ಮೂಗನೂರ ಗ್ರಾಮದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ

KannadaprabhaNewsNetwork |  
Published : Jan 31, 2026, 02:30 AM IST
ಕಾರ್ಯಕ್ರಮದಲ್ಲಿ ಡಾ. ಸಂಗಮೇಶ ಕೊಳ್ಳಿ ಮಾತನಾಡಿದರು. | Kannada Prabha

ಸಾರಾಂಶ

ಳೆದ ಹಲವು ವರ್ಷಗಳಿಂದ ನರಗುಂದ ವಿಧಾನಸಭಾ ಮತಕ್ಷೇತ್ರದಲ್ಲಿ ಬಡವರಿಗೆ ಸಹಾಯಧನ, ಉಚಿತ ಶಸ್ತ್ರಚಿಕಿತ್ಸೆ ಸೇರಿ ಕಣ್ಣಿನ ತಪಾಸಣೆಯನ್ನು ಡಾ. ಸಂಗಮೇಶ ಕೊಳ್ಳಿಯವರ ಅಭಿಮಾನಿಗಳ ಬಳಗದಿಂದ ಮಾಡಲಾಗುತ್ತಿದೆ.

ನರಗುಂದ: ಸಮಾಜದಲ್ಲಿ ಬಡವರ್ಗದವರಿಗೆ ಅನುಕೂಲವಾಗಲೆಂದು ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಏರ್ಪಡಿಸಿದ್ದೇವೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕೆಂದು ಕಾಂಗ್ರೆಸ್‌ ಮಾಧ್ಯಮ ವಕ್ತಾರ ಡಾ. ಸಂಗಮೇಶ ಕೊಳ್ಳಿ ತಿಳಿಸಿದರು.

ತಾಲೂಕಿನ ಮೂಗನೂರ ಗ್ರಾಮದ ಶರಣಬಸವೇಶ್ವರ ದೇವಸ್ಥಾನದಲ್ಲಿ ಡಾ. ಸಂಗಮೇಶ ಕೊಳ್ಳಿಯವರ ಅಭಿಮಾನಿ ಬಳಗ, ಹುಬ್ಬಳ್ಳಿಯ ಜಯಪ್ರಿಯಾ ಕಣ್ಣಿನ ಆಸ್ಪತ್ರೆಯ ಆಶ್ರಯದಲ್ಲಿ ಗಣರಾಜ್ಯೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುಣ್ಯಸ್ಮರಣೋತ್ಸವದ ಪ್ರಯುಕ್ತ ಉಚಿತ ನೇತ್ರ ತಪಾಸಣೆ ಮತ್ತು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ಮಾತನಾಡಿದರು.

ಕಳೆದ ಹಲವು ವರ್ಷಗಳಿಂದ ನರಗುಂದ ವಿಧಾನಸಭಾ ಮತಕ್ಷೇತ್ರದಲ್ಲಿ ಬಡವರಿಗೆ ಸಹಾಯಧನ, ಉಚಿತ ಶಸ್ತ್ರಚಿಕಿತ್ಸೆ ಸೇರಿ ಕಣ್ಣಿನ ತಪಾಸಣೆಯನ್ನು ನಮ್ಮ ಅಭಿಮಾನಿಗಳ ಬಳಗದಿಂದ ಮಾಡುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ರುದ್ರಸ್ವಾಮಿ ಮಠದ ಸೋಲಬಯ್ಯಾ ಮಹಾಸ್ವಾಮಿಗಳು, ಕೇಂದ್ರ ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ, ಅಣ್ಣಪ್ಪಗೌಡ ಪಾಟೀಲ, ದುಡ್ಡಪ್ಪ ಮಾಗೇರಿ, ನಾಗನಗೌಡ ಪಾಟೀಲ, ಎಂ. ಬಿ. ಮೆಣಸಗಿ ಎಫ್.ವೈ. ದೊಡಮನಿ, ರಾಮನಗೌಡ ಹಿರೇಗೌಡ್ರ, ಎಚ್.ಎಸ್. ಆದೇಪನವರ, ಎಸ್.ಎಸ್. ಆದೇಪನವರ, ಎಂ.ಎಚ್. ಪಾಟೀಲ, ಪ್ರಕಾಶ ಕುಂಬಾರ, ರುದ್ರಪ್ಪ ಬಾರಕೇರ, ಬಸುರಡ್ಡಿ ರಾಯರಡ್ಡಿ, ಬಸನಗೌಡ ಕರಿಗೌಡ್ರ, ಫಕೀರಪ್ಪ ಆದೇಪನವರ, ಅಶೋಕ ಸುರಕೋಡ, ಈರಣ್ಣಗೌಡ ಮುಗನೂರ, ಪ್ರವೀಣ ಮ್ಯಾಗೇರಿ, ಬಾಳಪ್ಪ ನಾಗನೂರ, ಡಾ. ಸಂಗಮೇಶ ಅಭಿಮಾನಿ ಬಳಗದ ಪದಾಧಿಕಾರಿಗಳು ಇದ್ದರು.

ಪಾದಯಾತ್ರಿಕರಿಗೆ ಅನ್ನಸಂತರ್ಪಣೆ

ರೋಣ: ಪಟ್ಟಣದ ಶಿವಪೇಟಿಯ ಗೆಳೆಯರ ಬಳಗದ ವತಿಯಿಂದ ಸವದತ್ತಿ ಯಲ್ಲಮ್ಮನಗುಡ್ಡಕ್ಕೆ ರೋಣ ಮಾರ್ಗವಾಗಿ ತೆರಳುವ ಪಾದಯಾತ್ರಿಗಳಿಗೆ ಗುರುವಾರ ಅನ್ನಸಂತರ್ಪಣೆ, ಹಣ್ಣು, ತಂಪು ಪಾನೀಯ, ಔಷಧೋಪಚಾರ ಸೇವೆ ಒದಗಿಸಲಾಯಿತು.ಭಕ್ತರಿಗೆ ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು. ಶಿವಪೇಟಿಯ ಗೆಳೆಯರ ಬಳಗದ ವತಿಯಿಂದ ಇದು ಎರಡನೇಯ ವರ್ಷದ ದಾಸೋಹ ಕಾರ್ಯಕ್ರಮವಾಗಿದೆ. ದಾಸೋಹ ಸೇವೆಯಲ್ಲಿ ರಾಜೇಶ ಕುಲಕರ್ಣಿ, ಅಶೋಕ ಕೊಳಿವಾಡ, ಶರಾಣಪ್ಪ ಡಂಬಳ, ಸುರೇಶ್ ಅಂಗಡಿ, ಪ್ರಭುರಾಜ ಮಾರನಬಸರಿ, ಈರಣ್ಣ ಗದಗಿನ, ರವಿ ಕೊಪ್ಪದ, ರಮೇಶ ಗೌಡಪ್ಪ, ರೋಹಿತ ಕುಂಬಾರ, ಮಾಗುಂಡಪ್ಪ ಕರ್ಪೂರ ಮಠ, ಶಶಿಧರ ಪಾಟೀಲ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಜಾಲತಾಣ ಬಳಕೆಗೆ ರಾಜ್ಯದಲ್ಲೂ ಮೂಗುದಾರ?
ಕೇಂದ್ರದ ವಿರುದ್ಧ ಮತ್ತೆ ಸಿಎಂ ಸಿದ್ದರಾಮಯ್ಯ ತೆರಿಗೆ ಗುಡುಗು