ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘ, ಎಂ.ಎಲ್.ಶ್ರೀ ಕಂಠೇಗೌಡ ಸಂಶೋಧನಾ ಕೇಂದ್ರದಿಂದ ನಡೆದ ಕವಿತಾ ಸ್ಮಾರಕ ಉಪನ್ಯಾಸ, ಕವಿತಾ ಸ್ಮಾರಕ ಪ್ರಶಸ್ತಿ ಪ್ರದಾನ 2024 ಕಾರ್ಯಕ್ರಮದಲ್ಲಿ
ಗಾಂಧಿ ಮತ್ತು ಮಹಿಳೆ ಕುರಿತು ಉಪನ್ಯಾಸ ನೀಡಿದರು.ಸ್ವಾತಂತ್ರ್ಯ ಎನ್ನುವುದು ಮಹಿಳೆಯರ ಹಕ್ಕು, ಶಿಕ್ಷಣವು ಹೆಣ್ಣು ಮಕ್ಕಳಿಗೆ ಸಿಗಬೇಕು. ಅದನ್ನು ಪುರುಷರ ವಿರುದ್ಧ ಹೋರಾಟ ಮಾಡಿ ಪಡೆದುಕೊಳ್ಳುವಂತಾಗಬಾರದು. ಅಸ್ಪೃಶ್ಯತಾ ನಿವಾರಣೆ, ಜನರ ಆರ್ಥಿಕ ಪರಿಸ್ಥಿತಿ ಉತ್ತಮಪಡಿಸುವುದು ಸೇರಿದಂತೆ ಹಲವು ಪರಿಕಲ್ಪನೆಗಳನ್ನು ಹೊಂದಿದ್ದರು ಎಂದರು.
ಮಹಿಳೆಯರು ಪುರುಷರಂತೆ ಸಮಾನವಾಗಿರಬೇಕೆನ್ನುವ ಉದ್ದೇಶದಿಂದಲೇ ಮಹಿಳೆಯರು ಶ್ರಮಪಡುತ್ತಾರೆ ನಿಜ. ಆದರೆ, ಅನೇಕ ಮಹಿಳೆಯರು ಪುರುಷರ ಮೇಲೆ ತಪ್ಪನ್ನು ಹಾಕಿ ತಮ್ಮ ಪಾಡಿಗೆ ಇದ್ದು ಬಿಡುವುದು ಸಹ ತಪ್ಪಾಗುತ್ತದೆ ಎಂಬುದನ್ನು ಗಾಂಧಿ ಅವರು ಹೇಳಿದ್ದರು. ನಿಮ್ಮ ಸ್ನೇಹಿತೆಯರು, ಅಕ್ಕತಂಗಿಯರ ನಡುವೆ ಒಂದು ಚರ್ಚೆಯನ್ನು ಮಾಡಿ ಸುಧಾರಣೆ ಕಂಡು ಕೊಳ್ಳಬೇಕು ಎಂಬ ಆಶಯವನ್ನು ತಿಳಿಸಿದ್ದರು ಎಂಬುದನ್ನು ಹೇಳಿದರು.
ಮೈಸೂರು ಕುವೆಂಪು ಅಧ್ಯಯನ ಸಂಶೋಧನಾ ಸಹಾಯಕಿ ಕೆ.ಎಲ್.ದಿವ್ಯಾ ಅಭಿನಂದನಾ ನುಡಿಯಾಡಿದರು. ನಿವೃತ್ತ ಪ್ರಾಧ್ಯಾಪಕ ಮ. ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಕವಯಿತ್ರಿ ಎಚ್.ಆರ್.ಸುಜಾತಾ ಅವರಿಗೆ ಕವಿತಾ ಸ್ಮಾರಕ ಪ್ರಶಸ್ತಿ ಮತ್ತು 15 ಸಾವಿರ, ಫಲಕ ನೀಡಲಾಯಿತು. ಸಮಾರಂಭದಲ್ಲಿ ಸಾಹಿತಿ ರಾಗೌ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ, ಉಪನ್ಯಾಸಕಿ ದೇವಿಕಾ ಭಾಗವಹಿಸಿದ್ದರು.