ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಆರ್ಎಸ್ಎಸ್ ಮುಖಂಡ ಸೋಮನಾಥ ಗೊಂಬಿ ಪುತ್ರಿ ಲಕ್ಷ್ಮೀ ಜೊತೆಗೆ ಯೋಧ ರಬಕವಿಯ ಕಿರಣ ಮಹಾಲಿಂಗಪ್ಪ ಕಳ್ಳಿಗುದ್ದಿ ವಿವಾಹ ಫೆ.19ರಂದು ನಿಶ್ಚಯವಾಗಿದೆ. ಮನೆ ಮನೆಗೆ ಮದುವೆಯ ಆಮಂತ್ರಣ ಜೊತೆ ೨೫೦ ಗ್ರಾಂ ತೂಕದ ಪಂಚಲೋಹದ `ಸಿಯಾ ರಾಮ್’ ಮೂರ್ತಿಯನ್ನು ನೀಡುವ ಮೂಲಕ ಮದುವೆ ಕಾರ್ಯಕ್ರಮ ಸ್ಮರಣೀಯವಾಗಿಸಲು ಹೊರಟಿದ್ದಾರೆ.
ಹಿಂದು ಧರ್ಮದ ಸಂಕೇತವಾಗಿರುವ `ಸಿಯಾ ರಾಮ್’ ಮೂರ್ತಿ ಎಲ್ಲರ ಮನೆಗಳಲ್ಲಿರಬೇಕು. ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಐತಿಹಾಸಿಕ ಕ್ಷಣವಾಗಿದ್ದು, ಈ ಸುವರ್ಣ ಸಂದರ್ಭದಲ್ಲಿ ನಮ್ಮ ಪುತ್ರಿ ವಿವಾಹದ ಸವಿನೆನಪಿಗಾಗಿ ಸುಮಾರು ₹ ೧೫೦೦ ಮೌಲ್ಯದ ಮೂರ್ತಿ ನೀಡುತ್ತಿದ್ದೇನೆ. ನಾಡಿನ ವಿವಿಧ ಮಠಾಧೀಶರು ಹಾಗೂ ಗಣ್ಯರು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘ ನಿಷ್ಠ ಹಿರಿಯರಾದ ಸೋಮನಾಥ ಹೇಳಿದ್ದಾರೆ.------
-ಸೋಮನಾಥ ಗೊಂಬಿ, ಬನಹಟ್ಟಿಯ ಆರ್ಎಸ್ಎಸ್ ಹಿರಿಯ ಕಾರ್ಯಕರ್ತ ಮತ್ತು ಅಧ್ಯಕ್ಷರು, ಬಾಗಲಕೋಟೆ ಜಿಲ್ಲಾ ಹಟಗಾರ ಸಮಾಜ.