ಗಾಂಧೀಜಿ, ಶಾಸ್ತ್ರೀಜಿ ದೇಶ ಕಂಡ ಮಹಾನ್ ನೇತಾರರು: ಅರುಣಕುಮಾರ ಪೂಜಾರ

KannadaprabhaNewsNetwork |  
Published : Oct 03, 2024, 01:33 AM IST
೨ಎಚ್‌ವಿಆರ್೩ | Kannada Prabha

ಸಾರಾಂಶ

ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಹಾತ್ಮಾ ಗಾಂಧೀಜಿ ಮತ್ತು ಲಾಲ್‌ ಬಹಾದ್ದೂರ್ ಶಾಸ್ತ್ರಿ ಜಯಂತಿಯನ್ನು ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಆಚರಿಸಲಾಯಿತು.

ಹಾವೇರಿ: ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಹಾತ್ಮಾ ಗಾಂಧೀಜಿ ಮತ್ತು ಲಾಲ್‌ ಬಹಾದ್ದೂರ್ ಶಾಸ್ತ್ರಿ ಜಯಂತಿಯನ್ನು ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಆಚರಿಸಲಾಯಿತು.

ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಪುಷ್ಪನಮನ ಸಲ್ಲಿಸಿ ಮತನಾಡಿ, ಭಾರತೀಯ ಸ್ವಾತಂತ್ರ‍್ಯ ಆಂದೋಲನದ ಕಾಲದಲ್ಲಿ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದ ಗಾಂಧೀಜಿ ಅವರನ್ನು ಬಾಪೂಜಿ ಎಂದು ಗೌರವಿಸಲಾಗಿತ್ತು. ಅದೇ ರೀತಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರು ನಮ್ಮ ದೇಶ ಕಂಡ ಅಪರೂಪದ ರಾಜನೀತಿ ತಜ್ಞ. ೧೯೬೧ರಿಂದ ೧೯೬೩ರ ವರೆಗೆ ೬ನೇ ಗೃಹ ಸಚಿವರಾಗಿ, ೧೯೬೫ರಲ್ಲಿ ಭಾರತ-ಪಾಕ್ ಯುದ್ಧದ ಸಮಯದಲ್ಲಿ ರಾಷ್ಟ್ರದ ಗೌರವ ಕಾಯ್ದವರು. ''''ಜೈಜವಾನ್, ಜೈಕಿಸಾನ್'''' ಎಂಬ ಘೋಷಣೆ ಮೂಲಕ ಹೆಸರಾದರು. ೧೯೬೪ರಿಂದ ೧೯೬೬ರ ವರೆಗೆ ಭಾರತದ ೨ನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ನಮ್ಮ ದೇಶದ ಶಾಂತಿ, ಕೃಷಿ ಮತ್ತು ಆರ್ಥಿಕ ಪ್ರಗತಿಗೆ ಬದ್ಧತೆಯ ದಿನದ ಗುರುತುಗಳನ್ನು ಅಚ್ಚಳಿಯದೇ ಉಳಿಸಿದವರು ಶಾಸ್ತ್ರೀಜಿ ಎಂದು ಸ್ಮರಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ ಮಾತನಾಡಿ, ಖಾದಿ ವಸ್ತುಗಳನ್ನು ಖರೀದಿಸಿ ಖಾದಿ ಗ್ರಾಮೋದ್ಯೋಗವನ್ನು ಪ್ರೋತ್ಸಾಹಿಸಬೇಕು. ೨ನೇ ಹಂತದ ಸದಸ್ಯತ್ವ ಅಭಿಯಾನವನ್ನು ಹೆಚ್ಚಿನ ರೀತಿಯಲ್ಲಿ ಎಲ್ಲ ಕಾರ್ಯಕರ್ತರು ಪದಾಧಿಕಾರಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು. ನಂತರ ಮಾಜಿ ಸೈನಿಕರಿಗೆ ಸನ್ಮಾನ ಮಾಡಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಸುರೇಶ ಹೊಸಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಸಂತೋಷ ಆಲದಕಟ್ಟಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಮಾಲತೇಶಗೌಡ, ಗಿರೀಶ ತುಪ್ಪದ, ಗುಡ್ಡಪ್ಪ ಭರಡಿ, ಪ್ರಕಾಶ ಉಜನಿಕೊಪ್ಪ, ವಿಜಯಕುಮಾರ ಚಿನ್ನಿಕಟ್ಟಿ, ಶಿವಯೋಗಿ ಹುಲಿಕಂತಿಮಠ, ಅಡಿವಯ್ಯ ಯಲವಿಗಿಮಠ, ನಾಗರಾಜ ಹರಿಗೋಲ, ಆನಂದ ಕಲಾಲ್, ಅಭಿಷೇಕ ಗುಡಗೂರ, ಲಲಿತಾ ಗುಂಡೇನಹಳ್ಳಿ, ಲತಾ ಬಡ್ನಿಮಠ, ಪುಷ್ಪಾಚಕ್ರಸಾಲಿ, ರೋಹಿಣಿ ಪಾಟೀಲ, ಚೆನ್ನಮ್ಮ ಪಾಟೀಲ, ಭಾಗ್ಯಶ್ರೀ ಮೋರೆ, ಸುಮಗಂಲಾ ಚನ್ನವೀರಗೌಡ, ವೆಂಕಟೇಶ ನಾರಾಯಣಿ, ಅಲ್ಲಭಕ್ಷ ತಿಮ್ಮಾಪುರ, ಚಿಕ್ಕಪ್ಪ ದೊಡ್ಡತಳವಾರ, ರಮೇಶ ಪಾಲನಕರ, ನಾಗರಾಜ ಬಸೇಗಣ್ಣಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜಯನಗರ ಪಾಲಿಕೆ ಬಜಾರ್‌ ಮಳಿಗೆಗಳ ಇ-ಹರಾಜು ಮೂಲಕ ವಿತರಿಸಿ: ಮಹೇಶ್ವರ್ ರಾವ್ ಸೂಚನೆ
ರಸ್ತೆ ಅಪಘಾತ ಸೈಕಲ್‌ ಸವಾರ ಸಾವು