ಕನ್ನಡಪ್ರಭ ವಾರ್ತೆ ಸಿಂಧನೂರು
ತಪಾಸಣೆಯಲ್ಲಿ 70ಕ್ಕಿಂತ ಹೆಚ್ಚು ಜನರಿಗೆ ಇಸಿಜಿ ಹಾಗೂ 2ಡಿ ಎಕೋ ಪರೀಕ್ಷೆ, ಅವಶ್ಯಕತೆಯಿದ್ದ 100ಕ್ಕಿಂತ ಹೆಚ್ಚು ರೋಗಿಗಳಿಗೆ ಉಚಿತ ರಕ್ತ ತಪಾಸಣೆ ಮಾಡಲಾಯಿತು. ವಯಸ್ಕರಿಗೆ ಹಾಗೂ ದೂರದಿಂದ ಬರುವವರಿಗೆ ವಾಹನ ಮತ್ತು ಹಳ್ಳಿಗಳಿಂದ ಬಂದ ಪ್ರತಿಯೊಬ್ಬ ರೋಗಿಗಗಳಿಗೆ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು.
ಶಿಬಿರದಲ್ಲಿ 350 ರೋಗಿಗಳ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ ಸಪ್ತಗಿರಿ ಆಸ್ಪತ್ರೆಯ ವ್ಯವಸ್ಥಾಪಕ ಹಾಗೂ ವೈದ್ಯ ವಿಶ್ವನಾಥ ಹಾಗೂ ರಂಜಿತ್ ಅವರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ರೆಹಮತ್ ಪಾಷಾ ಶಿಬಿರ ಉದ್ಘಾಟಿಸಿದರು. ಜಮಾಅತೆ ಇಸ್ಲಾಂ ಹಿಂದ್ ಅಧ್ಯಕ್ಷ ಮಹ್ಮದ್ ಹುಸೇನಸಾಬ, ಲಿಂಗಸುಗೂರಿನ ಸ್ವಾಮಿ ವಿವೇಕಾನಂದ ಕಾಲೇಜು ಅಧ್ಯಕ್ಷ ಶಾಂತನಗೌಡ, ಸನ್ರೈನ್ ಕಾಲೇಜಿನ ಗೌರವಾಧ್ಯಕ್ಷರು ಖಾಜಾ ಮೋಹಿನುದ್ದೀನ್, ಅಧ್ಯಕ್ಷ ಇರ್ಫಾನ್ ಕೆ, ಕಾರ್ಯದರ್ಶಿ ಇರ್ಷಾದ್ ಕೆ, ನರ್ಸಿಂಗ್ ಪ್ರಾಂಶುಪಾಲ ಸಿರಿಲ್, ಪ್ಯಾರಾ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಚಕ್ರವರ್ತಿ, ಮನೋಹರ್, ಸಮಾಜ ಸೇವಕ ಉಸ್ಮಾನ್ ಷಾ ಮಕಾಂದಾರ್ ಇದ್ದರು.