ವಿಷ ಕೊಡಿ, ಇಲ್ಲ ಮನೆ ಕಟ್ಟಲು ಅನುಮತಿ ಕೊಡಿ: ಕುಟುಂಬಸ್ಥರ ಅಳಲು

KannadaprabhaNewsNetwork |  
Published : Feb 04, 2024, 01:31 AM IST
3ಎಚ್ಎಸ್ಎನ್5 : ಬೇಲೂರು ನಗರದ 11ನೇ ವಾರ್ಡಿನಲ್ಲಿ ವಾಸವಾಗಿರುವ ಭದ್ರೆಗೌಡ ಹಾಗೂ ಕುಟುಂಬದವರು ಮಾತನಾಡಿದರು. | Kannada Prabha

ಸಾರಾಂಶ

ಪಟ್ಟಣದ 11ನೇ ವಾರ್ಡಿನಲ್ಲಿ ವಾಸವಾಗಿರುವ ಭದ್ರೆಗೌಡ ಎಂಬುವರು ವಾಸಿಸುತ್ತಿದ್ದ ಮನೆಯು ಕಳೆದ ಮಳೆಗಾಲದಲ್ಲಿ ಬಿದ್ದುಹೋದ ಕಾರಣ, ಬೇರೆ ಮನೆಯನ್ನು ಅದೇ ಜಾಗದಲ್ಲಿ ಕಟ್ಟಲು ಅನುಮತಿಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರೂ ಸಂಬಂಧಪಟ್ಟ ಇಲಾಖೆ ಅನುಮತಿ ನೀಡುತ್ತಿಲ್ಲ .

ಕನ್ನಡಪ್ರಭ ವಾರ್ತೆ ಬೇಲೂರು ಪಟ್ಟಣದ 11ನೇ ವಾರ್ಡಿನಲ್ಲಿ ವಾಸವಾಗಿರುವ ಭದ್ರೆಗೌಡ ಎಂಬುವರು ವಾಸಿಸುತ್ತಿದ್ದ ಮನೆಯು ಕಳೆದ ಮಳೆಗಾಲದಲ್ಲಿ ಬಿದ್ದುಹೋದ ಕಾರಣ, ಬೇರೆ ಮನೆಯನ್ನು ಅದೇ ಜಾಗದಲ್ಲಿ ಕಟ್ಟಲು ಅನುಮತಿಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರೂ ಸಂಬಂಧಪಟ್ಟ ಇಲಾಖೆ ಅನುಮತಿ ನೀಡುತ್ತಿಲ್ಲ . ವಿಷ ಕೊಡಿ, ಇಲ್ಲಾ ಮನೆ ಕಟ್ಟಲು ಅನುಮತಿ ಕೊಡಿ ಎಂದು ಕುಟುಂಬದವರು ತಮ್ಮ ಅಸಹಾಯಕತೆ ತೋಡಿಕೊಂಡರು.

ಭದ್ರೆಗೌಡ ಹಾಗೂ ದಂಪತಿಗಳು ಪತ್ರಿಕೆಯೊಂದಿಗೆ ತಮ್ಮ ಅಳಲನ್ನು ತೋಡಿಕೊಂಡು ನಾವು ಸುಮಾರು ವರ್ಷಗಳಿಂದ ಈ ಮನೆಯಲ್ಲಿ ವಾಸವಾಗಿದ್ದು, ಕಳೆದ ಮಳೆಗಾಲದಲ್ಲಿ ನಮ್ಮ ಮನೆಯು ಬಿದ್ದುಹೋಗಿತ್ತು. ನಂತರದಲ್ಲಿ ಹೊಸ ಮನೆಯನ್ನು ನಿರ್ಮಾಣ ಮಾಡಲು ನಮಗೆ ಅನುಮತಿ ನೀಡಿ ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ಆದರೆ ಪುರತತ್ವ ಇಲಾಖೆಯವರು ನಮಗೆ ಅನುಮತಿಯನ್ನು ನೀಡುತ್ತಿಲ್ಲ, ನಮಗೆ ವಾಸಿಸಲು ಮನೆ ಇಲ್ಲ ನಾವು ಎಲ್ಲಿಗೆ ಹೋಗಬೇಕು, ಇತ್ತ ಬದುಕಲು ಬಿಡುತ್ತಿಲ್ಲ ಅತ್ತ ಸಾಯಲು ಬಿಡುತ್ತಿಲ್ಲ ನಮಗೆ ಸ್ವಲ್ಪ ವಿಷವನ್ನಾದರೂ ನೀಡಿ ಎಂದು ಬೇಸರದಿಂದ ನುಡಿದು ಇಲಾಖೆಯವರು ನಮಗೆ ತುಂಬಾ ತೊಂದರೆ ಕೊಡುತ್ತಿದ್ದಾರೆ ಎಂದರು.

ಬಿಜೆಪಿ ಮುಖಂಡ ಹಾಗೂ ನಿವಾಸಿ ಹೇಮಣ್ಣ ಮಾತನಾಡಿ, ನಾವು ಇಲ್ಲಿ ಬಹಳ ವರ್ಷಗಳಿಂದ ವಾಸವಾಗಿದ್ದೇವೆ, ಒಂದು ಸಣ್ಣ ಮನೆಯನ್ನು ಕಟ್ಟಲು ಅನುಮತಿ ನೀಡದ ಸರ್ಕಾರಕ್ಕೆ ದಿಕ್ಕಾರ, ಉಳ್ಳವರಿಗೆ ಮನೆ ಅಥವಾ ಕಟ್ಟಡ ಕಟ್ಟಿಕೊಳ್ಳಲು ಅನುಮತಿ ಹೇಗೋ ದೊರೆಯುತ್ತದೆ ಆದರೆ ನಮ್ಮಂತ ಬಡವರಿಗೆ ಅನುಮತಿ ದೊರೆಯುವುದು ಕಷ್ಟಕರವಾಗಿದೆ, ಅನುಮತಿ ನೀಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದರು.

ಈ ವೇಳೆ ವಾರ್ಡಿನ ನಿವಾಸಿಗಳಾದ ಕಮಲಮ್ಮ,ಪ್ರಕಾಶ್, ಸವಿತಾ, ಲಕ್ಷ್ಮಿ, ಮೀನಾಕ್ಷಿ, ದುರ್ಗಮ್ಮ, ರಾಜಣ್ಣ, ಲೀಲಾವತಿ ಇನ್ನೂ ಮುಂತಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ