ಚಿಣ್ಣರಿಂದ ಉದ್ಯಾನ ಸ್ವಚ್ಛತಾ ಕಾರ್ಯ

KannadaprabhaNewsNetwork |  
Published : Apr 14, 2025, 01:18 AM IST
೧೩ಕೆಎಲ್‌ಆರ್-೨ಕೋಲಾರ ಕ್ರೀಡಾಸಂಘದಿಂದ ನಡೆಯುತ್ತಿರುವ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿರುವ ಚಿಣ್ಣರು  ಇಲ್ಲಿನ ಜಯನಗರದ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನ್ನು ಸ್ವಚ್ಚಗೊಳಿಸುವ ಮೂಲಕ ಸ್ವಚ್ಚತಾ ಅಭಿಯಾನ ನಡೆಸಿದರಲ್ಲದೇ ತಮಟೆ ಕಲಾವಿದರೊಂದಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. | Kannada Prabha

ಸಾರಾಂಶ

ಉಚಿತ ಶಿಬಿರ ನಡೆಸಲಾಗುತ್ತಿದೆ, ದೊಡ್ಡ ನಗರಗಳಲ್ಲಿ ಇಂತಹ ಶಿಬಿರ ನಡೆಸಲು ಸಾವಿರಾರು ರು.ಗಳನ್ನು ಪಡೆಯುತ್ತಾರೆ. ಆದರೆ ಇಲ್ಲಿ ಸಂಘದ ಪದಾಧಿಕಾರಿಗಳು ಅನೇಕರ ನೆರವು ಪಡೆದು ಮಕ್ಕಳಿಗೆ ತಿಂಡಿ ನೀಡುವ ಜತೆಗೆ ವಿವಿಧ ಪ್ರದೇಶಗಳಿಗೆ ಕರೆದುಕೊಂಡು ಹೋಗಿ ಮಕ್ಕಳಲ್ಲಿ ಸಂಸ್ಕಾರ, ಸಮಯಪ್ರಜ್ಞೆ ಮೂಡಿಸಿ ಆರೋಗ್ಯರ ಜೀವನವನ್ನು ಕಲಿಸಿಕೊಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರಕೋಲಾರ ಕ್ರೀಡಾ ಸಂಘದಿಂದ ನಡೆಯುತ್ತಿರುವ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿರುವ ಚಿಣ್ಣರು ಇಲ್ಲಿನ ಜಯನಗರದ ಡಾ.ಬಿ.ಆರ್. ಅಂಬೇಡ್ಕರ್ ಉದ್ಯಾನವನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತಾ ಅಭಿಯಾನ ನಡೆಸಿದರಲ್ಲದೇ ತಮಟೆ ಕಲಾವಿದರ ತಮಟೆ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.ಕೋಲಾರ ಕ್ರೀಡಾ ಸಂಘವು ನಗರದ ಟೇಕಲ್ ರಸ್ತೆಯ ಅಂಬೇಡ್ಕರ್ ಮಕ್ಕಳ ಉದ್ಯಾವನದಲ್ಲಿ ದಿ. ಡಿ.ಸುಧಾಕರ್ ಸ್ಮರಣಾರ್ಥ ೩೮ನೇ ವರ್ಷದ ಬೇಸಿಗೆ ತರಬೇತಿ ಶಿಬಿರದಲ್ಲಿ ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಉದ್ಯಾನವನ ಸ್ವಚ್ಛತೆ ಮಾಡುವ ಕಾರ್ಯದಲ್ಲಿ ಮಕ್ಕಳು, ಸಂಘದ ಪದಾಧಿಕಾರಿಗಳು ಶ್ರಮಿಸಿದರು.ಮಕ್ಕಳಿಗೆ ಸ್ವಚ್ಛತೆ ಅರಿವು ಮೂಡಿಸಿ

ಸಂಘದ ಅಧ್ಯಕ್ಷ ಸಾ.ಮಾ.ಅನಿಲ್ ಕುಮಾರ್ ಮಾತನಾಡಿ, ಯಾವುದೇ ಶುಲ್ಕ ಪಡೆಯದೇ ಶಿಬಿರ ನಡೆಸಲಾಗುತ್ತಿದೆ, ದೊಡ್ಡ ನಗರಗಳಲ್ಲಿ ಇಂತಹ ಶಿಬಿರ ನಡೆಸಲು ಸಾವಿರಾರು ರು.ಗಳನ್ನು ಪಡೆಯುತ್ತಾರೆ. ಆದರೆ ಇಲ್ಲಿ ಸಂಘದ ಪದಾಧಿಕಾರಿಗಳು ಅನೇಕರ ನೆರವು ಪಡೆದು ಮಕ್ಕಳಿಗೆ ತಿಂಡಿ ನೀಡುವ ಜತೆಗೆ ವಿವಿಧ ಪ್ರದೇಶಗಳಿಗೆ ಕರೆದುಕೊಂಡು ಹೋಗಿ ಮಕ್ಕಳಲ್ಲಿ ಸಂಸ್ಕಾರ, ಸಮಯಪ್ರಜ್ಞೆ ಮೂಡಿಸಿ ಆರೋಗ್ಯರ ಜೀವನವನ್ನು ಕಲಿಸಿಕೊಡಲಾಗುತ್ತಿದೆ. ಮಕ್ಕಳು ಸ್ವಚ್ಛತೆಯ ಅರಿವು ಪಡೆಯಲು ಅವರಿಂದಲೇ ಸ್ವಚ್ಛತಾ ಕಾರ್ಯ ನಡೆಸುತ್ತಿರುವುದಾಗಿ ತಿಳಿಸಿದರು.ಗ್ರಂಥಾಲಯ ಸೌಲಭ್ಯ ಪಡೆಯಿರಿ

ಸಂಘದ ಪದಾಧಿಕಾರಿ ಅಪ್ಪಿ ನಾರಾಯಣಸ್ವಾಮಿ ಮಾತನಾಡಿ, ಕೋಲಾರ ಕ್ರೀಡಾ ಸಂಘವು ಎಲ್ಲಾ ಸಂಘಗಳಿಗಿಂತಲೂ ಮುಂಚೂಣಿಯಲ್ಲಿದೆ. ಇಂದು ಹಣ ಗಳಿಕೆಯೇ ಮಹತ್ವ ಪಡೆದುಕೊಂಡಿರುವ ಸಂದರ್ಭದಲ್ಲಿ ಕೋಲಾರ ಕ್ರೀಡಾಸಂಘದ ನಿಸ್ವಾರ್ಥ ಪ್ರಯತ್ನ ಶ್ಲಾಘನೀಯವಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಸೇರಿಸಬಹುದು. ಸಂಘದಿಂದ ಬಯಲು ಗ್ರಂಥಾಲಯ ವ್ಯವಸ್ಥೆ ಇದ್ದು, ಇದರ ಪ್ರಯೋಜನ ಪಡೆಯಲು ಕೋರಿದರು.ಶಿಬಿರದಲ್ಲಿ ಭಾಗವಹಿಸಿದ್ದ ತಮಟೆ ಕಲಾವಿದರು ಶಿಬಿರದ ಮಕ್ಕಳಿಗೆ ಖುಷಿ ನೀಡುವುದರ ಸಲುವಾಗಿ ತಮಟೆ ವಾದದೊಂದಿಗೆ ಮಕ್ಕಳು ಕುಣಿದು ಸಂತೋಷಟ್ಟರು. ಈ ಸಂದರ್ಭದಲ್ಲಿ ಜಯಪ್ರಕಾಶ್, ತರಬೇತುದಾರರಾದ ಸುರೇಶ್‌, ಕೃಷ್ಣಮೂರ್ತಿ, ಹರೀಶ್ ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ