ಅವಧಿಗೂ ಮುಂಚೆ ಬೇಸಿಗೆ ಎದುರಿಸಲು ಸಿದ್ದರಾಗಿ: ಶಾಸಕ ಜಿ.ಬಿ.ಜ್ಯೋತಿಗಣೇಶ್ ಸೂಚನೆ

KannadaprabhaNewsNetwork |  
Published : Feb 15, 2025, 12:31 AM IST
ತುಮಕೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಜ್ಯೋತಿ ಗಣೇಶ್ | Kannada Prabha

ಸಾರಾಂಶ

ಕಳೆದ 6 ವರ್ಷಗಳಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಿದ್ದೇವೆ. ಈ ಬಾರಿಯೂ ಸಹ ಸಾರ್ವಜನಿಕರಿಗೆ ನೀರಿನ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ತುಮಕೂರು

ಈ ಬಾರಿ ಅವಧಿಗೂ ಮುಂಚೆಯೇ ಬೇಸಿಗೆ ಪ್ರಾರಂಭವಾಗಿರುವ ಅನುಭವ ನಮ್ಮೆಲ್ಲರಿಗೂ ಆಗುತ್ತಿದೆ. ತುಮಕೂರು ನಗರದಲ್ಲಿ ನೀರಿನ ಸಮಸ್ಯೆ ಉಂಟಾಗಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಈ ಕೂಡಲೇ ಕಾರ್ಯಪ್ರವೃತ್ತರಾಗಿ ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಬವಣೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಶಾಸಕ ಜ್ಯೋತಿ ಗಣೇಶ್ ಸೂಚಿಸಿದರು.ಶಾಸಕರು ತುಮಕೂರು ಮಹಾನಗರಪಾಲಿಕೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ಪಾಲಿಕೆಯ ಕುಡಿಯುವ ನೀರಿನ ಸಂಗ್ರಹಾರ ಮಟ್ಟ, ನೀರಿನ ಶುದ್ಧೀಕರಣ ಘಟಕಗಳ ಸ್ಥಿತಿ, ಮಹಾನಗರಪಾಲಿಕೆ ಬೋರ್‌ವೆಲ್‌ಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು.ಕಳೆದ 6 ವರ್ಷಗಳಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಿದ್ದೇವೆ. ಈ ಬಾರಿಯೂ ಸಹ ಸಾರ್ವಜನಿಕರಿಗೆ ನೀರಿನ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು ಹಾಗೂ ತುಮಕೂರು ಮಹಾನಗರಪಾಲಿಕೆ ವತಿಯಿಂದ ಟಾಸ್ಕ್ ಫೋರ್ಸ್ ರಚಿಸಿ ನೀರಿನ ಬವಣೆ ಉಂಟಾದ ಪ್ರದೇಶಗಳಲ್ಲಿ ತುರ್ತಾಗಿ ನೀರಿನ ಸಮಸ್ಯೆ ಪರಿಹರಿಸಲು ಸಹಾಯವಾಣಿ ತೆರೆಯಲು ಕ್ರಮಹಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬುಗುಡನಹಳ್ಳಿ ಜಲಸಂಗ್ರಹಾರದಲ್ಲಿ ಪ್ರಸ್ತುತ ದಿನದವರೆಗೂ 231 ಎಂ.ಸಿ.ಎಫ್.ಟಿ ನೀರು ಸಂಗ್ರಹವಾಗಿದ್ದು, ಮುಂದಿನ 2 ತಿಂಗಳವರೆಗೂ ತುಮಕೂರು ನಗರಕ್ಕೆ ನೀರು ಸರಬರಾಜು ಮಾಡಬಹುದು ಹಾಗೂ ಹೆಬ್ಬಾಕ ಅಮಾನಿಕರೆ ಜಲಸಂಗ್ರಹಾರದಲ್ಲಿ ಪ್ರಸ್ತುತ ದಿನದವರೆಗೂ.90 ಎಂ.ಸಿ.ಎಫ್.ಟಿ ನೀರು ಸಂಗ್ರಹವಾಗಿದ್ದು, 60 ಎಂ.ಸಿ.ಎಫ್.ಟಿ ಯಷ್ಟು ಬಳಸಲು ಯೋಗ್ಯವಾಗಿದೆ ಎಂದು ಅಧಿಕಾರಿಗಳು ಶಾಸಕರಿಗೆ ತಿಳಿಸಿದರು. ಬೇಸಿಗೆ ಕಾಲವಾಗಿರುವುದರಿಂದ ನೀರಿನ ಬೇಡಿಕೆ ಅತ್ಯಂತ ಹೆಚ್ಚಿರುತ್ತದೆ. ಜಲ ಶುದ್ಧೀಕರಣ ಘಟಕದಲ್ಲಿ ನೀರು ಶುದ್ಧೀಕರಿಸಲು ಇರುವ ಮೋಟಾರ್ ಪಂಪುಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಿ ಹಾಗೂ ಹೆಚ್ಚುವರಿಯಾಗಿ ಇನ್ನು ಎರೆಡೆರಡು ಮೋಟಾರ್ ಪಂಪುಗಳನ್ನು ದಾಸ್ತಾನು ಮಾಡಿಟ್ಟುಕೊಂಡಿರಿ ಯಾವ ಸಂದರ್ಭದಲ್ಲಿಯೂ ಮೋಟಾರ್ ಪಂಪ್‌ಗಳ ಸಮಸ್ಯೆ ಉಂಟಾಗದಂತೆ ಕ್ರಮವಹಿಸಿ, ಮುನ್ನೆಚರಿಕೆಯಾಗಿ ವಾಟರ್ ಟ್ಯಾಂಕರ್‌ಗಳನ್ನು ಸಹ ಸುಸ್ಥಿತಿಯಲ್ಲಿಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ತುಮಕೂರು ಮಹಾನಗರಪಾಲಿಕೆಯ ಬೋರ್‌ವೆಲ್‌ಗಳ ಇಂದಿನ ಸ್ಥಿತಿಗತಿಯ ಬಗ್ಗೆ ಶೀಘ್ರವಾಗಿ ಮಾಹಿತಿ ನೀಡಿ, ದುರಸ್ಥಿ ಮಾಡಬೇಕಾಗಿರುವ ಬೋರ್‌ವೆಲ್‌ಗಳನ್ನು ತಕ್ಷಣವೇ ದುರಸ್ಥಿ ಮಾಡಲು ಶೀಘ್ರ ಕ್ರಮವಹಿಸಲು ಶಾಸಕರು ನಿರ್ದೇಶನ ನೀಡಿದರು. ಶುಚಿತ್ವಕ್ಕೆ ಆದ್ಯತೆ ನೀಡಿ: ಬೇಸಿಗೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಹರಡುವುದರಿಂದ ವಾರ್ಡ್ಗಳಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಯು.ಜಿ.ಡಿ ನೀರು ರಸ್ತೆಗಳಲ್ಲಿ ನಿಲ್ಲದಂತೆ, ಯು.ಜಿ.ಡಿ ಚೇಂಬರ್‌ಗಳಲ್ಲಿ ಕೊಳಚೆ ನೀರು ತುಂಬಿ ಹರಿಯದಂತೆ ಮುಂಜಾಗ್ರತೆ ವಹಿಸಿ. ಕೆಲವು ವಾರ್ಡ್ಗಳಲ್ಲಿ ೨ನೇ ಹಂತದ ಒಳಚರಂಡಿ ವ್ಯವಸ್ಥೆ ಲಿಂಕ್ ಆಗದೇ ಇರುವ ಕಾರಣ ಅಲ್ಲಲ್ಲಿ ಪಿಟ್‌ಗಳಲ್ಲಿ ಕೊಳಚೆ ನೀರು ಸಂಗ್ರಹವಾಗಿದ್ದು, ಜನವಸತಿ ಬಡಾವಣೆಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿದ್ದು, ಹಲವಾರು ದೂರುಗಳು ನನ್ನ ಗಮನಕ್ಕೆ ಬಂದಿದ್ದು, ತಕ್ಷಣವೇ ಈ ಸಮಸ್ಯೆಯನ್ನು ಬಗೆಹರಿಸಲು ಮಹಾನಗರಪಾಲಿಕೆಯ ಅಧಿಕಾರಿಗಳು ಮುಂದಾಗಬೇಕೆಂದು ಶಾಸಕರು ಸೂಚನೆ ನೀಡಿದರು. ನೀರನ್ನು ಮಿತವಾಗಿ ಬಳಸಲು ಸಾರ್ವಜನಿಕರಿಗೆ ಶಾಸಕರ ಮನವಿ: ವಾಡಿಕೆಗಿಂತ ಮುಂಚೆಯೇ ಈ ಬಾರಿ ಬೇಸಿಗೆಯು ಪ್ರಾರಂಭವಾಗಲಿದ್ದು, ಹವಮಾನ ಇಲಾಖೆಯ ವರದಿಯಂತೆ ಹೆಚ್ಚು ಉಷ್ಣಾಂಶ ತುಮಕೂರು ಜಿಲ್ಲೆಯಲ್ಲಿ ಇರಲಿದೆ. ನೀರಿನ ಅವಶ್ಯಕತೆ ಈ ಬಾರಿ ಹೆಚ್ಚಾಗಿರುವುದರಿಂದ ಸಾರ್ವಜನಿಕರು ನೀರನ್ನು ಪೋಲು ಮಾಡದೆ ಮಿತವಾಗಿ ಬಳಸಬೇಕೆಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ರವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಕಾರ್ಯಪಾಲಕ ಇಂಜಿನಿಯರಾದ ಪ್ರವೀಣ್, ಸಂದೀಪ್ ಹಾಗೂ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರಾದ ಸುಪ್ರಿಯ, ಪವನ್ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಕ್ಯಾಲಿಗ್ರಫಿಗೆ ಲಭಿಸಿದ ಅಂತಾರಾಷ್ಟ್ರೀಯ ಪ್ರಶಸ್ತಿ
569 ಲೈಸೆನ್ಸ್‌ ಇ-ಹರಾಜಿಗೆ ಮುಂದಾದ ಅಬಕಾರಿ ಇಲಾಖೆ