ಸರ್ಕಾರಿ ಶಾಲೆ 300 ಮಕ್ಕಳ ಸಮವಸ್ತ್ರಕ್ಕಾಗಿ ಗದ್ದೇಮನೆ ವಿಶ್ವನಾಥ್‌ ₹3 ಲಕ್ಷ ನೆರವು: ಪಿ.ಜೆ.ಆಂಟೋನಿ

KannadaprabhaNewsNetwork |  
Published : Jun 06, 2025, 12:00 AM IST
 ನರಸಿಂಹರಾಜಪುರ ತಾಲೂಕಿನ ಶೆಟ್ಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 50 ಮಕ್ಕಳಿಗೆ ಸಮವಸ್ತ್ರ ನೀಡಲು ದಾನಿ ವಿಶ್ವನಾಥ್ ನೀಡಿದ 50 ಸಾವಿರ ರುಪಾಯಿಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ರವಿಕುಮಾರ್, ಹಾಗೂ ಲಯನ್ಸ್  ನಿಯೋಜಿತ ಅಧ್ಯಕ್ಷ ಪಿ.ಜೆ.ಆಂಟೋನಿ ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಜಗದೀಶ್ ಅವರಿಗೆ ಹಸ್ತಾಂತರಿಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರಸರ್ಕಾರಿ ಶಾಲೆಗಳು ಉಳಿಯಬೇಕು ಎಂದು ಉದ್ಯಮಿ, ದಾನಿ ಗದ್ದೇಮನೆ ವಿಶ್ವನಾಥ್ ತಾಲೂಕಿನ 10 ಶಾಲೆಗಳ ಮಕ್ಕಳ ಸಮವಸ್ತ್ರ ಹಾಗೂ ಇತರ ವಸ್ತುಗಳ ಖರೀದಿಗೆ ₹3 ಲಕ್ಷ ನೆರವು ನೀಡಿದ್ದಾರೆ ಎಂದು ಲಯನ್ಸ್ ಕ್ಲಬ್ ನ ನಿಯೋಜಿತ ಅಧ್ಯಕ್ಷ ಪಿ.ಜೆ.ಆಂಟೋನಿ ತಿಳಿಸಿದರು.

- ಶೆಟ್ಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಮವಸ್ತ್ರಕ್ಕಾಗಿ 50 ಸಾವಿರ ರು. ವಿತರಣೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಸರ್ಕಾರಿ ಶಾಲೆಗಳು ಉಳಿಯಬೇಕು ಎಂದು ಉದ್ಯಮಿ, ದಾನಿ ಗದ್ದೇಮನೆ ವಿಶ್ವನಾಥ್ ತಾಲೂಕಿನ 10 ಶಾಲೆಗಳ ಮಕ್ಕಳ ಸಮವಸ್ತ್ರ ಹಾಗೂ ಇತರ ವಸ್ತುಗಳ ಖರೀದಿಗೆ ₹3 ಲಕ್ಷ ನೆರವು ನೀಡಿದ್ದಾರೆ ಎಂದು ಲಯನ್ಸ್ ಕ್ಲಬ್ ನ ನಿಯೋಜಿತ ಅಧ್ಯಕ್ಷ ಪಿ.ಜೆ.ಆಂಟೋನಿ ತಿಳಿಸಿದರು.

ಮಂಗಳವಾರ ಶೆಟ್ಟಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 50 ವಿದ್ಯಾರ್ಥಿಗಳಿಗೆ ಬೆಂಗಳೂರಿನ ಉದ್ಯಮಿ ಗದ್ದೇಮನೆ ವಿಶ್ವನಾಥ್ ಸಮವಸ್ತ್ರಕ್ಕಾಗಿ ನೀಡಿದ ₹50 ಸಾವಿರ ರು.ಗಳನ್ನು ಶಾಲೆ ಎಸ್.ಡಿ.ಎಂ.ಸಿ.ಅಧ್ಯಕ್ಷ ಜಗದೀಶ್ ಅವರಿಗೆ ಹಸ್ತಾಂತರಿಸಿದರು.

ಕನ್ನಡ ಶಾಲೆಗಳು ಉಳಿಯಬೇಕು ಎಂಬುದು ಗದ್ದೇಮನೆ ವಿಶ್ವನಾಥ್ ಅವರ ಕನಸಾಗಿದೆ. ಈ ಬಗ್ಗೆ ಲಯನ್ಸ್ ನೇತೃತ್ವದಲ್ಲಿ ತಾಲೂಕಿನ ಕುಗ್ರಾಮದಲ್ಲಿರುವ 10 ಸರ್ಕಾರಿ ಶಾಲೆಗಳನ್ನು ಗುರುತಿಸಿ ಪ್ರತಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ತಲಾ 1 ಸಾವಿರ ರು. ಸಮವಸ್ತ್ರ ಹಾಗೂ ಮಕ್ಕಳ ಅಗತ್ಯತೆಗನುಗುಣವಾಗಿ ವಸ್ತುಗಳನ್ನು ಖರೀದಿಸಲು ಹಣ ನೀಡುವ ಯೋಜನೆ ರೂಪಿಸಲಾಗಿದೆ. ಗುರುತಿಸಿರುವ ಶಾಲೆಯ ಎಸ್.ಡಿ.ಎಂ.ಸಿ. ಹಾಗೂ ಪೋಷಕರೊಂದಿಗೆ ಚರ್ಚೆ ನಡೆಸಲಾಗಿದೆ. ಪೋಷಕರು, ಮಕ್ಕಳು ಸರ್ಕಾರಿ ಶಾಲೆಗಳತ್ತ ಬರಬೇಕು ಎಂಬುದೇ ಅವರ ಆಶಯವಾಗಿದೆ ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷ ರವಿಕುಮಾರ್ ಮಾತನಾಡಿ,ಲಯನ್ಸ್ ಕ್ಲಬ್ ಉಸ್ತುವಾರಿಯಲ್ಲಿ ವಿಶ್ವನಾಥ್ ಅವರು ನೀಡಿರುವ 3 ಲಕ್ಷ ನೀಡಲು 10 ಸರ್ಕಾರಿ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಅಳಲಗೆರೆ ಸರ್ಕಾರಿ ಶಾಲೆ 30 ಮಕ್ಕಳು,ಶೀಗುವಾನಿ ಶಾಲೆ 17 ಮಕ್ಕಳು, ಬಸ್ತಿಮಠದ ಶಾಲೆ 50 ಮಕ್ಕಳು, ಟಿ.ಬಿ.ಸರ್ಕಲ್ ಸಮೀಪದ ಪೇಟೆ ಶಾಲೆಯ 50 ಮಕ್ಕಳು,ಕಲ್ಲುಗುಡ್ಡೆ ಶಾಲೆಯ 25 ಮಕ್ಕಳು, ಲಿಂಗಾಪುರದ ಶಾಲೆಯ 15 ಮಕ್ಕಳು, ಹೊನ್ನೇಕೊಡಿಗೆ ಶಾಲೆಯ 25 ಮಕ್ಕಳು, ಸಾತ್ಕೋಳಿ ಶಾಲೆಯ 15 ಮಕ್ಕಳು, ಕುಸುಬೂರು ಶಾಲೆಯ 25 ಮಕ್ಕಳು,ಶೆಟ್ಟಿಕೊಪ್ಪ ಸರ್ಕಾರಿ ಶಾಲೆಯ 50 ಮಕ್ಕಳು ಸೇರಿದಂತೆ ಒಟ್ಟು 300 ಮಕ್ಕಳಿಗೆ ತಲಾ ₹1 ಸಾವಿರದಂತೆ ₹3 ಲಕ್ಷ ವನ್ನು ನೀಡಿದ್ದಾರೆ. ಈ ಹಣವನ್ನು ಲಯನ್ಸ್ ಕ್ಲಬ್ ಉಸ್ತುವಾರಿಯಲ್ಲಿ ಆಯಾ ಶಾಲೆಯ ಎಸ್.ಡಿ.ಎಂ.ಸಿ.ಪೋಷಕರು ಹಾಗೂ ಶಿಕ್ಷಕರೊಂದಿಗೆ ಚರ್ಚೆ ನಡೆಸಿ ಮಕ್ಕಳಿಗೆ ಅವಶ್ಯಕತೆ ಇರುವ ವಸ್ತುಗಳನ್ನು ಖರೀದಿ ಮಾಡಿ ವಿತರಿಸಲು ದಾನಿಗಳು ತಿಳಿಸಿದ್ದಾರೆ ಎಂದರು.

ಸಭೆಯಲ್ಲಿ ಲಯನ್ಸ್ ಕ್ಲಬ್ ನ ನಿಯೋಜಿತ ರೀಜನಲ್ ಚೇರ್ಮನ್ ಸಿಜು, ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಕೆ.ಜಿ.ಎಲ್ದೋ, ಖಜಾಂಚಿ ಈಶ್ವರಾಚಾರ್, ಲಯನ್ಸ್ ಕ್ಲಬ್ ಸದಸ್ಯರಾದ ಡಿ.ಸಜಿ, ಎಲ್ದೋ ಕರುಗುಂದ, ಹಿರೇಬಿಸು ಸುಭಿ, ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಎಂ.ಜಗದೀಶ್, ಶಿಕ್ಷಕರಾದ ರಾಧಾ ಮಣಿ, ಅರುಣಕುಮಾರ್, ಗಾಯಿತ್ರಿ, ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ