ಧಾರವಾಡ:
ರಾಣಿಚೆನ್ನಮ್ಮ ನಗರದಲ್ಲಿರುವ ಧಾರವಾಡ ಕಟ್ಟೆ ಸಭಾಂಗಣದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿ.ಕೃ. ಗೋಕಾಕರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ 426ನೇ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಪ್ರತಿಭೆಯಾಗಿ ಗುರುತಿಸಿಕೊಂಡ ಗೋಕಾಕರು ಕವಿ, ಕಾದಂಬರಿಕಾರ, ವಿಮರ್ಶಕ, ಚಿಂತಕ, ಶಿಕ್ಷಣ ತಜ್ಞ ಹಾಗೂ ಆಡಳಿತಗಾರರಾಗಿ ಅಪಾರ ಸೇವೆ ಸಲ್ಲಿಸಿದ ಮಹನೀಯರು ಎಂದರು.
ಮಾನವನ ಬದುಕು, ಸಂಸ್ಕೃತಿ, ಧರ್ಮ, ಸಮಾಜ ಮತ್ತು ಆಧ್ಯಾತ್ಮಿಕತೆಯ ಕುರಿತು ಅವರು ಆಳವಾದ ಚಿಂತನೆ ನಡೆಸಿದ್ದಾರೆ. ಅವರ ಪ್ರಸಿದ್ಧ ಮಹಾಕಾವ್ಯ ‘ಭಾರತ ಸಿಂಧು ರಶ್ಮಿ’ ಭಾರತೀಯ ಸಂಸ್ಕೃತಿ ಮತ್ತು ಇತಿಹಾಸದ ವೈಭವವನ್ನು ಪ್ರತಿಬಿಂಬಿಸುವ ಮಹತ್ವದ ಕೃತಿಯಾಗಿದೆ. ಈ ಕೃತಿಗಾಗಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿತು ಎಂದರು.ಕನ್ನಡ ಪ್ರಾಧ್ಯಾಪಕ ಡಾ. ಚಿದಾನಂದ ಮಾಸನಕಟ್ಟಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಧಾರವಾಡ ಕಟ್ಟೆಯ ಪ್ರೊ. ಬಸವರಾಜ ಡೋಣೂರ, ವಿ.ಕೃ. ಗೋಕಾಕರು ಒಬ್ಬ ಯುಗಪ್ರವರ್ತಕ ಲೇಖಕರು. ಮಹಾಕಾವ್ಯ ರಚನೆಗೆ ಕವಿಗೆ ಒಂದು ದೊಡ್ಡ ಕನಸು, ವಿಶಾಲವಾದ ಜೀವನದೃಷ್ಟಿ ಹಾಗೂ ಸುದೀರ್ಘ ಸಿದ್ಧತೆ ಅಗತ್ಯ. ಆಧುನಿಕ ಕಾಲದಲ್ಲಿ ಮಹಾಕಾವ್ಯ ರಚಿಸಿದ ಇಬ್ಬರು ಮಹತ್ವದ ಕನ್ನಡ ಲೇಖಕರೆಂದರೆ ವಿ.ಕೃ. ಗೋಕಾಕರು ಮತ್ತು ಕುವೆಂಪು ಎಂದರು.