ಕನ್ನಡಪ್ರಭವಾರ್ತೆ ಕೆರೂರ
ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ನೂತನ ಅಕ್ಕಮಹಾದೇವಿ ಮಹಿಳಾ ಬಣಜಿಗ ಸಂಘಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳೆ ಮನಸು ಮಾಡಿದರೆ ಏನನ್ನಾದರೂ ಸಾಧಿಸ ಬಲ್ಲಳು. ಕುಟುಂಬ ನಿರ್ವಹಣೆಯಲ್ಲಿ ಸ್ತ್ರೀಯರಿಗೆ ಇರುವ ಶ್ರದ್ಧೆ, ತಾಳ್ಮೆ, ಆತ್ಮ ವಿಶ್ವಾಸ ಸಮಾಜದ ಮೇಲೆಯೂ ಇರಲಿ. ಸಮಾಜ ಸಂಘಟನೆಯಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ. ಹೆಣ್ಣು ಮಕ್ಕಳಿಗೆ ಸರ್ಕಾರದ ಸೌಲಭ್ಯ ಪಡೆಯಲು ಸಂಘಟನೆ ಅವಶ್ಯ ಇದೆ ಎಂದರು.
ಬಣಜಿಗ ಸಂಘದ ಅಧ್ಯಕ್ಷ ಚನ್ನಮಲ್ಲಪ್ಪ ಘಟ್ಟದ, ಶಿಕ್ಷಕ ಬಿ.ಸಿ ಪ್ಯಾಟಿ ಮಾತನಾಡಿ, ಬಣಜಿಗ ಸಮಾಜ ಮೊದಲಿನಿಂದಲು ಬಸವಾದಿ ಶರಣರ ಆದರ್ಶಗಳನ್ನು ಅಳವಡಿಸಿಕೊಂಡು ಬಂದಿದೆ. ಸಮಾಜದ ಮಕ್ಕಳು ಪ್ರಮುಖವಾಗಿ ವಿಭೂತಿ, ಲಿಂಗಪೂಜೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು. ತಪ್ಪುದಾರಿ ತುಳಿಯುವ ಮಕ್ಕಳನ್ನು ಸರಿದಾರಿಗೆ ತರುವಲ್ಲಿ ತಾಯಂದಿರ ಪಾತ್ರವು ಮುಖ್ಯ ಎಂದು ಹೇಳಿದರು.ಉರ್ದು ಹೆಣ್ಣು ಮಕ್ಕಳ ಶಾಲೆ ಗುರುಮಾತೆ ಅನಸೂಯಾ ಪಟ್ಟಣಶೆಟ್ಟಿ ಮಾತನಾಡಿ, ಕೂಡಿ ಬಾಳಿದರೆ ಸ್ವರ್ಗ ಸುಖ ದೊರೆಯುವುದು. ಹಿರಿಯರ ಈ ಮಾತಿನಂತೆ ನಾವೆಲ್ಲ ಒಟ್ಟಾಗಿ ಬಾಳಿದರೆ ನಮ್ಮ ಬಾಳು ಜೇನುಗೂಡಿನಂತಾಗುತ್ತದೆ. ನಾವೆಲ್ಲ ನಮ್ಮ ಬಿಡುವಿನ ಸಮಯವನ್ನು ಸಮಾಜ ಸಂಘಟನೆಗೆ ಮೀಸಲಿಡೋಣ ಎಂದರು.
ಮಹಾನಂದಾ ಕಲ್ಯಾಣಶೆಟ್ಟಿ ನಿರೂಪಿಸಿದರು.ನಂದಾ ಹುಂಡೇಕಾರ ವಂದಿಸಿದರು.