ಅರಣ್ಯವಾಸಿಗಳ ರ‍್ಯಾಲಿ ಯಶಸ್ವಿ

KannadaprabhaNewsNetwork |  
Published : Nov 13, 2025, 01:30 AM IST
11ಎಸ್.ಆರ್.ಎಸ್‌8ಪೊಟೋ1 (ಅರಣ್ಯವಾಸಿಗಳ ಬೃಹತ್‌ ರ‍್ಯಾಲಿಯಲ್ಲಿ ರವೀಂದ್ರ ನಾಯ್ಕ ಮಾತನಾಡಿದರು.)11ಎಸ್.ಆರ್.ಎಸ್‌8ಪೊಟೋ2 (ನಗರದ ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಾರ್ಯಾಲಯದಲ್ಲಿ ಸಮಾಲೋಚನಾ ಸಭೆ ನಡೆಯಿತು.) | Kannada Prabha

ಸಾರಾಂಶ

ಅರಣ್ಯವಾಸಿಗಳ ಒಕ್ಕಲೆಬ್ಬಿಸುವ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಸಾವಿರಾರು ಅರಣ್ಯವಾಸಿಗಳ ಐತಿಹಾಸಿಕ ಬೃಹತ್ ರ‍್ಯಾಲಿಯು ಶಿರಸಿಯಲ್ಲಿ ಯಶಸ್ವಿಯಾಗಿ ನಡೆಯಿತು.

ಒಕ್ಕಲೆಬ್ಬಿಸುವ ಪ್ರಕ್ರಿಯೆ ತುರ್ತು ಸ್ಥಗಿತಗೊಳಿಸುವಂತೆ ಘೋಷಣೆ

ಜಯ ಘೋಷದೊಂದಿಗೆ ಮೆರವಣಿಗೆಕನ್ನಡಪ್ರಭ ವಾರ್ತೆ ಶಿರಸಿ

ಅರಣ್ಯವಾಸಿಗಳ ಒಕ್ಕಲೆಬ್ಬಿಸುವ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಸಾವಿರಾರು ಅರಣ್ಯವಾಸಿಗಳ ಐತಿಹಾಸಿಕ ಬೃಹತ್ ರ‍್ಯಾಲಿಯು ಶಿರಸಿಯಲ್ಲಿ ಯಶಸ್ವಿಯಾಗಿ ನಡೆಯಿತು.

ನಗರದ ಯಲ್ಲಾಪುರ ನಾಕಾದಲ್ಲಿ ಜಮಾಯಿಸಿದ ಸುಮಾರು 3 ಸಾವಿರ ಅರಣ್ಯವಾಸಿಗಳು, ರಸ್ತೆ ಬಂದ್ ಮಾಡಿ ಸುಮಾರು 3 ತಾಸು ಧರಣಿ ಹಮ್ಮಿಕೊಂಡು ಅಧಿಕಾರಿಗಳ ಆಗಮನ, ಸಮಾಲೋಚನೆ ಸಭೆಗೆ ಆಗ್ರಹಿಸಿ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ತುರ್ತು ಸಿಸಿಎಫ್ ಸ್ಥಗಿತಕ್ಕೆ ಘೋಷಣೆ ಕೊನೆಯಲ್ಲಿ ಜಯ ಘೋಷದೊಂದಿಗೆ ಬೃಹತ್ ಮೆರವಣಿಗೆ ಐತಿಹಾಸಿಕವಾಗಿತ್ತು.

ಅರಣ್ಯ ಭೂಮಿ ಹಕ್ಕು ಹೊರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಮುಂದಾಳತ್ವದಲ್ಲಿ ಮಂಗಳವಾರ ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಾರ್ಯಾಲಯದ ಸಮೀಪದ ಯಲ್ಲಾಪುರ ನಾಕಾದಲ್ಲಿ ಜಿಲ್ಲಾದ್ಯಂತ ಆಗಮಿಸಿದ ಅರಣ್ಯವಾಸಿಗಳು ಪ್ರಥಮ ಹಂತದಲ್ಲಿ ಜಿಲ್ಲಾಧಿಕಾರಿ ಆಗಮಿಸಬೇಕೆಂದು ಆಗ್ರಹಿಸಿದರೇ, ತದನಂತರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ ಆಗಮಿಸಿ ಸಾರ್ವಜನಿಕವಾಗಿ ಮನವಿ ಸ್ವೀಕರಿಸಬೇಕೆಂದು ಧರಣಿ ಆಗ್ರಹಿಸಲಾಯಿತು. ಹೋರಾಟಗಾರರ ಒತ್ತಾಯಕ್ಕೆ ಮಣಿದು ಸ್ಥಳದಲ್ಲಿದ್ದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ, ಸಹಾಯಕ ಆಯುಕ್ತೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಹೋರಾಟಗಾರರಿಗೆ ಮಣಿದು ಸಿಸಿಎಫ್‌ಗೆ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಲು ಮನವೊಲಿಸಿದರು.ತುರ್ತು ಸ್ಥಗಿತಕ್ಕೆ ಘೋಷಣೆ:

ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ 3 ಎಕರೆ ಮತ್ತು 3 ಎಕರೆಗಿಂತ ಮಿಕ್ಕಿ 10 ಎಕರೆವರೆಗೆ ಅತಿಕ್ರಮಿಸಿರುವ ಅರಣ್ಯವಾಸಿಗಳ ಒಕ್ಕಲೆಬ್ಬಿಸುವ ಪ್ರಕ್ರಿಯೆ ತುರ್ತು ಸ್ಥಗಿತಗೊಳಿಸಿ, ಒಕ್ಕಲೆಬ್ಬಿಸುವ ಸಮಸ್ಯೆಗಳ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು. ನಂತರದ ದಿನಗಳಲ್ಲಿ ಸರ್ಕಾರದ ಅಭಿಪ್ರಾಯಕ್ಕೆ ಮಾನ್ಯತೆ ನೀಡಲಾಗುವುದು ಎಂದು ಸಿಸಿಎಫ್ ಟಿ.ಹೀರಾಲಾಲ ಸಮಾಲೋಚನಾ ಸಭೆಯಲ್ಲಿ ಭರವಸೆ ನೀಡಿದರು.

ಜೋಯಿಡಾದಲ್ಲಿ ಅತಿಕ್ರಮಣದಾರರ ಮೇಲೆ ಜರುಗುತ್ತಿರುವ ದೌಜನ್ಯದ ಕುರಿತು ಮುಂದಿನ 15 ದಿನದೊಳಗಡೆ ವಿಶೇಷ ಸಭೆ ಸಂಘಟಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಎಸ್ಪಿ ದೀಪನ್ ಎಂ.ಎನ್., ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ. ಜಗದೀಶ್ ನಾಯ್ಕ, ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ, ಡಿವೈಎಸ್‌ಪಿ ಗೀತಾ ಪಾಟೀಲ್ ಮುಂತಾದವರಿದ್ದರು.ಜಯ ಘೋಷದೊಂದಿಗೆ ಬೃಹತ್ ಮೆರವಣಿಗೆ:

ಕಾನೂನಾತ್ಮಕ ಹೋರಾಟದ ಹಿನ್ನೆಲೆ ಸಿಸಿಎಫ್ ಅವರಿಂದ ಒಕ್ಕಲೆಬ್ಬಿಸುವಿಕೆಯಲ್ಲಿ ಸ್ಪಷ್ಟ ನಿರ್ದೇಶನ ಘೋಷಣೆ ನಂತರ, ಕಳೆದ 3 ದಶಕಗಳಿಂದ ಅರಣ್ಯವಾಸಿಗಳ ಧ್ವನಿಯಾಗಿರುವ ರವೀಂದ್ರ ನಾಯ್ಕ ಅವರನ್ನು ಹೆಗಲಮೇಲೆ ಹೊತ್ತು ಜಯ ಘೋಷ ಮತ್ತು ಪಟಾಕಿಗಳಿಂದ ಬೃಹತ್ ಮೆರವಣಿಗೆ ಸಿಸಿಎಫ್ ಕಚೇರಿಯಿಂದ ವಿಕಾಸಾಶ್ರಮ ಮೈದಾನದವರೆಗೆ ಮೆರವಣಿಗೆ ಜರುಗಿ ಕೊನೆಯಲ್ಲಿ ವಿಜಯೋತ್ಸವದ ಸಭೆಯಾಗಿ ಪರಿವರ್ತನೆಗೊಂಡಿತು.

ವೇದಿಕೆಯ ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ, ರಾಜು ನರೇಬೈಲ್, ಕುಮಟಾ ಅಧ್ಯಕ್ಷ ಮಂಜುನಾಥ ಮರಾಠಿ, ಮುಂಡಗೋಡ ಅಧ್ಯಕ್ಷ ಶಿವಾನಂದ ಜೋಗಿ, ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ರಾಮ ಮರಾಠಿ ಯಲಕೊಟಗಿ, ಸುರೇಶ ಮೇಸ್ತ ಹೊನ್ನಾವರ, ರಾಜೇಶ್ ಮಿತ್ರ ನಾಯ್ಕ ಅಂಕೋಲ, ಅಣ್ಣಪ್ಪ ನಾಯ್ಕ ಅಣ್ಣಿಗೇರಿ, ಚಂದ್ರ ಪೂಜಾರಿ ಮಂಚಿಕೇರಿ, ಗಣಪತಿ ನಾಯ್ಕ ಬೆಡಸಗಾಂವ, ಹರಿಹರ ನಾಯ್ಕ, ದೇವರಾಜ ಗೊಂಡ ಭಟ್ಕಳ, ಮಹೇಶ್ ಸಾಲ್ಕೋಡ, ನೆಹರು ನಾಯ್ಕ, ಎಂ.ಆರ್. ನಾಯ್ಕ, ರಾಘು ಕವಂಚೂರು, ರಫೀಕ್, ಸುಭಾಷ್ ಗಾವಡಾ, ಅನಿತಾ ಲೋಫಿಸ್, ಮಲ್ಲೇಶಿ, ಸ್ವಾತಿ ಜೈನ್ ಮುಂತಾದವರಿದ್ದರು.

PREV

Recommended Stories

250 ಕೋಟಿ ಹಗರಣ ಕಡತ ನಾಶ ಮಾಡಿದ್ರೂ ಸಿಕ್ಕಿದವು!?
ಬಿಳಿಕೆರೆ ಬಳಿ ಒಂದು ಗಂಡು ಹುಲಿ ಮರಿ ಸೆರೆ