ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಪುರಸಭೆ ಸಹಕಾರದಲ್ಲಿ ಆಯೋಜಿಸಿದ್ದ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.ನಮ್ಮ ದಿನನಿತ್ಯದ ಕರ್ತವ್ಯಗಳಲ್ಲಿ ಸ್ವಚ್ಛತೆ ಕಾಪಾಡುವುದು ಮಾಡುವುದು ನಮ್ಮ ಜವಾಬ್ದಾರಿ ಎಂದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್ ಮಾತನಾಡಿ, ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ, ಪರಿಸರ ದಿನ, ತಂಬಾಕು ನಿರ್ಮೂಲನಾ ದಿನ ಹಾಗೂ ಇತರೆ ಜಾಗೃತಿ ಕಾರ್ಯಕ್ರಮಗಳನ್ನು ಒಂದು ದಿನಕ್ಕೆ ಸೀಮಿತಗೊಳಿಸದೇ ಪ್ರಜ್ಞಾವಂತ ನಾಗರೀಕರಾದ ನಾವು ನಮ್ಮ ನಡವಳಿಕೆಯಲ್ಲಿ ಅಳವಡಿಸಿಕೊಂಡು, ಸ್ವಚ್ಛತೆಗೆ ಆದ್ಯತೆ ನೀಡೋಣವೆಂದು ಕರೆಕೊಟ್ಟರು.ಪುರಸಭಾಧ್ಯಕ್ಷ ಎ.ಶ್ರೀಧರ್, ತಾ. ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್, ಪುರಸಭೆ ಮುಖ್ಯಾಧಿಕಾರಿ ಸಿ.ಡಿ.ನಾಗೇಂದ್ರಕುಮಾರ್ ಗಿಡ ನೆಟ್ಟು, ಪೌರ ಕಾರ್ಮಿಕರ ಜತೆ ಸೇರಿ ನ್ಯಾಯಾಲಯದ ಆವರಣ ಸ್ವಚ್ಛಗೊಳಿಸಿದರು.
ತಾ. ವಕೀಲರ ಸಂಘದ ಕಾರ್ಯದರ್ಶಿ ಉಲಿವಾಲ ಸತೀಶ್, ನ್ಯಾಯಾಲಯದ ಶಿರೆಸ್ತೇದಾರ್ಗಳಾದ ಹೀನಾಕೌಸರ್ ಹಾಗೂ ನಳಿನಾ, ಪುರಸಭೆ ಪರಿಸರ ಇಂಜಿನಿಯರ್ ರುಚಿದರ್ಶಿನಿ, ಮೇಸ್ತ್ರಿ ಮಾದಯ್ಯ, ನ್ಯಾಯಾಲಯದ ಸಿಬ್ಬಂದಿ ಲಲಿತಾ, ಪ್ರೇಮ, ಸುಮಿತ್ರ, ಮಲ್ಲಿಕಾ, ವೀರಪ್ಪ, ಕುಮಾರ್, ಮಂಜುಳ, ಲೋಕೇಶ್, ಜಯರಾಮ್, ಮಮತ ಇತರರು ಇದ್ದರು.