ಕನ್ನಡಪ್ರಭ ವಾರ್ತೆ ಸಿದ್ದಾಪುರ
ಸ್ಥಳೀಯ ಲಯನ್ಸ್ ಕ್ಲಬ್ ವತಿಯಿಂದ ಪಟ್ಟಣದ ಬಾಲಭವನದಲ್ಲಿ ನಡೆದ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಸಿ.ಎಲ್.ಎಲ್.ಐ. ವಿಭಾಗದ ಜಿಲ್ಲಾ ಸಂಯೋಜಕ ಅಶೋಕ ಹೆಗಡೆ ಶಿರಸಿ ತರಬೇತಿ ನೀಡಿ ಲಯನ್ಸ್ ಸಂಸ್ಥೆ ಯಾವಾಗಲೂ ಉತ್ತಮ ನಾಯಕತ್ವದ ಬೆಳವಣಿಗೆಗೆ ಶ್ರಮಿಸುತ್ತಿದ್ದು ಅನೇಕ ಜನಪರ ಕಾರ್ಯ ಕೈಗೊಳ್ಳುತ್ತಿದೆ. ಸೇವಾತತ್ಪರ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಸೇರ್ಪಡೆಗೊಳಿಸಿಕೊಂಡು ಎಲ್ಲರೂ ಕ್ಲಬ್ಬಿನ ಹಂತದಲ್ಲಿ ಅಧ್ಯಕ್ಷರಾಗಿ ಹಾಗೆಯೇ ಜಿಲ್ಲಾ ಹಂತದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿಕೊಂಡು ಬರಲು ಅವಕಾಶವಿದೆ. ತನ್ಮೂಲಕ ಜವಾಬ್ದಾರಿ ಹಾಗೂ ಕರ್ತವ್ಯದ ಅರಿವನ್ನು ಹೆಚ್ಚಿಸಲು ಸಾಧ್ಯ ಎಂದರು.ಹಿರಿಯ ಸದಸ್ಯರಾದ ಜಿ.ಜಿ. ಹೆಗಡೆ ಹಾಗೂ ಶ್ಯಾಮಲಾ ಹೆಗಡೆ ಹೂವಿನ್ಮನೆ, ಎಂ.ಆರ್. ಪಾಟೀಲ ಹೊಸೂರು, ಆರ್.ಎಂ. ಪಾಟೀಲ ಹೊಸೂರು, ನಾಗರಾಜ ಪಾಟೀಲ ಮಳವತ್ತಿ, ವೀಣಾ ಶೇಟ್, ಅನಿಲ್ ದೇವನಳ್ಳಿ, ನವೀನ ಪೈ ಇಟಗಿ, ಗಣೇಶ ಪೈ ಇಟಗಿ, ದರ್ಶನ ಶೇಟ್ ಸಿದ್ದಾಪುರ, ವಿನಾಯಕ ಕೆ.ಆರ್., ರಾಘವೇಂದ್ರ ಭಟ್, ಕುಮಾರ ಗೌಡರ್ ಹೊಸೂರು, ಆಕಾಶ ಹೆಗಡೆ ಗುಂಜಗೋಡ ಮುಂತಾದವರು ತರಬೇತಿಯಲ್ಲಿ ಭಾಗವಹಿಸಿದ್ದರು.
ಲಯನ್ಸ್ ಕ್ಲಬ್ ಅಧ್ಯಕ್ಷ ರಾಘವೇಂದ್ರ ಆರ್. ಭಟ್ಟ ಕಲ್ಲಾಳ ಸ್ವಾಗತಿಸಿದರು. ಕಾರ್ಯದರ್ಶಿ ಆಕಾಶ ಹೆಗಡೆ ಗುಂಜಗೋಡ ಧ್ವಜವಂದನೆ ನೆರವೇರಿಸಿದರು.