ಅಭಿವೃದ್ಧಿಗೆ ಆದ್ಯತೆ ನೀಡುವೆ: ಶಾಸಕ ಕಂದಕೂರು

KannadaprabhaNewsNetwork |  
Published : Aug 28, 2024, 12:46 AM IST
ಗುರುಮಠಕಲ್ ತಾಲೂಕಿನ ಗಿದ್ದಬಂಡಾ ತಾಂಡಾ (ಜಿ.ಬಿ. ತಾಂಡಾ) ದಲ್ಲಿ ನಡೆದ ಸಿಸಿ ರಸ್ತೆ ಕಾಮಗಾರಿಗಳ ಅಡಿಗಲ್ಲು ಸಮಾರಂಭವನ್ನು ಶಾಸಕ ಶರಣಗೌಡ ಕಂದಕೂರು ಅವರು ಉದ್ಘಾಟಿಸಿದರು. | Kannada Prabha

ಸಾರಾಂಶ

2023-24ನೇ ಸಾಲಿನ ಅನುದಾನದ ಕೊನೆಯ ಕಾಮಗಾರಿಯಿದು. ಮುಂದೆ ಪ್ರಸಕ್ತ ಸಾಲಿನ ಅನುದಾನದಲ್ಲಿ ಕಾಮಗಾರಿಗಳನ್ನು ಕ್ಷೇತ್ರದ ಅಭಿವೃದ್ಧಿಗೆ ಪೂರಕ ಮತ್ತು ಜನರ ಬಹು ದಿನಗಳ ಅತ್ಯವಶ್ಯಕ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ಮೇರೆಗೆ ಹಂಚಿಕೆ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಗುರುಮಠಕಲ್

ಸರ್ಕಾರದಿಂದ ಬಂದ ಅನುದಾನವನ್ನು ಸುಮ್ಮನೆ ಬಳಕೆ ಮಾಡಿಲ್ಲ. ಈ ಹಿಂದೆ ನಾನು ಪಾದಯಾತ್ರೆ ಮಾಡಿದ ವೇಳೆ, ನಮ್ಮ ತಂದೆ ದಿ. ನಾಗನಗೌಡರ ಅವಧಿಯಲ್ಲಿ ಕ್ಷೇತ್ರದ ಜನತೆ ನೀಡಿದ ಸಮಸ್ಯೆಗಳ ಮತ್ತು ಬೇಡಿಕೆಗಳ ಪಟ್ಟಿಯನ್ನು ಜತೆಗಿರಿಸಿಕೊಂಡಿದ್ದು, ಅದರಂತೆ ಆದ್ಯತೆಯಲ್ಲಿ ಅನುದಾನ ಹಂಚಿಕೆ ಮಾಡುತ್ತಿದ್ದೇನೆ ಎಂದು ಶಾಸಕ ಶರಣಗೌಡ ಕಂದಕೂರು ತಿಳಿಸಿದರು.

ತಾಲೂಕಿನ ಗಿದ್ದ ಬಂಡಾ ತಾಂಡಾ (ಜಿ.ಬಿ.ತಾಂಡಾ)ದಲ್ಲಿ ಸೋಮವಾರ ಕೆ.ಕೆ.ಆರ್.ಡಿ.ಬಿ. ಅನುದಾನದ ಮೈಕ್ರೋ (ನಾನ್ ಸೋಶಿಯಲ್) ಯೋಜನೆಯಲ್ಲಿ ಜಿ.ಬಿ.ತಾಂಡಾದಿಂದ ಆರ್.ಹೊಸಳ್ಳಿ ತಾಂಡಾದವರೆಗಿನ ಮುಖ್ಯರಸ್ತೆ ನಿರ್ಮಾಣ ಹಾಗೂ ಎಲೇರಿ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗಳ ಅಡಿಗಲ್ಲು ಸಮಾರಂಭದಲ್ಲಿ ಅವರು ಮಾತನಾಡಿದರು.

2023-24ನೇ ಸಾಲಿನ ಅನುದಾನದ ಕೊನೆಯ ಕಾಮಗಾರಿಯಿದು. ಮುಂದೆ ಪ್ರಸಕ್ತ ಸಾಲಿನ ಅನುದಾನದಲ್ಲಿ ಕಾಮಗಾರಿಗಳನ್ನು ಕ್ಷೇತ್ರದ ಅಭಿವೃದ್ಧಿಗೆ ಪೂರಕ ಮತ್ತು ಜನರ ಬಹು ದಿನಗಳ ಅತ್ಯವಶ್ಯಕ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ಮೇರೆಗೆ ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈಗಾಗಲೇ ಜಿ.ಬಿ. ತಾಂಡಾದಲ್ಲಿ ಆರ್.ಒ. ಪ್ಲಾಂಟ್ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ. ಸಿಸಿ ರಸ್ತೆ ಮತ್ತು ಚರಂಡಿಗೆ 50 ಲಕ್ಷ ರು.ಗಳು ಒದಗಿಸಿದ್ದು, ಎಲೇರಿ ಗ್ರಾಮದ ವಾರಣಾಸಿ ಹಿರೇಮಠದ ಜೀರ್ಣೋದ್ಧಾರಕ್ಕೆ 50 ಲಕ್ಷ ರು.ಗಳು ಅನುದಾನದ ಹಂಚಿಕೆ, ಆಶಾಪುರ ತಾಂಡಾ, ಹಳ್ಳಿ ತಾಂಡಾಗಳಲ್ಲಿ ಸಿಸಿ ರಸ್ತೆ ಕಾಮಗಾರಿಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.

ನಿಮ್ಮ ಪ್ರೀತಿಯ ಋಣ ನಮ್ಮ ಕುಟುಂಬದ ಮೇಲಿದೆ. ಕ್ಷೇತ್ರದ ಜನತೆ ತಲೆತಗ್ಗಿಸುವ ಮತ್ತು ಸ್ವಾರ್ಥ ರಾಜಕಾರಣ ನಾನು ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರದ ಅನುದಾನವನ್ನು ಕ್ಷೇತ್ರದ ಜನತೆಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.

ವಿಶೇಷ ತಹಸೀಲ್ದಾರ್ ಗುಂಡಪ್ಪ, ಗ್ರಾ.ಪಂ. ಅಧ್ಯಕ್ಷ ಬಸವರಾಜ ಎನ್. ಕಣೇಕಲ್, ಅಜಯರೆಡ್ಡಿಗೌಡ ಶಿವರಾಯ ಎಲೇರಿ, ತಾಪಂ ಅಧಿಕಾರಿ ಅಂಬ್ರೀಶ ಪಾಟೀಲ್, ಗ್ರಾಮೀಣ ನೀರು ಸರಬರಾಜು ಎಇಇ ಬಸವರಾಜ ಐರೆಡ್ಡಿ, ಲೋಕೋಪಯೋಗಿ ಇಲಾಖೆಯ ಎಇಇ ಶ್ರೀಧರ, ನಿರ್ಮಿತಿ ಕೇಂದ್ರ ಎಇಇ ಕಿರಣಕುಮಾರ, ಪಿಎಸ್ಐ ಭೀಮರಾಯ, ಪಿಡಿಒ ಶೋಭಾ ಪಾಟೀಲ್, ತಾಪಂ ಮಾಜಿ ಅಧ್ಯಕ್ಷ ಈಶ್ವರ ರಾಠೋಡ ಸೇರಿದಂತೆ ಇತರರಿದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು