ಕನ್ನಡಪ್ರಭ ವಾರ್ತೆ ಕೋಟ
ಅವರು ಇಲ್ಲಿನ ಕೋಡಿ ಕನ್ಯಾನದ ಮಹಾಸತೀಶ್ವರಿ ದೇಗುಲದ ವಠಾರದಲ್ಲಿ ಸ್ಥಳೀಯ ಪ್ರಗತಿ ಯುವಕ ಸಂಘದ ತ್ರೀಂಶತಿ ಮಹೋತ್ಸವ - ಪ್ರಗತಿ ಪಥ ಪ್ರಯುಕ್ತ ಆಯೋಜಿಸಲಾದ ಭಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಆರ್ಥಿಕ ಬಡತನವಿದ್ದರೂ, ಪ್ರತಿ ಮನೆಯಲ್ಲಿ ಭಜನೆಗೆ ಆದ್ಯತೆ ನೀಡುತ್ತಿದ್ದರು. ಆದ್ದರಿಂದಲೇ ಬದುಕಿನ ಕಷ್ಟಗಳಿಗೆ ಪರಿಹಾರ ದೊರೆಯುತ್ತಿತ್ತು. ಪ್ರಗತಿ ಸಂಘದವು ಭಜನಾ ಸಂಕೀರ್ತನೆಗೆ ಒತ್ತು ನೀಡಿರುವುದು ಶ್ಲಾಘನೀಯ ಎಂದು ಹಾರೈಸಿದರು.ಈ ಸಂದರ್ಭ ಭಜನಾಕಾರರು, ಶನೀಶ್ವರ ಕಥಾ ಶ್ರವಣಕಾರರಾದ ಸಂಜೀವ ಪೂಜಾರಿ ಕೋಡಿ, ಚಂದ್ರಶೇಖರ್ ಅಮೀನ್, ಅಣ್ಣಪ್ಪ ಸಾಲಿಯಾನ್ ಅವರನ್ನು ಸನ್ಮಾನಿಸಲಾಯಿತು.
ಸಂಘದ ತ್ರೀಂಶತಿ ಮಹೋತ್ಸವದ ಅಧ್ಯಕ್ಷ ಸಂತೋಷ್ ಅಮೀನ್ ಪ್ರಾಸ್ತಾವನೆ, ಶ್ರೀ ಮಹಾಸತೀಶ್ವರಿ ದೇಗುಲದ ಅಧ್ಯಕ್ಷ ದೇವದಾಸ್ ಸಾಲಿಯಾನ್ ಶುಭಾಶಂಶನೆಗೈದರು. ಕಾರ್ಯದರ್ಶಿ ಪ್ರವೀಣ್ ಕಾಂಚನ್ ಸ್ವಾಗತಿಸಿದರು. ಮಂಜುನಾಥ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿದರು. ನಂತರ ರಾಜ್ಯ ವಿವಿಧ ಭಾಗಗಳಿಂದ ಆಗಮಿಸಿದ ಭಜನಾ ತಂಡದಿಂದ ಭಜನಾ ಕುಣಿತ ಭಜನಾ ಸ್ಪರ್ಧೆ ಸಂಪನ್ನಗೊಂಡಿತು.