ಶಿಕ್ಷಕರ ಪರಿಶ್ರಮ, ವಿದ್ಯಾರ್ಥಿಗಳ ಕಲಿಕೆಯಿಂದ ಉತ್ತಮ ಫಲಿತಾಂಶ: ಆರ್.ಎಸ್. ಬುರಡಿ

KannadaprabhaNewsNetwork |  
Published : Apr 26, 2026, 03:15 AM IST
ಶಿಬಿರದಲ್ಲಿ ಡಿಡಿಪಿಐ ಆರ್‌.ಎಸ್‌.ಬುರಡಿ ಮಾತನಾಡಿದರು. | Kannada Prabha

ಸಾರಾಂಶ

ವಿದ್ಯಾರ್ಥಿಗಳ ನಿರಂತರ ಅಧ್ಯಯನ ಹಾಗೂ ಶಿಕ್ಷಕರ ಗುಣಾತ್ಮಕ ಕಲಿಸುವಿಕೆಯಿಂದಾಗಿ ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಗೊಂಡಿದೆ ಎಂದು ಡಿಡಿಪಿಐ ಆರ್.ಎಸ್. ಬುರಡಿ ಹೇಳಿದರು.

ಗದಗ: ವಿದ್ಯಾರ್ಥಿಗಳ ನಿರಂತರ ಅಧ್ಯಯನ ಹಾಗೂ ಶಿಕ್ಷಕರ ಗುಣಾತ್ಮಕ ಕಲಿಸುವಿಕೆಯಿಂದಾಗಿ ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಗೊಂಡಿದೆ ಎಂದು ಡಿಡಿಪಿಐ ಆರ್.ಎಸ್. ಬುರಡಿ ಹೇಳಿದರು.

ಬೆಟಗೇರಿಯ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯ ಸಂಸ್ಥೆಯಲ್ಲಿ ಶನಿವಾರ ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ ಹಾಗೂ ಐಎಂಎ ಶತಮಾನೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಖಗೋಳ ವಿಸ್ಮಯ ಉಚಿತ ಬೇಸಿಗೆ ಶಿಬಿರ 10ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷಕರಿಂದ ವಿದ್ಯಾರ್ಥಿಗಳ ಮನೆ ಭೇಟಿ, ಅಧಿಕಾರಿಗಳ ನಿರಂತರ ಭೇಟಿ ಹಾಗೂ ಮಾರ್ಗದರ್ಶನ, ವಿಶೇಷ ಕಾರ್ಯಾಗಾರ, ವಸತಿ ನಿಲಯದ ವಿದ್ಯಾರ್ಥಿಗಳಿಗೆ ಸಂಜೆ ವಿಶೇಷ ಮಾರ್ಗದರ್ಶನ, ಸಂಪನ್ಮೂಲ ಶಿಕ್ಷಕರಿಂದ ಸಂದೇಹ ನಿವಾರಣೆ, ವಿವಿಧ ತಾಲೂಕುಗಳಲ್ಲಿ ವಸತಿಯುತ ತರಬೇತಿಗಳು, ಪ್ರೇರಣ ಕಾರ್ಯಾಗಾರಗಳು, ನಿಧಾನ ಕಲಿಕೆ ಹಾಗೂ ಮೇಧಾವಿ ವಿದ್ಯಾರ್ಥಿಗಳಿಗಾಗಿ ವಿಶೇಷ ಶಿಬಿರಗಳ ಫಲಶೃತಿಯೇ ಈ ಉತ್ತಮ ಫಲಿತಾಂಶವಾಗಿದೆ. ಗದಗ ಜಿಲ್ಲೆಯ ಎಲ್ಲ ಶಾಲೆಗಳ ಫಲಿತಾಂಶ ಉತ್ತಮಗೊಳ್ಳಲು ಶ್ರಮಿಸಿದವರು ಅಭಿನಂದನಾರ್ಹರು ಎಂದರು.

ನಿವೃತ್ತ ಡಿಡಿಪಿಐ ಎ.ಎನ್. ನಾಗರಳ್ಳಿ ಮಾತನಾಡಿ, ಸರ್ಕಾರಿ ಶಾಲೆಯ ಉನ್ನತೀಕರಣ ನಮ್ಮ ಸಮೂಹದ ಜವಾಬ್ದಾರಿ. ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕಾಗಿ ನಾವೆಲ್ಲರೂ ಕಂಕಣಬದ್ಧರಾಗುವುದು ಅಗತ್ಯ. ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಸಮುದಾಯ ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಮಾತ್ರ ಶಿಕ್ಷಣದ ಗುಣಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯ ಎಂದರು.

ತಾರಾಲಯದ ಮಹತ್ವ ಕುರಿತು ಬಾಲ್ಯದಲ್ಲಿಯೇ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುವುದು ಅಗತ್ಯ. ಪ್ರಶ್ನಿಸುವ ಮನೋಭಾವ, ಪರಿಶೀಲನೆ, ಅನುಮಾನಗಳಿಗೆ ಉತ್ತರ ಹುಡುಕುವ ಪ್ರವೃತ್ತಿ ಬೆಳೆದಾಗ ಮಾತ್ರ ಅವರು ನಿಜವಾದ ಅರ್ಥದಲ್ಲಿ ಜ್ಞಾನಿಗಳಾಗುತ್ತಾರೆ. ಇದೇ ಮನೋಭಾವ ಅವರನ್ನು ಮುಂದಿನ ದಿನಗಳಲ್ಲಿ ಪುಟಾಣಿ ವಿಜ್ಞಾನಿಗಳಾಗಲು ಪ್ರೇರೇಪಿಸುತ್ತದೆ. ಆದ್ದರಿಂದ, ಶಿಕ್ಷಣದ ಜೊತೆ ವೈಜ್ಞಾನಿಕ ಚಿಂತನೆ ಬೆಳೆಸುವ ಕಾರ್ಯವನ್ನು ನಾವು ಎಲ್ಲರೂ ಕೈಜೋಡಿಸಿ ಮುಂದುವರೆಸಿದಾಗ ಮಾತ್ರ, ನಮ್ಮ ಸರ್ಕಾರಿ ಶಾಲೆಗಳು ಮಾದರಿ ಶಿಕ್ಷಣ ಕೇಂದ್ರಗಳಾಗಿ ರೂಪುಗೊಳ್ಳುತ್ತವೆ ಎಂದರು.

ನಿವೃತ್ತ ಡಿಡಿಪಿಐ ಐ.ಬಿ. ಬೆನಕೊಪ್ಪ ಮಾತನಾಡಿ, ವಿದ್ಯಾರ್ಥಿಗಳು ಯಾವಾಗಲೂ ಅಧ್ಯಯನಶೀಲರಾಗಬೇಕು ಎಲ್ಲವನ್ನೂ ಕುತೂಹಲ ದೃಷ್ಟಿಯಲ್ಲಿ ನೋಡಬೇಕು. ಸರ್ಚ್ ಮತ್ತು ರಿಸರ್ಚ್ ಮಾಡಿದಾಗ ಮಾತ್ರ ಹೊಸತನವನ್ನು ಕಂಡುಕೊಳ್ಳಲು ಸಾಧ್ಯ. ಆಶಯ ಕಂಗಳಿಂದ ಆಕಾಶ ನೋಡಬೇಕು ಎಂದರು.

ನಿವೃತ್ತ ಉಪನಿರ್ದೆಶಕ ಎಸ್.ಡಿ. ಗಾಂಜಿ, ಎ.ಎನ್. ನಾಗರಳ್ಳಿ, ಐ.ಬಿ. ಬೆನಕೊಪ್ಪ ಹಾಗೂ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಗೊಳ್ಳಲು ಕಾರಣರಾದ ಡಿಡಿಪಿಐ ಆರ್.ಎಸ್. ಬುರಡಿ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳಾದ ಎಂ.ಎಚ್. ಸವದತ್ತಿ, ಎಂ.ಎ. ಯರಗುಡಿ, ಶಾಮ ಲಾಂಡೆ, ವಿಜಯ ಕುಮಾರ ಕಪ್ಲಿ, ಬಸವರಾಜ ಕಡಿವಾಲ, ಸಾಗರ ಅಂಗಡಿ, ಸದಾನಂದ ಸೇರಿದಂತೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಶ್ವದರ್ಶನದಲ್ಲಿ ಮೇ ೨ರಂದು ಬೃಹತ್ ಉದ್ಯೋಗ ಮೇಳ
ಪ್ರಾಮಾಣಿಕ ಶ್ರಮದಿಂದ ಸಿಕ್ಕ ಗೆಲುವು ನಿಜವಾದುದು: ರಾಜೇಶ್ ಧನವಾಡಕರ್