಂದೆ ಅಕ್ಟೋಬರ್ ಕೊನೆಗೆ ಪ್ರವಾಸಿಗರು ಭೇಟಿ ನೀಡಲಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.