ಕನ್ನಡಪ್ರಭ ವಾರ್ತೆ ವಿಜಯಪುರ
ಬೆಂಗಳೂರು ಕರ್ನಾಟಕ ಟೆನ್ನಿಸ್ ಕ್ಲಬ್ ಸಭಾಂಗಣದಲ್ಲಿ ವಿಜಯಪುರ ವೃಕ್ಷೋಥಾನ್ ಕುರಿತು ಬೆಂಗಳೂರು ಓಟಗಾರರಿಗೆ ಹಮ್ಮಿಕೊಂಡ ಸಭೆಯಲ್ಲಿ ಮಾತನಾಡಿದ ಅವರು, ಈ ಭಾಗದಲ್ಲಿ ನೀರಾವರಿ ಜೊತೆಗೆ ಅರಣ್ಯೀಕರಣಕ್ಕೂ ಆದ್ಯತೆ ನೀಡಿದ ಸಚಿವ ಎಂ.ಬಿ.ಪಾಟೀಲರ ವಿಶೇಷ ಪ್ರಯತ್ನದಿಂದ ಆರಂಭಗೊಂಡ ಕೋಟಿವೃಕ್ಷ ಅಭಿಯಾನ ಪರಿಣಾಮ ಇಲ್ಲಿ ಅರಣ್ಯೀಕರಣ ಹೆಚ್ಚಳವಾಗಿದೆ. ವೃಕ್ಷೋಥಾನ್ ಹೆರಿಟೇಜ್ ರನ್ ಕೇವಲ ಓಟವಲ್ಲದೇ ಅದು ಚಿಕ್ಕ ಮಕ್ಕಳು, ಸ್ವಾಮೀಜಿಗಳು ಸೇರಿದಂತೆ ಎಲ್ಲಾ ವಯೋಮಾನದ ನಾಗರಿಕರು ಸೇರಿ ಆಚರಿಸುವ ಹಸಿರು ಹಬ್ಬವಾಗಿದೆ ಎಂದು ಬಣ್ಣಿಸಿದರು.
ಭಾರತದ ಪ್ರಮುಖ ಮ್ಯಾರಥಾನ್ ಆಯೋಜಿಸುವ ಎನ್.ಇ.ಬಿ. ಸ್ಪೋರ್ಟ್ಸ್ ಮುಖ್ಯಸ್ಥ ನಾಗರಾಜ ಅಡಿಗ ಮಾತನಾಡಿ, ಮ್ಯಾರಥಾನ್ ಅಂದರೆ 42 ಕಿ.ಮೀ ಓಟ. ವಿಜಯಪುರದಲ್ಲಿ ಮುಂದಿನ ದಿನಗಳಲ್ಲಿ 42ಕಿ.ಮೀ ಪುಲ್ ಮ್ಯಾರಥಾನ್ ಆಯೋಜಿಸಿದರೆ ನಮ್ಮ ಸಂಸ್ಥೆಯಿಂದ ಎಲ್ಲ ಅಗತ್ಯ ನೆರವು ನೀಡಲಾಗುವುದು ಎಂದರು.ಕೈಗಾರಿಕೆ ಸಚಿವರ ಆಪ್ತಕಾರ್ಯದರ್ಶಿ ನರೇಂದ್ರ ಮಾತನಾಡಿ, ಬೆಳಗಿನ ಜಾವ ನಗರದ ಸುತ್ತಲಿನ ಯಾವುದೇ ರಸ್ತೆಗಳಿಗೂ ಹೋದರೂ ಜನರು ಸೈಕಲ್ ತುಳಿಯುತ್ತಿದ್ದು, ಹಾಗೂ ಓಡುತ್ತಿದ್ದು ಇಲ್ಲಿ ಬದಲಾವಣೆ ಬಂದಿದೆ ಎಂದರು. ಬೆಂಗಳೂರಿನ ಓಟಗಾರರಾದ ಸಿದ್ದೇಶ ಹಣಮಂತಪ್ಪ, ರವಿ ಪಾಟೀಲ, ವೃಕ್ಷೋಥಾನ್ ಕುರಿತು ತಮ್ಮ ಅನುಭವ ಹಂಚಿಕೊಂಡರು.