ಸೂಲಿಬೆಲೆ: ಆಧ್ಯಾತ್ಮಿಕ ಮನೋಭಾವವನ್ನು ರೂಢಿಸಿಕೊಂಡು ಜೀವನ ಸಾಗಿಸುವವರಿಗೆ ಯಾವುದೇ ಧರ್ಮದಲ್ಲಿ ವ್ಯತ್ಯಾಸ ಕಾಣುವುದಿಲ್ಲ, ಎಲ್ಲಾ ಧರ್ಮಗಳು ಒಂದೇ ಆಗಿರುತ್ತವೆ. ದಾನ ಮಾಡುವುದು ಧರ್ಮದ ಆದೇಶ ಎಂದು ಸೂಲಿಬೆಲೆ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ.ಸತೀಶಗೌಡ ಹೇಳಿದರು.
ದೇವರೊಬ್ಬ ನಾಮ ಹಲವು ಎಂಬ ಸಿದ್ದಾಂತದ ಮೇಲೆ ನಾವು ಜೀವಿಸುತ್ತಿದ್ದೇವೆ ಸಕಲ ಜೀವರಾಶಿಗಳಿಗೂ ಒಳಿತು ಮಾಡೊಣ ಎಂದು ಹೇಳಿದರು.
ಗ್ರಾಮಪಂಚಾಯತ್ ಸದಸ್ಯ ಯಾರಬ್ ಬೇಗ್ ಮಾತನಾಡಿ ಬೆಂಡಿಗಾನಹಳ್ಳಿ ಗ್ರಾಮದ ನಾಯಕರಾದ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಬಿ.ವಿ.ಸತೀಶಗೌಡರು ಪ್ರತಿವರ್ಷವು ನಮ್ಮ ಮುಸ್ಲಿಂ ಸಮುದಾಯಕ್ಕೆ ಪ್ರತಿ ಹಬ್ಬಕ್ಕೂ ಪುಡ್ ಕಿಟ್ ನೀಡುತ್ತಾರೆ ಯಾವುದೇ ತಾರತಮ್ಯ ಮಾಡದೇ ತಮ್ಮರಸನಹಳ್ಳಿ ಗ್ರಾಮದ ೨೦೦ ಕುಟುಂಬಗಳಿಗೂ ಪುಡ್ ಕಿಟ್ ನೀಡಿದ್ದಾರೆ ಅವರಿಗೆ ಅಲ್ಲಾ ಒಳ್ಳೆಯದು ಮಾಡಲಿ ಎಂದರು.ಬಾಕ್ಸ್; ನಮ್ಮ ಹಿರಿಯರು ನಮಗೆ ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವು ದಾರ್ಮಿಕ ಆಚರಣೆಗಳು ದಾನದರ್ಮಗಳು ಹಮ್ಮಿಕೊಂಡು ಬಂದಿದ್ದೇವೆ ಇದನ್ನು ಮುಂದಿನ ಪೀಳಿಗೆಯವರು ಮುಂದುವರೆಸಿಕೊAಡು ಹೋಗುತ್ತೇವೆ. ಬಿ.ವಿ.ಸತೀಶಗೌಡರು, ಸಹಕಾರ ಬ್ಯಾಂಕ್ ಅಧ್ಯಕ್ಷರು. ಸೂಲಿಬೆಲೆ.
ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ಡಾ. ಡಿ.ಟಿ.ವೆಂಕಟೇಶ್, ಅಮ್ಜದ್ ಪಾಷ, ಸೈಯದ್ ಪೀರ್, ಜಾಬೀರ್, ನಾಸೀರ್, ಇಂತಿಯಾಜ್, ಜಬೀ,ರೋಷನ್,ಮಕ್ಸೂದ್, ವಜೀರ್ ಸಾಬಿ, ಇತರರು ಇದ್ದರು.
ಚಿತ್ರ; ೨೦ ಸೂಲಿಬೆಲೆ ೩ ಜೆಪಿಜೆ ನಲ್ಲಿದೆ