ಕನ್ನಡಪ್ರಭ ವಾರ್ತೆ ಸೊರಬ
ತಾಲೂಕಿನ ಜಡೆ ಗ್ರಾಮದಲ್ಲಿ ಶುಕ್ರವಾರ ಸುರಭಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮಿಗಳಿಗೆ ಮರದ ಸಿಂಹಾಸನ ಕೊಡುಗೆಯಾಗಿ ನೀಡಿ ಅವರು ಮಾತನಾಡಿದರು.
ವ್ಯಕ್ತಿ ಅಥವಾ ಸಂಘ- ಸಂಸ್ಥೆಗಳನ್ನು ಹಣದಿಂದ ಅಳೆಯುವುದಿಲ್ಲ. ಸಮಾಜಕ್ಕೆ ತಮ್ಮ ಕೈಲಾದಷ್ಟು ಕೊಡುಗೆಯನ್ನು ನೀಡುವ ವ್ಯಕ್ತಿತ್ವದಿಂದ ಸಮಾಜವೇ ಗುರ್ತಿಸಿ ಪುರಸ್ಕರಿಸುತ್ತವೆ. ಫಲಾಪೇಕ್ಷೆ ಇಲ್ಲದ ಸುರಭಿ ಚಾರಿಟೇಬಲ್ ಟ್ರಸ್ಟ್ ರಾಜ್ಯಾದ್ಯಂತ ಹಲವು ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಂಡು ನೆರವಾಗುತ್ತಿದೆ. ಇಂಥ ಮಹೋನ್ನತ ಕಾರ್ಯಗಳನ್ನು ಪ್ರತೀ ಸಂಘ-ಸAಸ್ಥೆಗಳು ಹಮ್ಮಿಕೊಳ್ಳುವುದರಿಂದ ಸಮಾಜದ ಉನ್ನತಿ ಸಾಧ್ಯವಾಗುತ್ತದೆ ಎಂದರು.ಇತರೆ ಜಿಲ್ಲೆ ಮತ್ತು ತಾಲೂಕಿನಲ್ಲಿ ತನ್ನದೇ ಆದ ಭಕ್ತವೃಂದ ಹೊಂದಿರುವ ಜಡೆ ಮಠ ಆಧ್ಯಾತ್ಮಿಕವಾಗಿ ದಾರ್ಶನಿಕ ಪರಂಪರೆ ಸಾರವನ್ನು ಭಕ್ತರಲ್ಲಿ ಮೂಡಿಸುವ ನಿಟ್ಟಿನಲ್ಲಿ ಮೊದಲ ಸ್ಥಾನದಲ್ಲಿದೆ. ಗುರು ಪರಂಪರೆಯ ಜೊತೆಗೆ ಸಮಾಜ ಸೇವೆಯಲ್ಲಿಯೂ ತನ್ನದೇ ಗುರುತರ ಅಸ್ಥಿತ್ವ ಹೊಂದಿದೆ. ಜಡೆ ಮಠದ ಕೀರ್ತಿ ರಾಜ್ಯದೆಲ್ಲೆಡೆ ಹರಡಿ ಇನ್ನಷ್ಟು ಪ್ರಗತಿ ಹೊಂದಲಿ ಎಂದು ಆಶಿಸಿದರು.ಸುರಭಿ ಚಾರಿಟೇಬಲ್ ಟ್ರಸ್ಟ್ ನೀಡಿದ ಮರದ ಸಿಂಹಾಸನ ಸ್ವೀಕರಿಸಿ ಜಡೆ ಸಂಸ್ಥಾನ ಮಠದ ಮಹಾಂತ ಸ್ವಾಮಿಗಳು ಮಾತನಾಡಿ, ಸಂಸ್ಥಾನ ಮಠದ ಶ್ರೇಯೋಭಿವೃದ್ಧಿಗಾಗಿ ಸದ್ಭಕ್ತರು ವಿವಿಧ ರೀತಿಯಲ್ಲಿ ಕೊಡುಗೆಗಳನ್ನು ನೀಡುವ ಮೂಲಕ ಸೇವಾ ಕೈಂಕರ್ಯದಲ್ಲಿ ತೊಡಗುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಮಠದ ಪರಂಪರೆಯ ಇತಿಹಾಸದಲ್ಲಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ ಎಂದರು.
ಇದೇ ಸಂದರ್ಭದಲ್ಲಿ ಜಡೆ ಗ್ರಾಮದ ಸಂತೋಷ್ ಶೇಟ್ ಮತ್ತು ಶಿವಮೊಗ್ಗದ ಎನ್.ಹೆಚ್. ಮಲ್ಲಿಕಾರ್ಜುನ ಕುಟುಂಬದವರು ಬೆಳ್ಳಿಯದಾರ ಮತ್ತು ಕರಕಮಲಗಳನ್ನು ಮಠಕ್ಕೆ ದಾನವಾಗಿ ನೀಡಿದರು.
- - - -03ಕೆಪಿಸೊರಬ01: