ಪ್ರತಿಭೆಗಳಿಗೆ ಸುವರ್ಣ ಸಂಭ್ರಮ ಸೂಕ್ತ ವೇದಿಕೆ: ಎಸ್‌ಪಿ ಶೇಖರ್

KannadaprabhaNewsNetwork |  
Published : Jun 29, 2026, 03:45 AM IST
ಕ್ಯಾಪ್ಷನ28ಕೆಡಿವಿಜಿ45ದಾವಣಗೆರೆಯಲ್ಲಿಂದು ಏಷ್ಯಾ ನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭದಿಂದ ಆಯೋಜಿಸಿದ ದಾವಣಗೆರೆ ಸುವರ್ಣ ಸಂಭ್ರಮ-2026 ರ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್ ರನ್ನು ಸನ್ಮಾನಿಸಿದರು. ನಾಗರಾಜ ಎಸ್.ಬಡದಾಳ್, ಇತರರು ಇದ್ದರು. | Kannada Prabha

ಸಾರಾಂಶ

ದಾವಣಗೆರೆಯಲ್ಲಿ ಭಾನುವಾರ ಏಷ್ಯಾ ನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭದಿಂದ ಆಯೋಜಿಸಿದ ದಾವಣಗೆರೆ ಸುವರ್ಣ ಸಂಭ್ರಮ-2026ರ ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್‌ಪಿ ಎಚ್.ಟಿ.ಶೇಖರ್ ಅವರನ್ನು ಸನ್ಮಾನಿಸಲಾಯಿತು. ನಾಗರಾಜ ಎಸ್.ಬಡದಾಳ್, ಇತರರು ಇದ್ದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ವತಿಯಿಂದ ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆಗಳು, ಖಾದಿ, ಗೃಹೋತ್ಪನ್ನ ಉತ್ಪನ್ನಗಳು, ಚರ್ಮ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಒದಗಿಸುವ ಜೊತೆಗೆ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅನಾವರಣಗೊಳಿಸಲು ಮಕ್ಕಳಿಗೆ ಸುವರ್ಣ ಸಂಭ್ರಮ ಹೆಸರಿನಲ್ಲಿ ಮೂರು ದಿನಗಳ ಕಾಲ ನಮ್ಮ ದಾವಣಗೆರೆಯಲ್ಲಿ "ಸುವರ್ಣ ಸಂಭ್ರಮ " ಮನೋರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್ ಹೇಳಿದರು.

ಏಷ್ಯಾ ನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭದಿಂದ ನಗರದ ಹೈಸ್ಕೂಲ್ ಮೈದಾನದಲ್ಲಿ ಆಯೋಜಸಿದ ಮೂರನೇ ದಿನ ಭಾನುವಾರ ನಡೆದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಿಕಾ ರಂಗದವರು ಈ ರೀತಿ ಗುಡಿ ಕೈಗಾರಿಕೆಗಳಿಗೆ, ಸಣ್ಣ ಉದ್ಯಮಿಗಳಿಗೆ, ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಾಡುತ್ತಿರುವ ಇದು ಆದರ್ಶದ ಕೆಲಸ. ಇಂತಹ ಸಮಾಜಮುಖಿ ಕಾರ್ಯಗಳು ಇಂತಹ ಸಂಸ್ಥೆಗಳಿಂದ ಹೆಚ್ಚೆಚ್ಚು ನಡೆಯಲಿ ಎಂದು ಆಶಿಸಿದರು.

ಅಂಧ ಸಂಗೀತ ಶಿಕ್ಷಕರ ನೇಮಕವಾಗಲಿ:

ಕನ್ನಡಪ್ರಭದ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್. ಬಡದಾಳ್ ಮಾತನಾಡಿ, ಅಂಧ ಸಂಗೀತ ಶಿಕ್ಷಕರ ನೇಮಕಾತಿ ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಸರ್ಕಾರ ಶೀಘ್ರ ಗಮನಹರಿಸಿ ರಾಜ್ಯದಲ್ಲಿ ಅಂಧ ಸಂಗೀತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಬೇಕು. ವಿಶೇಷವಾಗಿ ಅಂಧ ಸಂಗೀತ ಪದವೀಧರರಿಗೆ ಸರ್ಕಾರ ವಯೋಮಿತಿ ನೀಡುತ್ತಿದೆ. ಅಂತಹ ಶಿಕ್ಷಕರಿಗೆ ಜೀವನಕ್ಕೆ ಆಧಾರ ಇಲ್ಲದಂತಾಗಿದೆ. ಹಾಗಾಗಿ ಅವರಿಗೆ ಸಂಗೀತ ವೃತ್ತಿಯೇ ಜೀವನಾಧಾರ. ಸರ್ಕಾರ ಈ ಕೂಡಲೇ ಸಂಗೀತ ಶಿಕ್ಷಕರ ನೇಮಕಾತಿ ಕಾರ್ಯಕ್ಕೆ ಮುಂದಾಗಬೇಕು ಎಂದರು.

ಈ ನೇಮಕಾತಿ ಕುರಿತು ಅಂಧ ಶಿಕ್ಷಕರು ಸಾಕಷ್ಟು ಹೋರಾಟ ಮಾಡಿಕೊಂಡು ಬರುತ್ತಿದ್ದು, ಪತ್ರಕರ್ತರಾದ ನಾವು ಇವರ ಬೇಡಿಕೆಗಳನ್ನು, ಕಷ್ಟ-ಸುಖಗಳನ್ನು, ಹೋರಾಟಗಳನ್ನು ಕಣ್ಣಾರೆ ಕಂಡಿರುತ್ತೇವೆ. ಸರ್ಕಾರವು ಆದ್ಯತೆ ಮೇರೆಗೆ ವಿಶೇಷವಾಗಿ ಅಂಧ ಶಿಕ್ಷಕರ ನೇಮಕ ಮಾಡಿಕೊಳ್ಳಲು ಮುಂದಾಗಬೇಕು ಎಂದು ನಾವೂ ಸರ್ಕಾರವನ್ನು ಹಾಗೂ ಜನಪ್ರತಿನಿಧಿಗಳನ್ನು ಒತ್ತಾಯಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ನಗರ ಡಿವೈಎಸ್‌ಪಿ ಶರಣಬಸವೇಶ್ವರ, ವೀರೇಶ್ವರ ಪುಣ್ಯಾಶ್ರಮದ ಕಾರ್ಯದರ್ಶಿ ಎ.ಎಚ್. ಸಿದ್ದಲಿಂಗ ಸ್ವಾಮಿ, ವ್ಯವಸ್ಥಾಪಕ ಅಮರಯ್ಯ ಸ್ವಾಮಿ, ಅಂಧ ಶಿಕ್ಷಕ ಶ್ರೀಶೈಲ, ಸುವರ್ಣ ನ್ಯೂಸ್ ನ ವಿ.ಪಿ. ವಿಜಯಕುಮಾರ, ಬಿ.ಎಂ.ಶ್ರೀನಿವಾಸ, ಸುವರ್ಣ ನ್ಯೂಸ್ ಜಿಲ್ಲಾ ವರದಿಗಾರ ಮಹಾಂತೇಶ ಕುರಬೇಟ, ಕ್ಯಾಮರಾ ಮ್ಯಾನ್ ಕಿರಣಕುಮಾರ, ಪ್ರಸಾರಾಂಗ ವಿಭಾಗದ ಶಿವರಾಜ ಇತರರು ಇದ್ದರು.

ಇಂದು ಇಲ್ಲಿ ವೀರೇಶ್ವರ ಪುಣ್ಯಾಶ್ರಮದ ಅಂಧ ಮಕ್ಕಳು ಸುಶ್ರಾವ್ಯವಾಗಿ ವಚನ, ಗೀತೆಗಳನ್ನು ಹಾಡುವ ಮೂಲಕ ಎಲ್ಲರನ್ನೂ ಮನರಂಜಿಸಿದ್ದಾರೆ. ಇಂತಹ ಮಕ್ಕಳಿಗೆ ಸುವರ್ಣ ವಾಹಿನಿ, ಕನ್ನಡಪ್ರಭ ಉತ್ತಮ ವೇದಿಕೆ ಕಲ್ಪಿಸಿದೆ. ಈ ಶಾಲೆ ಅಂಧ ಮಕ್ಕಳಿಗೆ ಅವಶ್ಯಕ ಇರುವ ಸಂಗೀತ ಪರಿಕರಗಳ ಖರೀದಿಗೆ ನಾನು ಸ್ವತಃ ₹25,000 ಕೊಡುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್ ಘೋಷಣೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಂಪನನ್ನು ಜಗತ್ತಿಗೆ ಪರಿಚಯಿಸಿ: ಬರಗೂರು
ಕಾರಲ್ಲಿ ಬಂದು ಅಪಾರ್ಟ್‌ಮೆಂಟ್‌ಗೆನುಗ್ಗಿ 1.35 ಲಕ್ಷದ ಶೂಗಳ ಕದ್ದರು