- ಸಾವಿರಾರು ಎಕರೆ ಭೂಸ್ವಾಧೀನ: ಮುಗ್ಧ ಹಳ್ಳಿಗರಿಗೆ ಸರ್ಕಾರದಿಂದ ಮೋಸ ಮಾಡಿದ ಆರೋಪ
- ಕುಡಿಯುವ ನೀರು, ಉಸಿರಾಡುವ ಗಾಳಿಯೂ ಮಲೀನ : ಬದುಕು ಡೋಲಾಯಮಾನ
- ಕನ್ನಡಪ್ರಭ ಸರಣಿ ವರದಿ : ಭಾಗ -5-----
ಕನ್ನಡಪ್ರಭ ವಾರ್ತೆ ಯಾದಗಿರಿ
-ಕಡೇಚೂರು ಗ್ರಾಮದ ನಿವೃತ್ತ ಸರ್ಕಾರಿ ಉದ್ಯೋಗಿ ತಿಪ್ಪಣ್ಣ ಹೀಗೆ ಹೇಳುವಾಗ, ಅವರ ಮುಖದಲ್ಲಿ ಆತಂಕ, ದುಗುಡ ಎದ್ದು ಕಾಣುತ್ತಿತ್ತು. ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ನಿಮ್ಮ ನಿಮ್ಮ ಜಮೀನುಗಳನ್ನು ನೀಡಿದರೆ ನಿಮ್ಮ ಬದುಕು ಹಸನಾಗುತ್ತದೆ, ಮಕ್ಕಳು, ಮೊಮ್ಮಕ್ಕಳು, ನಿಮ್ಮಿಡೀ ಪೀಳಿಗೆ ಉದ್ಧಾರಾಗುತ್ತದೆ, ಕೈತುಂಬಾ ದುಡ್ಡೂ ಬರುತ್ತದೆ ಎಂದು ಅಂಗೈಲಿ ಅರಮನೆ ತೋರಿಸಿ ನಮ್ಮಿಂದ ಭೂಸ್ವಾಧೀನಕ್ಕೆ ಸಹಿ ಹಾಕಿಸಿಕೊಂಡರು. ಆದರೆ, ಈಗ ನೋಡಿ, ಕೆಮಿಕಲ್ ಕಂಪನಿಗಳದ್ದೇ ಅಟ್ಟಹಾಸ. ಕೆಟ್ಟ ವಾಸನೆಯಿಂದ ನಮ್ಮೂರ ಜನ ಉಸಿರಾಡಲೂ ಕಷ್ಟ ಪಡುತ್ತಿದ್ದಾರೆ. ಹದಿಹರೆಯದಲ್ಲೇ ಮೈತುಂಬಾ ರೋಗಗಳು ಬಾಧಿಸುತ್ತಿವೆ. ನಮ್ಮದಿನ್ನು, ಮುಗಿಯಿತು ನಿಜ. ಆದ್ರೆ, ಮುಂದಿನ ಪೀಳಿಗೆ ಬದುಕೋದಾದ್ರೂ ಹೇಗೆ..? ಎಂದು ನೋವು ತೋಡಿಕೊಳ್ಳುತ್ತಾರೆ.
"ಚೆನ್ನೈ, ಹೈದರಾಬಾದ್, ಮಹಾರಾಷ್ಟ್ರ ಮುಂತಾದ ಭಾಗಗಳಿಂದ ಇಲ್ಲಿ ಲಾರಿಗಟ್ಟಲೇ ಕಸಗಳನ್ನು ತಂದು ಹಾಕ್ತಾರೆ. ನಮಗೆಲ್ಲ ಈ ವಾತಾವರಣದಲ್ಲಿ ಬದುಕೋದು ಕಷ್ಟವಾಗಿದೆ. ನಮಗೆಲ್ಲ ಕಿಣಿಕೇರಿ ಹತ್ತಿರ ಹೋಗಿ ಅಂತಾರೆ, ಇಡೀ ಊರಿಗೂರೇ ಶಿಫ್ಟ್ ಮಾಡ್ತೀವಿ ಅಂತಿದ್ದಾರೆ, ಮನೆ- ಹೊಲ ಗದ್ದೆಗಳನ್ನು ಬಿಟ್ಟು ಎಲ್ಲಿಗೆ ಹೋಗಬೇಕು ಎನ್ನುವ ಗ್ರಾಮದ ಹಿರಿಯ ಬಸವರಾಜಪ್ಪ, ನಮ್ ಪೀಳಿಗೆ ಹೋಗಲಿ, ಮುಂದೆ ನಮ್ ಮಕ್ಕಳ ಪೀಳಿಗೆ ಗತಿ ಏನು ಅಂತ ಆತಂಕ ವ್ಯಕ್ತಪಡಿಸಿದರು.
ಕೋಟ್-1 : ಗಾರ್ಮೆಂಟ್ ಫ್ಯಾಕ್ಟರಿ ತರ್ತೀವಿ ಅಂತ್ಹೇಳಿ ಕೆಮಿಕಲ್ ಕಂಪನಿಗಳನ್ನು ತಂದಾಕಿದ್ರು. ಉಸಿರಾಡಲು ಗಾಳಿ- ವಾಸನೆ ನಮಗೆಲ್ಲ ರೋಗಗಳು ಬರ್ತಿವೆ. ಕಂಪನಿ ಶುರು ಆದ್ರೆ ಮಕ್ಕಳಿಗೆ ಮೊಮ್ಮಕ್ಕಳಿಗೆ ನೌಕರಿ ಕೊಡ್ತೀವಿ ಅಂತ ಹೇಳಿದ್ದರು. ಅವೆಲ್ಲ ಸುಳ್ಳಾಗಿವೆ. ಇಂತಹ ಕಂಪನಿಗಳು ಬಂದ್ ಆಗಬೇಕು. ಅವರು ಹೇಳಿದಂತೆ ಗಾರ್ಮೆಂಟ್ ತರಲಿ. -
----
- ವಿಶ್ವನಾಥ್, ಗ್ರಾಮ ಪಂಚಾಯ್ತಿ ಸದಸ್ಯ, ಕಡೇಚೂರು.
---12ವೈಡಿಆರ್1 : ಕಡೇಚೂರು ಗ್ರಾಮದ ನೋಟ.
12ವೈಡಿಆರ್2 : ಕಡೇಚೂರು ಗ್ರಾಮ ಪಂಚಾಯ್ತಿ.12ವೈಡಿಆರ್3 : ತಿಪ್ಪಣ್ಣ, ಕಡೇಚೂರು, ಗ್ರಾಮದ ಹಿರಿಯರು.
12ವೈಡಿಆರ್4 : ಬಸವರಾಜ್ಪ, ಕಡೇಚೂರು ಗ್ರಾಮಸ್ಥ.12ವೈಡಿಆರ್5 : ಹೊನ್ನಪ್ಪ, ಕಡೇಚೂರು ಗ್ರಾಮಸ್ಥ.
12ವೈಡಿಆರ್6 : ವಿಶ್ವನಾಥ, ಗ್ರಾಮ ಪಂಚಾಯತ್ ಸದಸ್ಯ, ಕಡೇಚೂರು.