ಕನ್ನಡಪ್ರಭ ವಾರ್ತೆ ನಾಗಮಂಗಲ
ಸಾಹಿತ್ಯ ಮತ್ತು ಜಾನಪದ ಕ್ಷೇತ್ರದಿಂದ ಮದ್ದೂರು ತಾಲೂಕಿನ ಹಿರೇಗೌಡನದೊಡ್ಡಿ ಗ್ರಾಮದ ಡಾ.ರಾಮೇಗೌಡ, ಸಮಾಜ ಸೇವಾ ಕ್ಷೇತ್ರದಿಂದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕೊಳವಾರ ಗ್ರಾಮದ ಹಿರಿಯಣ್ಣ ಹೆಗಡೆ, ಜಾನಪದ ಕ್ಷೇತ್ರದಿಂದ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಶ್ರೀಕೃಷ್ಣ ಪಾರಿಜಾತ ಮತ್ತು ದೊಡ್ಡಾಟದ ಜಾನಪದ ಕಲಾವಿದೆ ಮಲ್ಲವ್ವ ಬಸಪ್ಪ ಮೆಗೇರಿ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಎಚ್.ಡಿ.ಕೋಟೆ ತಾಲೂಕಿನ ಕೊತ್ತಲಗಾಲ ಗ್ರಾಮದ ಪ್ರೊ.ಕೆ.ಪಿ.ಬಸವೇಗೌಡ ಅವರಿಗೆ 50 ಸಾವಿ ರು. ನಗದು ಸೇರಿದಂತೆ ವಿಶೇಷ ಸ್ಮರಣಿಕೆ, ಪ್ರಶಸ್ತಿ ಪತ್ರ, ಭೈರವೈಕ್ಯಶ್ರೀಗಳ ಪುತ್ಥಳಿ, ಏಲಕ್ಕಿ ಹಾರ, ಕ್ಷೇತ್ರದ ಗ್ರಂಥಗಳು, ಫಲತಾಂಬೂಲವನ್ನೊಳಗೊಂಡ ಚುಂಚಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನ್ಯಾಯಾಂಗ ಕ್ಷೇತ್ರದ ಸೇವೆಗಾಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದ ತಾಲೂಕಿನ ಕಂಚನಹಳ್ಳಿ ಕೆ.ಎನ್. ಪುಟ್ಟೇಗೌಡರು ಅನಾರೋಗ್ಯದ ನಿಮಿತ್ತ ಗೈರಾಗಿದ್ದರು.ಪ್ರಶಸ್ತಿ ಸ್ವೀಕಾರ ಖುಷಿ ತಂದಿದೆ:
ಮೆರವಣಿಗೆಯಲ್ಲಿ ಜನಪದರು ಹಾಡು ಹಾಡುತ್ತಾ, ಶ್ರೀಗಳಿಗೆ ಮತ್ತು ಪ್ರಶಸ್ತಿ ಪುರಸ್ಕೃತರಿಗೆ ನಮಸ್ಕಾರ ಮಾಡುತ್ತಿದ್ದರು. ಇಂತಹದ್ದೊಂದು ಭಾವ ಹುಟ್ಟುವುದು. ಜನಪದ ಹಾಗೂ ಗ್ರಾಮೀಣ ಪ್ರದೇಶದ ಜನರಲ್ಲಿ ಮಾತ್ರ. ಅಂತಹ ಜನಪದರ ನಡುವೆ ಪ್ರಶಸ್ತಿ ಸ್ವೀಕರಿಸಿರುವುದು ಖುಷಿ ತಂದಿದೆ ಎಂದು ಶ್ರೀಮಠದ ಕಾರ್ಯವನ್ನು ಶ್ಲಾಘಿಸಿದರು.
ಸಾನಿಧ್ಯ ವಹಿಸಿದ್ದ ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳು ಮಾತನಾಡಿ, ಜಾನಪದವು ದೀರ್ಘಕಾಲದ ಬೇರು, ಈ ಬೇರನ್ನು ಮರೆತರೆ ಭವಿಷ್ಯವಿಲ್ಲ, ಮೂಲವನ್ನು ಕಾಪಾಡುವ ಜವಾಬ್ದಾರಿ ನಮ್ಮದು ಜಾನಪದದ ಬೇರನ್ನು ಉಳಿಸಿ ಬೆಳೆಸಿ ಎಂದರು.
ನಾಗಮಂಗಲವು ಜಾನಪದದ ಗಂಗೋತ್ರಿ. ಭೈರವೈಕ್ಯಶ್ರೀಗಳ ವಾರ್ಷಿಕ ಪಟ್ಟಾಭಿಷಕ ಮಹೋತ್ಸವದ ಪ್ರಯುಕ್ತ ಈ ಜಾನಪದ ಜಾತ್ರೆಯೊಂದಿಗೆ ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದ ಐವರು ಸಾಧಕರಿಗೆ ಚುಂಚಶ್ರೀ ಪ್ರಶಸ್ತಿ ನೀಡುತ್ತಿರುವುದು ಶ್ರೀ ಮಠದ ಸಂಕಲ್ಪವಾಗಿದೆ. ನಿಜದ ಬದುಕು ಹಳ್ಳಿಯಲ್ಲಿದೆ ಅಲ್ಲಿಂದಲೇ ಜನಪದ ಆರಂಭವಾಗುವುದು ಎಂದು ಆಶೀರ್ವದಿಸಿದರು.
ಸಂಜೆ 7 ಗಂಟೆಗೆ ಶ್ರೀಕ್ಷೇತ್ರದ ಜೋಡಿ ರಸ್ತೆಯಲ್ಲಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥಶ್ರೀಗಳ ಸರ್ವಾಲಂಕೃತ ಮುತ್ತಿನ ಪಾಲಕಿ ಉತ್ಸವ ಹಾಗೂ ಜಾನಪದ ಕಲಾವಿದರ ವರ್ಣರಂಜಿತ ಮೆರವಣಿಗೆ ನಡೆಯಿತು. ನಂತರ ಶ್ರೀ ಕಾಲಭೈರವೇಶ್ವರಸ್ವಾಮಿ ಪುಷ್ಕರಣೆಯಲ್ಲಿ ತೆಪ್ಪೋತ್ಸವ ಜರುಗಿತು.ಇಂದು ಶ್ರೀಗುರು ಸಂಸ್ಮರಣೋತ್ಸವ: