- ಭಿಕ್ಷೆಯಂತೆ ಪರಿಹಾರ ನೀಡುತ್ತಿರುವ ಸರ್ಕಾರ: ಕುರುಬೂರು ಶಾಂತಕುಮಾರ ಆಕ್ರೋಶ - - -
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎನ್ಡಿಆರ್ಎಫ್ ಮಾನದಂಡಕ್ಕೆ ತಿದ್ದುಪಡಿ ತಂದು, ಬೆಳೆ ನಷ್ಟದ ಸಂಪೂರ್ಣ ಹಣವನ್ನು ಪರಿಹಾರವಾಗಿ ನೀಡಬೇಕು. ಇಲ್ಲದಿದ್ದರೆ ಬರ ಹಾಗೂ ಅತಿವೃಷ್ಟಿಯಿಂದಾಗಿ ಹಾನಿಗೊಳಗಾದ ರೈತರ ಎಲ್ಲ ಬೆಳೆಗಳಿಗೂ ಅನ್ವಯ ಆಗುವಂತೆ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ನೀತಿ ಜಾರಿಗೆ ತರಬೇಕು ಎಂದರು.
ರಾಜ್ಯದಲ್ಲಿ ಹೈನುಗಾರಿಕೆ ರೈತರಿಗೆ ಹಾಲಿನ ಪ್ರೋತ್ಸಾಹಧನ ಲೀಟರ್ಗೆ ₹5 ರಂತೆ ನೀಡುತ್ತಿರುವುದನ್ನು 8 ತಿಂಗಳಿನಿಂದ ನೀಡಿಲ್ಲ. ಪಶು ಆಹಾರದ ಬೆಲೆ, ಅವುಗಳ ತಿನಿಸುಗಳ ಬೆಲೆಯೂ ಏರಿಕೆಯಾಗಿದೆ. ಇದರಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆ ಸುಮಾರು ₹750 ಕೋಟಿ ತಕ್ಷಣ ಹೈನುಗಾರಿಕೆ ರೈತರಿಗೆ ಬಿಡುಗಡೆ ಮಾಡಿ, ರೈತರನ್ನು ರಕ್ಷಿಸಬೇಕು ಎಂದು ಹೇಳಿದರು.ಬರದಿಂದಾಗಿ ರಾಜ್ಯದಲ್ಲಿ ಶೇ.30ರಷ್ಟು ಕಬ್ಬಿನ ಬೆಳೆ ಸಂಪೂರ್ಣ ಒಣಗಿಹೋಗಿದೆ. ಪರಿಹಾರ ನೀಡುವಾಗ ನಷ್ಟವಾದ ಕಬ್ಬಿನ ಬೆಳೆಯನ್ನೂ ಸರ್ಕಾರವು ಪರಿಗಣಿಸಬೇಕು. ಕಬ್ಬಿನ ಬೆಳೆ ಹಾನಿಗೂ ಪರಿಹಾರ ನೀಡಬೇಕು. ಈಗಾಗಲೇ ರೈತರು ಕೃಷಿ ಚಟುವಟಿಕೆ ಆರಂಭಿಸಲು ಸನ್ನದ್ಧರಾಗುತ್ತಿದ್ದಾರೆ. ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರವು ರೈತರಿಗೆ ಸಮರ್ಪಕವಾಗಿ ಸಿಗುವಂತೆ ಕೃಷಿ ಇಲಾಖೆ ಬದ್ಧತೆಯಿಂದ ಕ್ರಮ ಕೈಗೊಳ್ಳಬೇಕು. ನಕಲಿ ಬಿತ್ತನೆ ಬೀಜ ಮಾರಾಟ ಮಾಡುವರು, ಕಾಳಸಂತೆಯಲ್ಲಿ ಗೊಬ್ಬರ-ಬೀಜ ಮಾರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
- - -
ಕನ್ನಡಪ್ರಭ ವಾರ್ತೆ, ದಾವಣಗೆರೆ ಭದ್ರಾ ಅಚ್ಚುಕಟ್ಟು ವ್ಯಾಪ್ತಿ ನಾಲೆಗೆ ನೀರು ಬಿಡುವುದಾಗಿ ಹೇಳಿ, ಅದನ್ನು ಭದ್ರಾ ಕಾಡಾ ಸಮಿತಿ, ಸರ್ಕಾರವು ಹುಸಿಗೊಳಿಸಿದೆ. ಇದರಿಂದಾಗಿ ಸುಮಾರು 5 ಸಾವಿರ ಎಕರೆ ಕಬ್ಬಿನ ಬೆಳೆ, ಅಡಕೆ, ತೆಂಗು, ಬಾಳೆ, ಮಾವು, ಪಪ್ಪಾಯಿ ಸೇರಿದಂತೆ ತೋಟದ ಬೆಳೆಗಳು ನಾಶವಾಗಿವೆ. ಅಕಾಲಿಕ ಮಳೆಯಿಂದಾಗಿ ಬತ್ತದ ಬೆಳೆಯೂ ನಾಶವಾಗಿದೆ ಎಂದು ಕುರುಬೂರು ಶಾಂತಕುಮಾರ ಹೇಳಿದರು.
ಗ್ರಾಮೀಣರ ಹೆಸರಿನಲ್ಲಿ ಆರಂಭವಾಗ ಗ್ರಾಮೀಣ ಬ್ಯಾಂಕೇ ಈಗ ರೈತರಿಗೆ ಹೆಚ್ಚು ಕಿರುಕುಳ ನೀಡಿ, ವಂಚಿಸುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್ಗಳಂತೂ ರೈತರನ್ನು ಭಿಕ್ಷುಕರಂತೆ ಕಾಣುತ್ತಿವೆ. ತಕ್ಷಣ ಬ್ಯಾಂಕ್ಗಳ ಸಾಲ ನೀತಿ ಬದಲಾವಣೆ ಆಗಬೇಕು. ಕೃಷಿ ಜಮೀನಿನ ಮೌಲ್ಯಕ್ಕೆ ಅನುಗುಣವಾಗಿ ಸಾಲ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಸರ್ಕಾರಗಳಿಗೆ ಶಾಂತಕುಮಾರ ಒತ್ತಾಯಿಸಿದರು.
- - -
ದಾವಣಗೆರೆಯಲ್ಲಿ ಮಂಗಳವಾರ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.