ಕನ್ನಡಪ್ರಭವಾರ್ತೆ ಸಾಗರ
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಭಾನುವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಆರೋಗ್ಯದಲ್ಲಿ ಆತಂಕವೇಕೆ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ನಮ್ಮ ಆರೋಗ್ಯದ ರಕ್ಷಣೆ ನಮ್ಮ ಕೈಯಲ್ಲಿಯೇ ಇದೆ ಎಂದು ಅಭಿಪ್ರಾಯಪಟ್ಟರು.
ಧಾವಂತದ ಬದುಕು ನಮ್ಮನ್ನು ಎತ್ತಲೋ ಕರೆದೊಯ್ಯುತ್ತಿದೆ. ಎಲ್ಲದ್ದಕ್ಕೂ ಸಮಯ ಕೊಡುವ ನಾವು ಆರೋಗ್ಯದ ವಿಷಯ ಬಂದಾಗ ನಿಷ್ಕಾಳಜಿ ವಹಿಸುತ್ತಿದ್ದೇವೆ. ದೈನಂದಿನ ಬದುಕಿನಲ್ಲಿ ಒಂದಷ್ಟು ಶಿಸ್ತು ಪಾಲನೆ ಮಾಡಬೇಕು. ಮಕ್ಕಳನ್ನು ಜಂಕ್ ಫುಡ್ನಿಂದ ಹೊರಗೆ ತಂದು ತರಕಾರಿ, ಹಣ್ಣು ಇನ್ನಿತರ ಪೌಷ್ಠಿಕಾಂಶವಿರುವ ಆಹಾರ ನೀಡುವ ಮೂಲಕ ಭವಿಷ್ಯದಲ್ಲಿ ಅವರನ್ನು ಸದೃಢಗೊಳಿಸಬೇಕು ಎಂದು ಹೇಳಿದರು.ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶ ಮಧುಮೇಹ ಕಾಯಿಲೆ ಕೇಂದ್ರವಾಗುತ್ತಿದೆ. ಮಧುಮೇಹ ಕಾಯಿಲೆ ಅಲ್ಲ. ಅದನ್ನು ನಿಯಂತ್ರಿಸುವ ಶಕ್ತಿ ನಮ್ಮಲ್ಲಿಯೆ ಇರುತ್ತದೆ. ನಿಯಮಿತ ಆಹಾರ, ವ್ಯಾಯಾಮ, ವಾಕಿಂಗ್ ರೂಢಿಸಿಕೊಂಡರೆ ಅನೇಕ ಕಾಯಿಲೆಗಳಿಂದ ದೂರವಿರಲು ಸಾಧ್ಯವಿದೆ ಎಂದು ಹೇಳಿದರು.
ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ, ಸಾಹಿತ್ಯ ಪರಿಷತ್ ಕಾರ್ಯದರ್ಶಿ ಜಿ.ನಾಗೇಶ್ ಉಪಸ್ಥಿತರಿದ್ದರು. ಡಾ.ಪ್ರಸನ್ನ ಸ್ವಾಗತಿಸಿ, ಲೋಕೇಶಕುಮಾರ್ ವಂದಿಸಿ, ನಾರಾಯಣಮೂರ್ತಿ ನಿರೂಪಿಸಿದರು.