ಕನ್ನಡಪ್ರಭ ವಾರ್ತೆ ಹೊಸಪೇಟೆ:
ನಗರದ ನಿವಾಸಿಗಳಾದ ಮಂಜುನಾಥ ಅಲಿಯಾಸ್ ಡಾಲಿ (24), ಈತನ ತಾಯಿ ಲಕ್ಷ್ಮಿ, ಈತನ ಸ್ನೇಹಿತರಾದ ತರುಣ್, ಅಕ್ಬರ್ ಬಂಧಿತರು.
ಪ್ರಕರಣದ ವಿವರ:ನಗರದ ಚಪ್ಪರದಹಳ್ಳಿಯ 17 ವರ್ಷದ ಬಾಲಕಿಯನ್ನು ಪುಸಲಾಯಿಸಿ ಪ್ರೀತಿ ಮಾಡಿ ದೇವಸ್ಥಾನಯೊಂದರಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ಮಂಜುನಾಥ ಅಲಿಯಾಸ್ ಡಾಲಿ (24) ಮದುವೆಯಾಗಿದ್ದ. ಬಳಿಕ ತನ್ನ ತಾಯಿ ಲಕ್ಷ್ಮಿ ಜತೆ ಸೇರಿ ಮಾನಸಿಕ, ದೈಹಿಕವಾಗಿ ಹಿಂಸೆ ನೀಡುವುದನ್ನು ಶುರು ಮಾಡಿದ್ದ. ಇತ್ತ ತಂದೆ, ತಾಯಿಗಳ ಆಸರೆ ಇಲ್ಲದೇ ಮನೆ ಬಿಟ್ಟು ಬಂದು ಮದುವೆಯಾಗಿದ್ದ ಅಪ್ರಾಪ್ತೆ ಎಲ್ಲವನ್ನೂ ಸಹಿಸಿಕೊಂಡು ಹೋಗುತ್ತಿದ್ದಳು. ಮೊದಲೇ ಕಳ್ಳತನ ಮಾಡುವುದನ್ನು ರೂಢಿ ಮಾಡಿಕೊಂಡಿದ್ದ ಮಂಜುನಾಥ ಅಲಿಯಾಸ್ ಡಾಲಿ ಮನೆಗೆ ಬರುವುದನ್ನು ಬಿಟ್ಟು ಬಿಟ್ಟಿದ್ದ. ಇದನ್ನು ಪ್ರಶ್ನಿಸಿದಕ್ಕೆ ಪತ್ನಿ ಜತೆ ಕುಡಿದು ಬಂದು ಜಗಳ ಮಾಡುತ್ತಿದ್ದ. ಸುಮಾರು ಎರಡು ತಿಂಗಳ ಹಿಂದೆ ಬಾಲಕಿಯನ್ನು ಕೊಲೆ ಮಾಡಿ, ತನ್ನ ಸ್ನೇಹಿತರಾದ ತರುಣ್, ಅಕ್ಬರ್ ಜೊತೆಗೂಡಿ ಬೈಕ್ನಲ್ಲಿ ಬ್ಯಾಗ್ಯೊಂದರಲ್ಲಿ ಹೆಣ ಸಾಗಿಸಿದ್ದಾನೆ. ತುಂಗಭದ್ರಾ ಜಲಾಶಯ ಸಮೀಪದಲ್ಲಿರುವ ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಸ್ಮಶಾನದಲ್ಲಿ ಮೂವರು ಸೇರಿ ಹೆಣ ಹೂತಿದ್ದಾರೆ. ಬಳಿಕ ಪಾರ್ಟಿ ಕೂಡ ಮಾಡಿದ್ದಾರೆ. ಪೊಲೀಸರ ಪ್ರಾಥಮಿಕ ವಿಚಾರಣೆ ವೇಳೆ ಆರೋಪಿಗಳು ಪ್ರಕರಣದ ಕುರಿತು ಬಾಯ್ಬಿಟ್ಟಿದ್ದಾರೆ.