ಬಡವರಿಗೆ ದಾನ ಮಾಡುವುದು ಧರ್ಮದ ಆದೇಶ: ಸತೀಶಗೌಡ

KannadaprabhaNewsNetwork |  
Published : Mar 22, 2026, 01:45 AM IST
ಸೂಲಿಬೆಲೆ ಸಮೀಪದ ಬೆಂಡಿಗಾನಹಳ್ಳಿಯಲ್ಲಿ ಸಹಕಾರ ಬ್ಯಾಂಕ್ ಅಧ್ಯಕ್ಷರಾದ  ಬಿ.ವಿ.ಸತೀಶಗೌಡರು ತಮ್ಮರಸನಹಳ್ಳಿಯ ೨೦೦ ಕುಟುಂಬಗಳಿಗೆ ರಂಜಾನ್ ಪುಡ್ ಕಿಟ್ ವಿತರಣೆ ಮಾಡಿದರು, ಗ್ರಾಪಂ.ಸದಸ್ಯ ಯಾರಬ್ ಬೇಗ್ ಇತರರು ಇದ್ದರು. | Kannada Prabha

ಸಾರಾಂಶ

ಸೂಲಿಬೆಲೆ: ಆಧ್ಯಾತ್ಮಿಕ ಮನೋಭಾವವನ್ನು ರೂಢಿಸಿಕೊಂಡು ಜೀವನ ಸಾಗಿಸುವವರಿಗೆ ಯಾವುದೇ ಧರ್ಮದಲ್ಲಿ ವ್ಯತ್ಯಾಸ ಕಾಣುವುದಿಲ್ಲ, ಎಲ್ಲಾ ಧರ್ಮಗಳು ಒಂದೇ ಆಗಿರುತ್ತವೆ. ದಾನ ಮಾಡುವುದು ಧರ್ಮದ ಆದೇಶ ಎಂದು ಸೂಲಿಬೆಲೆ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ.ಸತೀಶಗೌಡ ಹೇಳಿದರು

ಸೂಲಿಬೆಲೆ: ಆಧ್ಯಾತ್ಮಿಕ ಮನೋಭಾವವನ್ನು ರೂಢಿಸಿಕೊಂಡು ಜೀವನ ಸಾಗಿಸುವವರಿಗೆ ಯಾವುದೇ ಧರ್ಮದಲ್ಲಿ ವ್ಯತ್ಯಾಸ ಕಾಣುವುದಿಲ್ಲ, ಎಲ್ಲಾ ಧರ್ಮಗಳು ಒಂದೇ ಆಗಿರುತ್ತವೆ. ದಾನ ಮಾಡುವುದು ಧರ್ಮದ ಆದೇಶ ಎಂದು ಸೂಲಿಬೆಲೆ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ.ಸತೀಶಗೌಡ ಹೇಳಿದರು.

ಸೂಲಿಬೆಲೆ ಹೋಬಳಿ ಬೆಂಡಿಗಾನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಲ್ಪಸಂಖ್ಯಾತ ಸಮುಧಾಯಕ್ಕೆ ರಂಜಾನ್ ಪುಡ್ ಕಿಟ್ ವಿತರಣೆ ನೆರವೇರಿಸಿ ಮಾತನಾಡಿದರು.

ದೇವರೊಬ್ಬ ನಾಮ ಹಲವು ಎಂಬ ಸಿದ್ದಾಂತದ ಮೇಲೆ ನಾವು ಜೀವಿಸುತ್ತಿದ್ದೇವೆ ಸಕಲ ಜೀವರಾಶಿಗಳಿಗೂ ಒಳಿತು ಮಾಡೊಣ ಎಂದು ಹೇಳಿದರು.

ಗ್ರಾಮಪಂಚಾಯತ್ ಸದಸ್ಯ ಯಾರಬ್ ಬೇಗ್ ಮಾತನಾಡಿ ಬೆಂಡಿಗಾನಹಳ್ಳಿ ಗ್ರಾಮದ ನಾಯಕರಾದ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಬಿ.ವಿ.ಸತೀಶಗೌಡರು ಪ್ರತಿವರ್ಷವು ನಮ್ಮ ಮುಸ್ಲಿಂ ಸಮುದಾಯಕ್ಕೆ ಪ್ರತಿ ಹಬ್ಬಕ್ಕೂ ಪುಡ್ ಕಿಟ್ ನೀಡುತ್ತಾರೆ ಯಾವುದೇ ತಾರತಮ್ಯ ಮಾಡದೇ ತಮ್ಮರಸನಹಳ್ಳಿ ಗ್ರಾಮದ ೨೦೦ ಕುಟುಂಬಗಳಿಗೂ ಪುಡ್ ಕಿಟ್ ನೀಡಿದ್ದಾರೆ ಅವರಿಗೆ ಅಲ್ಲಾ ಒಳ್ಳೆಯದು ಮಾಡಲಿ ಎಂದರು.

ಬಾಕ್ಸ್; ನಮ್ಮ ಹಿರಿಯರು ನಮಗೆ ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವು ದಾರ್ಮಿಕ ಆಚರಣೆಗಳು ದಾನದರ್ಮಗಳು ಹಮ್ಮಿಕೊಂಡು ಬಂದಿದ್ದೇವೆ ಇದನ್ನು ಮುಂದಿನ ಪೀಳಿಗೆಯವರು ಮುಂದುವರೆಸಿಕೊAಡು ಹೋಗುತ್ತೇವೆ. ಬಿ.ವಿ.ಸತೀಶಗೌಡರು, ಸಹಕಾರ ಬ್ಯಾಂಕ್ ಅಧ್ಯಕ್ಷರು. ಸೂಲಿಬೆಲೆ.

ಕೋಟ್; ಸುಮಾರು ೩೦ ವರ್ಷಗಳಿಂದ ಬೆಂಡಿಗಾನಹಳ್ಳಿ ಕುಟುಂಬದಿAದ ತಮ್ಮರಸನಹಳ್ಳಿ ಅಲ್ಪಸಂಖ್ಯಾತ ಕುಟುಂಬಗಳಿಗೆ ಪುಡ್ ಕಿಟ್ ವಿತರಣೆ ಮಾಡುತ್ತಿದ್ದಾರೆ ಈ ಭಾರಿ ೩೦ ಬಡ ಹಿಂದು ಕುಟುಂಬಗಳಿಗೆ ಯುಗಾದಿ ಕಿಟ್ ಸಹ ನೀಡಿದ್ದಾರೆ. ಯಾರಬ್ ಬೇಗ್ ಗ್ರಾಮಪಂಚಾಯತ್ ಸದಸ್ಯ

ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ಡಾ. ಡಿ.ಟಿ.ವೆಂಕಟೇಶ್, ಅಮ್ಜದ್ ಪಾಷ, ಸೈಯದ್ ಪೀರ್, ಜಾಬೀರ್, ನಾಸೀರ್, ಇಂತಿಯಾಜ್, ಜಬೀ,ರೋಷನ್,ಮಕ್ಸೂದ್, ವಜೀರ್ ಸಾಬಿ, ಇತರರು ಇದ್ದರು.

ಚಿತ್ರ; ೨೦ ಸೂಲಿಬೆಲೆ ೩ ಜೆಪಿಜೆ ನಲ್ಲಿದೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೇನಲ್ಲಿ ನಮ್ಮ ಮೆಟ್ರೋ ಗುಲಾಬಿಮಾರ್ಗ ಲೋಕಾರ್ಪಣೆ ಸಾಧ್ಯತೆ
ಈದ್ಗಾ ಮೈದಾನದಲ್ಲಿ ರಂಜಾನ್ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ