ಕನ್ನಡಪ್ರಭ ವಾರ್ತೆ ಚನ್ನಗಿರಿ
ಹೊರಗಡೆ ಹೋಗಿದ್ದ ಪುತ್ರ ವಿಕಾಸ, ಅಳಿಯ ಸಂತೋಷ ಮನೆಗೆ ಬಂದಾಗ ರೂಮಿನ ಬಾಗಿಲನ್ನು ತೆರೆದರು. ಆಗ ನಡೆದ ಎಲ್ಲಾ ವಿಚಾರವನ್ನು ತಿಳಿಸಿದ್ದಾಗಿ ಸಾವಿತ್ರಮ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ದರೋಡೆಯ ವಿಷಯವನ್ನು ತಮ್ಮ ಮಗ ಸಂತೆಬೆನ್ನೂರು ಪೊಲೀಸರಿಗೆ ದೂರವಾಣಿಯ ಮೂಲಕ ವಿಷಯ ತಿಳಿಸಿದಾಗ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ದರೋಡೆ ಮಾಡಿಕೊಂಡ ಹೋದ ಎಲ್ಲರೂ ಕನ್ನಡ ಭಾಷೆಯಲ್ಲಿ ಮಾತನಾಡುತ್ತಿದ್ದರು. ಕಂದು ಮೈ ಬಣ್ಣ ಹೊಂದಿದ್ದು, ದೃಢಕಾಯ ಮೈಕಟ್ಟಿನವರಾಗಿದ್ದರು. ಈ ಬಗ್ಗೆ ಸಂತೆಬೆನ್ನೂರು ಗ್ರಾಮದಲ್ಲಿರುವ ಪೊಲೀಸ್ ಠಾಣೆಗೆ ಹೋಗಿ ದೂರು ನೀಡದ್ದೇವೆ ಎಂದು ತಿಳಿಸಿದ್ದಾರೆ.ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ಡಿ.ವೈ.ಎಸ್.ಪಿ.ಸ್ಯಾಮ್ ವರ್ಗಿಸ್, ಸಂತೆಬೆನ್ನೂರು ಸಿಪಿಐ ಲಿಂಗನಗೌಡ ನೆಗಳೂರು ಸ್ಥಳಕ್ಕೆ ಭೇಟಿ ನೀಡಿ ಘಟನೆಯ ವಿವರಗಳನ್ನು ಪಡೆದಿದ್ದಾರೆ.
ಏನಿದು ಘಟನೆ?
ಅವರ ಕೊರಳಿನಲ್ಲಿದ್ದ 30 ಗ್ರಾಂ ಮಾಂಗಲ್ಯ ಸರವನ್ನು ಕಿತ್ತುಕೊಂಡು ಕೈಯಲ್ಲಿದ್ದ 5 ಗ್ರಾಂ ಉಂಗುರ, ಕಿವಿಯಲ್ಲಿದ್ದ ಓಲೆಯನ್ನು ಬಿಚ್ಚಿಕೊಂಡು ಬೀರುವಿನ ಬೀಗ ನೀಡುವಂತೆ ಹಿಂಸಿಸಿದ್ದಾರೆ. ನಂತರ ರೂಮಿನಲ್ಲಿ ಹುಡುಕಾಡಿ ಡ್ರಾದಲ್ಲಿ ಇದ್ದ ಬೀಗ ತೆಗೆದುಕೊಂಡು ಬೀರುಬಾಗಿಲನ್ನು ತೆಗೆದು ಅದರಲ್ಲಿದ್ದ 8 ಗ್ರಾಂ ಚಿನ್ನದ ಸರ, 4 ಗ್ರಾಂನ ಎರಡು ಉಂಗುರ, 4 ಗ್ರಾಂನ 5 ಜೊತೆ ಕಿವಿ ಓಲೆ, 4 ಗ್ರಾಂನ 2 ಜೊತೆ ದೇವರ ಕಿವಿ ಓಲೆ, ಎರಡು ಮೂಗುತಿ, ಬೆಳ್ಳಿಯ ಎರಡು ದೇವರ ಮುಖವಾಡಗಳು, ಎರಡು ದೀಪ, ಒಂದು ತಟ್ಟೆ, ಈಶ್ವರ, ಬಸವಣ್ಣ, ಗಣಪತಿಯ ವಿಗ್ರಹಗಳು, ಎರಡು ಕರಡಿಗೆ, ಎರಡು ಕಾಲುಂಗುರ ಸೇರಿ ಎಲ್ಲಾ ಬೆಳ್ಳಿ ಮತ್ತು ಬಂಗಾರದ ಸಾಮಾನುಗಳನ್ನು ತೆಗೆದುಕೊಂಡು ಮನೆಯಲ್ಲಿಯೇ ಇದ್ದ ಬ್ಯಾಗಿನಲ್ಲಿ ಹಾಕಿಕೊಂಡು ದಂಪತಿಯನ್ನು ರೂಮಿನಲ್ಲಿ ಕೂಡಿಹಾಕಿ ಪರಾರಿಯಾಗಿದ್ದಾರೆ.