ಯಾದಗಿರಿ: ಮನೆ ಮೇಲ್ಛಾವಣಿ ಕುಸಿದು 12 ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ದುರ್ಘಟನೆ ಅರಕೇರಾ (ಕೆ) ಗ್ರಾಮದಲ್ಲಿ ಗುರುವಾರ ನಡೆದಿದೆ. ಅರಕೇರಾ (ಕೆ) ಗ್ರಾಮದ ಭಾಗ್ಯಶ್ರೀ ತಂದೆ ನಿಂಗಪ್ಪ (12) ಮೃತ ದುರ್ದೈವಿ. ನಿರಂತರ ಮಳೆಗೆ ಅವರ ಹಳೆಯ ಮನೆ ನೆನೆದಿತ್ತು, ಗುರುವಾರ ಸಹೋದರನಿಗೆ ಅಡುಗೆ ತರಲೆಂದು ಕೋಣೆಗೆ ತೆರಳಿದ್ದ ಬಾಲಕಿ ಮೇಲೆ ಏಕಾಏಕಿ ಮೇಲ್ಛಾವಣಿ ಕುಸಿದು, ಅಲ್ಲಿನ ಕಲ್ಲು, ಮಣ್ಣು ಕಟ್ಟಿಗೆಗಳು ತಲೆ ಮೇಲೆ ಬಿದ್ದ ಪರಿಣಾಮ ತೀವ್ರ ಗಾಯಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆದಲ್ಲಿಯೇ ಭಾಗ್ಯಶ್ರೀ ಸಾವನ್ನಪ್ಪಿದ್ದಾಳೆ. ಘಟನಾ ಸ್ಥಳಕ್ಕೆ ಗುರುಮಠಕಲ್ ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿದ್ದು, ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
12ವೈಡಿಆರ್15 : ಮೇಲ್ಛಾವಣಿ ಕುಸಿದು ಮೃತಪಟ್ಟ ಬಾಲಕಿ ಭಾಗ್ಯಶ್ರೀ.