ಮಾಜಿ ಸಚಿವ ಚಲುವರಾಯಸ್ವಾಮಿ ಹುಟ್ಟುಹಬ್ಬ: ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

KannadaprabhaNewsNetwork |  
Published : Jun 01, 2026, 01:45 AM IST
31ಕೆಎಂಎನ್ ಡಿ15 | Kannada Prabha

ಸಾರಾಂಶ

ಜಿಲ್ಲೆಯ ಅಭಿವೃದ್ಧಿಗೆ ಚಲುವರಾಯಸ್ವಾಮಿ ಅವರ ಕೊಡುಗೆ ಅಪಾರ. ಮೆಡಿಕಲ್ ಕಾಲೇಜು, ಸಾರಿಗೆ ಬಸ್ ನಿಲ್ದಾಣಗಳು, ನೂತನ ಸರ್ಕಾರಿ ಕಟ್ಟಡಗಳು ಹೀಗೆ ಹತ್ತಾರು ಅಭಿವೃದ್ಧಿ ಕಾರ್ಯಗಳು ನಡೆದಿರುವುದು ನಮ್ಮ ಕಣ್ಣಮುಂದಿವೆ. ಅಲ್ಲದೇ, ಮಂಡ್ಯಕ್ಕೆ ಕೃಷಿ ವಿಶ್ವವಿದ್ಯಾಲಯ ತರುವ ಮೂಲಕ ರೈತರಿಗೆ ನ್ಯಾಯ ದೊರಕಿಸಿದ್ದಾರೆ.

ಮಂಡ್ಯ:

ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹಿತೈಷಿಗಳ ಬಳಗದಿಂದ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಲಾಯಿತು.

ತಾಲೂಕಿನ ಹನಕೆರೆ ಗ್ರಾಮದ ರೈತರ ಶಿಕ್ಷಣ ಸಂಸ್ಥೆ ಆವರಣದಲ್ಲಿ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಿ ಮಾತನಾಡಿದ ಬಳಗದ ಅಧ್ಯಕ್ಷ ಜಿ.ಬಿ.ನವೀನ್ ಕುಮಾರ್, ಜಿಲ್ಲೆಯ ಅಭಿವೃದ್ಧಿಗೆ ಚಲುವರಾಯಸ್ವಾಮಿ ಅವರ ಕೊಡುಗೆ ಅಪಾರ. ಮೆಡಿಕಲ್ ಕಾಲೇಜು, ಸಾರಿಗೆ ಬಸ್ ನಿಲ್ದಾಣಗಳು, ನೂತನ ಸರ್ಕಾರಿ ಕಟ್ಟಡಗಳು ಹೀಗೆ ಹತ್ತಾರು ಅಭಿವೃದ್ಧಿ ಕಾರ್ಯಗಳು ನಡೆದಿರುವುದು ನಮ್ಮ ಕಣ್ಣಮುಂದಿವೆ. ಅಲ್ಲದೇ, ಮಂಡ್ಯಕ್ಕೆ ಕೃಷಿ ವಿಶ್ವವಿದ್ಯಾಲಯ ತರುವ ಮೂಲಕ ರೈತರಿಗೆ ನ್ಯಾಯ ದೊರಕಿಸಿದ್ದಾರೆ ಎಂದು ಶ್ಲಾಘಿಸಿದರು.

ಮುಂದಿನ ದಿನಗಳಲ್ಲಿ ಅವರ ರಾಜಕೀಯ ಭವಿಷ್ಯ ಮತ್ತಷ್ಟು ವೃದ್ಧಿಸಲಿ, ಜನಸೇವಾ ಕಾರ್ಯಗಳು ಮುಂದುವರಿಯಲಿ. ಜನಸೇವೆಗಾಗಿ ಹುಟ್ಟಿರುವ ಚಲುವರಾಯಸ್ವಾಮಿ ಅವರ ಸಮಾಜಮುಖಿ ಕಾರ್ಯಗಳು ಸದಾ ನಡೆಯಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಚ್.ಪಿ.ಮಹೇಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ, ಉಪನ್ಯಾಸಕ ಪ್ರೊ.ಎನ್.ರಾಜೇಂದ್ರಸಿಂಗ್ ಬಾಬು, ಕರುನಾಡ ಸೇವಕರು ಸಂಘಟನೆ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ, ರಾಜಣ್ಣ, ರಘು, ಅಭಿ, ಸುಧನ್, ಪುಟ್ಟಸ್ವಾಮಿ ಇದ್ದರು.ಚಿಕ್ಕಬ್ಯಾಡರಹಳ್ಳಿ ಬೊಮ್ಮಲಿಂಗಯ್ಯರಿಗೆ ಬೀಳ್ಕೊಡುಗೆ

ಪಾಂಡವಪುರ: ಎಂಆರ್‌ಎನ್ ಶುಗರ್ಸ್ ಕಂಪನಿ ಗುತ್ತಿಗೆಯಲ್ಲಿರುವ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್ ಎಸ್ ಕೆ)ಯಲ್ಲಿ ನೌಕರರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿಗೊಂಡ ತಾಲೂಕಿನ ಚಿಕ್ಕಬ್ಯಾಡರಹಳ್ಳಿ ಬೊಮ್ಮಲಿಂಗಯ್ಯರಿಗೆ ಬೀಳ್ಕೊಡುಗೆ ನೀಡಲಾಯಿತು.ಬೊಮ್ಮಲಿಂಗಯ್ಯ ಅವರು 41 ವರ್ಷಗಳ ಕಾಲ ಸಕ್ಕರೆ ತಯಾರಿಕಾ ವಿಭಾಗ ಸೇರಿದಂತೆ ಕಾರ್ಖಾನೆಯ ವಿವಿಧ ವಿಭಾಗದಲ್ಲಿ ಕೆಲಸ ನಿರ್ವಹಿಸಿದ್ದಾರೆ. ಜತೆಗೆ ಎಂಪ್ಲಾಯೀಸ್ ಕೋ-ಆಪರೀಟಿವ್ ಬ್ಯಾಂಕ್ ನಲ್ಲಿ ಐದು ವರ್ಷಗಳವರೆಗೆ ನಿರ್ದೆಶಕರಾಗಿಯೂ ಸೇವೆ ಸಲ್ಲಿಸಿದ್ದರು. ಇವರ ಸುದೀರ್ಘ ಸೇವಾವಧಿಯನ್ನು ನೌಕರರ ವರ್ಗದವರು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಎಂಪ್ಲಾಯೀಸ್ ಕೋ-ಆಪರೀಟಿವ್ ಬ್ಯಾಂಕ್ ಅಧ್ಯಕ್ಷ ಎಂ.ಪುಟ್ಟಮಾದೇಗೌಡ, ಉಪಾಧ್ಯಕ್ಷ ಎಚ್.ಆರ್.ಮಹೇಶ್ ಗೌಡ, ನಿರ್ದೇಶಕರಾದ ಕೃಷ್ಣಮೂರ್ತಿ, ಆರ್.ರಮೇಶ್,ಜಿ.ಗೋಪಾಲಕೃಷ್ಣ, ಡಿ.ಸುರೇಶ್, ಕಾರ್ಯದರ್ಶಿ ಆರ್.ಕೃಪಾ, ಪಿಎಸ್ ಎಸ್ ಕೆ ಕೋ-ಆಪರೇಟೀವ್ ಸಂಘದ ಅಧ್ಯಕ್ಷ ಎಂ.ಪುಟ್ಟಮಾದೇಗೌಡ, ಉಪಾಧ್ಯಕ್ಷ ಡಿ.ಲೋಕೇಶ್, ಕಾರ್ಯದರ್ಶಿ ದರಸಗುಪ್ಪೆ ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ವಿಕಸಿತ ಭಾರತ’ಕ್ಕಾಗಿ ಸಂಕಲ್ಪಿಸಿ: ರಾಧಾಕೃಷ್ಣನ್‌
ಬಳ್ಳಾವರ ಗಂಗೂರು ಗ್ರಾಮಗಳ ಸುತ್ತ ನಿಲ್ಲದ ಕಾಡಾನೆಗಳ ಕಾಟ