ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಆಗ್ರಹಿಸಿ ರೈತ ನಾಯಕ ಟಿಕಾಯತ್ ನೇತೃತ್ವದಲ್ಲಿ ಹೋರಾಟ ನಡೆದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ಪಂದಿಸಲಿಲ್ಲ. ಕರ್ನಾಟಕದಿಂದ 25 ಸಂಸದರನ್ನು ಆಯ್ಕೆ ಮಾಡಿದ್ದರೂ ಮೋದಿ ಸರ್ಕಾರ ರಾಜ್ಯಕ್ಕೆ ಯಾವ ಕೊಡುಗೆ ನೀಡಲಿಲ್ಲ. ಮನ್ ಕಿ ಬಾತ್ ಅಂತಾರೆ ಜನ ಕೀ ಬಾತ್ ಆಲಿಸುವುದಿಲ್ಲ ಎಂದು ಟೀಕಿಸಿದರು.
ಮೋದಿ ಅವರನ್ನು ವಿಶ್ವಗುರು ಅಂತ ಬಿಂಬಿಸಲು ಹೊರಟಿರುವ ಬಿಜೆಪಿ ನಾಯಕರು ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮಣಿಪುರ ಘಟನೆ ಬಗ್ಗೆ ತುಟಿಕ್, ಪಿಟಿಕ್ ಎನ್ನಲಿಲ್ಲ. ಸಂಸತ್ ಭವನಕ್ಕೆ ಗ್ಯಾಲರಿಯಿಂದ ನುಗ್ಗಿದ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಅವರ ಪಕ್ಷದ ಸಂಸದ ಪ್ರತಾಪ ಸಿಂಹ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ದೇಶದಲ್ಲಿ ವಾಕ್ ಸ್ವಾತಂತ್ರ್ಯ ಸಂಪೂರ್ಣ ಕುಸಿದು ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮುಖಂಡರಾದ ಕಾಮೇಶ ಭೋವಿ, ಹನುಮಂತ ಡೋಣಿ, ಜಯಪ್ರಕಾಶ ಉತ್ತೂರ, ಹನುಮಂತ ದುರ್ಗಣ್ಣವರ, ಗುರುನಾಥ್ ಮ್ಯಾಗೇರಿ, ವಿಜಯಕುಮಾರ ನಾಯಕ, ಶ್ರವಣ ಖಾತೆದಾರ ಇತರರು ಇದ್ದರು.