- ಚುನಾವಣೆಗೆ ನಾನೇ ನಿಲ್ಲಬೇಕಿತ್ತೇನೋ ಅನಿಸುತ್ತಿದೆ ಎಂದ ಮಾಜಿ ಸಂಸದ । ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತೆ ಅರ್ಪಣೆ
ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ಆರು ಸಲ ಬಿಜೆಪಿಯನ್ನು ಕ್ಷೇತ್ರದ ಮತದಾರರು ಗೆಲ್ಲಿಸಿದ್ದು, 2 ಸಲವಷ್ಟೇ ನಾವು ಸೋತಿದ್ದೇವೆ. ಮೊನ್ನೆಯ ಫಲಿತಾಂಶವನ್ನು ನೋಡಿದರೆ ನಾನೇ ನಿಲ್ಲಬೇಕಿತ್ತೇನೋ ಅನಿಸುತ್ತಿದೆ ಎಂದು ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಹೇಳಿದರು.
ನಗರದ ದಾ-ಹ ಅರ್ಬನ್ ಕೋ ಆಪ್ ಬ್ಯಾಂಕ್ ಸಮುದಾಯ ಭವನದಲ್ಲಿ ಭಾನುವಾರ ಬಿಜೆಪಿ ಜಿಲ್ಲಾ ಘಟಕದಿಂದ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆ ಫಲಿತಾಂಶ ಬಂದ ದಿನದಿಂದಲೂ ಎಷ್ಟೋ ಮುಖಂಡರು, ಕಾರ್ಯಕರ್ತರು, ಅಭಿಮಾನಿ, ಬೆಂಬಲಿಗರು ರೋದಿಸುತ್ತಾ, ಕಣ್ಣೀರು ಹಾಕುತ್ತಾ ಮಾತನಾಡಿದಾಗ ನನಗೂ ವ್ಯಥೆಯಾಗುತ್ತದೆ ಎಂದರು.ಚುನಾವಣೆ ಮುನ್ನಾ ದಿನಗಳಲ್ಲಿ ನನಗೆ ಆರೋಗ್ಯ ಕೈ ಕೊಟ್ಟಿತ್ತು. ಈಗ ಸುಧಾರಣೆಯಾಗಿದೆ. ನನ್ನ ಪಾಡಿಗೆ ನಾನು ನಡೆಯುವಂತಾಗಿದ್ದೇನೆ. ಇಷ್ಟೆಲ್ಲಾ ನೋವು, ನಿರಾಸೆ ಮಧ್ಯೆಯೂ ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸುತ್ತಿದ್ದಾರೆಂಬ ಖುಷಿ ಇದೆ. ಆದರೆ, ಸತತವಾಗಿ ಬಿಜೆಪಿ ಗೆಲ್ಲಿಸುತ್ತಿದ್ದ ದಾವಣಗೆರೆ ಈ ಸಲ ಮೋದಿ ಸರ್ಕಾರದಲ್ಲಿ ತನ್ನ ಕೊಡುಗೆ ನೀಡದ ನೋವಿದೆ ಎಂದು ತಿಳಿಸಿದರು.
ಸೋಲಿನ ಬಗ್ಗೆ ಯಾರನ್ನೂ ದೂಷಿಸುವುದಿಲ್ಲ. ಹಾಗೆ ಮಾಡಿದರೆ ಪ್ರಯೋಜನವೂ ಇಲ್ಲ. ಮತ್ತೆ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿಯನ್ನು ಸಂಘಟಿಸಲು ಶಕ್ತಿ ಮೀರಿ ಶ್ರಮಿಸುತ್ತೇನೆ. ಮುಂಬರುವ ತಾಪಂ, ಜಿಪಂ, ಮಹಾ ನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ, ಮತ್ತೆ ಬಲಿಷ್ಠಗೊಳಿಸಲು ಶ್ರಮಿಸುತ್ತೇವೆ. ನಡೆಯುವ ಮನುಷ್ಯ ಎಡವೋದು ಸಹಜ. ನಾವು ಎಲ್ಲಿ ಎಡವಿದ್ದೇವೆಂಬುದನ್ನು ಅರಿತು, ತಿದ್ದಿಕೊಳ್ಳೋಣ. ನಿಮ್ಮ ಪ್ರೀತಿ, ವಿಶ್ವಾಸ ನಮ್ಮ ಕುಟುಂಬ ಮರೆಯಲ್ಲ. ನೀವೇ ನಮ್ಮ ಕುಟುಂಬಕ್ಕೆ ಆಸ್ತಿ ಎಂದು ಜಿ.ಎಂ.ಸಿದ್ದೇಶ್ವರ ಕಾರ್ಯಕರ್ತರು, ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಸಮೀಕ್ಷೆಯಲ್ಲಿ ಸಿದ್ದೇಶ್ವರ ಹೆಸರೇ ಇತ್ತು. ಆದರೆ, ನಮಗೆ ಟಿಕೆಟ್ ಕೊಡದಂತೆ ಸುಮಾರು 15 ದಿನ ಸಮಸ್ಯೆ ಮಾಡಿದ್ದರು. ಇದರಿಂದ ಚುನಾವಣೆಯ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಬೀರಿದೆ. ಏನೇನು ಆಗಿದೆಯೋ ಅದನ್ನೆಲ್ಲಾ ಸರಿ ಮಾಡೋಣ. ನೀವ್ಯಾರು ಸೋಲಿನ ಬಗ್ಗೆ ನೋವು, ಸಂಕಟಪಡಬೇಡಿ. ನಾವೆಲ್ಲರೂ ಸದಾ ನಿಮ್ಮೊಂದಿಗೆ ಇರುತ್ತೇವೆ. ಮುಂಬರುವ ತಾಪಂ, ಜಿಪಂ, ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುಖಂಡರು, ಕಾರ್ಯಕರ್ತರು ಸಜ್ಜಾಗಿ. ಮತ್ತೆ ಬಿಜೆಪಿಗೆ ಹಳೆಯ ಲಯ ತರೋಣ ಎಂದು ಗಾಯತ್ರಿ ಸಿದ್ದೇಶ್ವರ ಮನವಿ ಮಾಡಿದರು.
- - - ಕೋಟ್ಸ್ ದಾವಣಗೆರೆ ನೂತನ ಸಂಸದರು ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಸರ್ವರನ್ನೂ ಸಮಾನದೃಷ್ಟಿಯಲ್ಲಿ ಕಾಣಲಿ. ಲೋಕಸಭೆ ಚುನಾವಣೆಗೆ ನಾನು ಅಧಿಕಾರಕ್ಕಾಗಿ ಸ್ಪರ್ಧಿಸಿರಲಿಲ್ಲ. ಸೇವೆಗಾಗಿ ಒಪ್ಪಿಕೊಂಡಿದ್ದೆ. ಆದರೂ, ಫಲಿತಾಂಶದಲ್ಲಿ ನಾವು ಸೋತಿದ್ದರೂ, ಗೆಲುವು ನಮ್ಮದೇ ಎಂಬುದನ್ನು ನಾವ್ಯಾರೂ ಮರೆಯಬಾರದು. ದೃತಿಗೆಡಬಾರದು
- - - -9ಕೆಡಿವಿಜಿ3:
ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೆ ಕೃತಜ್ಞತೆ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾರತ ಮಾತೆ, ಬಿಜೆಪಿ ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. -9ಕೆಡಿವಿಜಿ5: