ಇಂದಿನಿಂದ ಕೆ.ಬಿ.ಆರ್. ಡ್ರಾಮಾ ಕಂಪನಿಯಿಂದ ನಾಟಕ ಪ್ರದರ್ಶನ: ಶ್ರೀಕಂಟೇಶ ಚಿಂದೋಡಿ

KannadaprabhaNewsNetwork |  
Published : Mar 29, 2026, 02:30 AM IST
27ಎಂಡಿಜಿ5, ಮುಂಡರಗಿಯಲ್ಲಿ ಡಾವಣಗೇರಿಯ ಕೆ.ಬಿ.ಆರ್.ಡ್ರಾಮಾ ಕಂನಿಯ ನಾಟಕ ಪ್ರದರ್ಶನದ ಗೋಡೆ ಚಿತ್ರಗಳನ್ನು ಹವ್ಯಾಸಿ ರಂಗಭೂಮಿ ಕಲಾವಿದ ವೈ.ಎನ್.ಗೌಡರ್ ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ದಾವಣಗೇರೆಯ ಕೆ.ಬಿ.ಆರ್. ಡ್ರಾಮಾ ಕಂಪನಿ ತಂಡದಿಂದ ಮಾ. 29ರಿಂದ ಮುಂಡರಗಿ ಪಟ್ಟಣದ ಹೆಸರೂರು ರಸ್ತೆಯಲ್ಲಿರುವ ಅನ್ನದಾನೀಶ್ವರ ಮಹಾಸ್ವಾಮೀಜಿಯವರ ಜಾಗೆಯಲ್ಲಿ ನಾಟಕ ಪ್ರದರ್ಶನ ಜರುಗಲಿದೆ ಎಂದು ತಂಡದ ಮಾಲೀಕ ಶ್ರೀಕಂಟೇಶ ಚಿಂದೋಡಿ ಹೇಳಿದರು.

ಮುಂಡರಗಿ: ದಾವಣಗೇರಿಯ ಕೆ.ಬಿ.ಆರ್. ಡ್ರಾಮಾ ಕಂಪನಿ ತಂಡದಿಂದ ಮಾ. 29ರಿಂದ ಮುಂಡರಗಿ ಪಟ್ಟಣದ ಹೆಸರೂರು ರಸ್ತೆಯಲ್ಲಿರುವ ಅನ್ನದಾನೀಶ್ವರ ಮಹಾಸ್ವಾಮೀಜಿಯವರ ಜಾಗೆಯಲ್ಲಿ ನಾಟಕ ಪ್ರದರ್ಶನ ಜರುಗಲಿದೆ ಎಂದು ತಂಡದ ಮಾಲೀಕ ಶ್ರೀಕಂಟೇಶ ಚಿಂದೋಡಿ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 1928ರಲ್ಲಿ ಈ ಕಂಪನಿ ಪ್ರಾರಂಭವಾಗಿದೆ. ಇಂದಿನ ಟಿ.ವಿ. ಚಲನಚಿತ್ರ, ಮೊಬೈಲ್‌ಗಳ ಹಾವಳಿಯಲ್ಲಿಯೂ ಕಳೆದ 98 ವರ್ಷಗಳಿಂದ ವೃತ್ತಿ ರಂಗಭೂಮಿ ಅನೇಕ ಏಳುಬೀಳುಗಳ ಮಧ್ಯ ತನ್ನ ಸೇವೆ ಜೀವಂತವಾಗಿರಿಸಿಕೊಂಡು ಬರುವ ಮೂಲಕ ಜನತೆಗೆ ಮನರಂಜನೆ ಒದಗಿಸುತ್ತ ಬಂದಿದೆ. ಮುಂದಿನ ಒಂದೂವರೆ ವರ್ಷಕ್ಕೆ ಈ ಕಂಪನಿಗೆ 100 ವರ್ಷಗಳು ತುಂಬಲಿವೆ ಎಂದರು.

ದಿವಂಗತ ಪಿ.ಬಿ. ದುತ್ತರಗಿ ಅವರು ರಚಿಸಿರುವ ಚಿಂದೋಡಿ ವಿಜಯಕುಮಾರ ನಿರ್ದೇಶನ ಮಾಡಿರುವ ಅಕ್ಕ ಪಾಪರ್ ತಂಗಿ ಸೂಪರ್ ಹಾಸ್ಯ ಭರಿತ ಕೌಟುಂಬಿಕ ನಾಟಕ ಮಾ. 29ರಿಂದ ಪ್ರಾರಂಭಗೊಳ್ಳಲಿದೆ.‌ ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಪ್ರತಿದಿನ ಸಂಜೆ 6 ಹಾಗೂ ರಾತ್ರಿ 9ಕ್ಕೆ ಎರಡು ಪ್ರದರ್ಶನಗಳು ಜರುಗಲಿವೆ.

ಚಿಂದೋಡಿ ವಿಜಯಕುಮಾರ, ರಾಘವೇಂದ್ರ, ಅಂಜನಪ್ಪ, ರಾಜಮಹ್ಮದ್, ಸಿ.ವಿ. ದೀಪಾ, ನಂದಿನಿ, ಕವಿತಾ ರೈ, ಮಂಜುಳಾ, ಸಿ.ವಿ. ಹೇಮಾ, ವೀರೇಶ, ಶ್ರೀಕಂಟೇಶ ಸೇರಿದಂತೆ ಅನೇಕರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮುಂಡರಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕ ವೀಕ್ಷಿಸುವ ಮೂಲಕ ವೃತ್ತಿ ರಂಗಭೂಮಿಯನ್ನು, ವೃತ್ತಿ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ವಿನಂತಿಸಿದರು. ಸುದ್ದಿಗೋಷ್ಠಿಯಲ್ಲಿ ಹವ್ಯಾಸಿ ರಂಗಭೂಮಿ ಕಲಾವಿದ ವೈ.ಎನ್. ಗೌಡರ್, ಮಂಜುನಾಥ ಇಟಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಣಿಪಾಲ ಕೆಎಂಸಿ: ರಕ್ತ ವರ್ಗಾವಣೆ ಸೇವೆ ರಾಷ್ಟ್ರೀಯ ಕಾರ್ಯಾಗಾರ
ಆರೋಗ್ಯ ಸ್ಥಿರವಾಗಿಟ್ಟುಕೊಳ್ಳಲು ಆಯುರ್ವೇದ ಸಹಕಾರಿ