ಮಾತೃಭೂಮಿ ಸಂಘದಿಂದ ಉತ್ತಮ ಸಮಾಜ ಸೇವೆ

KannadaprabhaNewsNetwork |  
Published : Jun 19, 2025, 11:50 PM IST
ಪೋಟೋಸಮಾರೋಪ ಸಮಾರಂಭದಲ್ಲಿ ಭೂಮಿ ಸಂಘದ ಪದಾಧಿಕಾರಿಗಳಿಗೆ ಸಮುದಾಯ ಆರೋಗ್ಯ ಕೇಂದ್ರದಿಂದ ಸನ್ಮಾನಿಸಲಾಯಿತು.   | Kannada Prabha

ಸಾರಾಂಶ

ಮಾತೃಭೂಮಿ ಸಂಘದ ಕಾರ್ಯ ಜನಮಾನಸದಲ್ಲಿ ಉಳಿಯುವಂತೆ ಆಗಿದ್ದು, ಈ ಬಾರಿ 284 ಶಿಬಿರಾರ್ಥಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕಣ್ಣಿನ ಸಮಸ್ಯೆ ಅಥವಾ ಚಿಕಿತ್ಸೆ ಮಾಡಿಸಿಕೊಳ್ಳುವವರು ಬೆಂಗಳೂರಿನ ವಿವೇಕಾನಂದ ಕಣ್ಣಿನ ಆಸ್ಪತ್ರೆಗೆ ಬಂದು ಸದುಪಯೋಗ ಪಡೆದುಕೊಳ್ಳಬೇಕು.

ಕನಕಗಿರಿ:

ಮಾತೃಭೂಮಿ ಯುವಶಕ್ತಿ ಸಂಘದ ಸದಸ್ಯರು 2800ಕ್ಕೂ ಹೆಚ್ಚು ಜನರಿಗೆ ಶಸ್ತ್ರ ಚಿಕಿತ್ಸೆ ಮಾಡಿಸುವ ಮೂಲಕ ಉತ್ತಮ ಸಮಾಜ ಸೇವೆ ಮಾಡಿದ್ದಾರೆ ಎಂದು ವೈದ್ಯ ಚೇತನಕುಮಾರ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ಸಂಘ ಹಾಗೂ ಮಾತೃಭೂಮಿ ಯುವಶಕ್ತಿ ಸಂಘದಿಂದ ಹಮ್ಮಿಕೊಂಡಿದ್ದ ಬೃಹತ್ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.

ಮಾತೃಭೂಮಿ ಸಂಘದ ಕಾರ್ಯ ಜನಮಾನಸದಲ್ಲಿ ಉಳಿಯುವಂತೆ ಆಗಿದ್ದು, ಈ ಬಾರಿ 284 ಶಿಬಿರಾರ್ಥಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕಣ್ಣಿನ ಸಮಸ್ಯೆ ಅಥವಾ ಚಿಕಿತ್ಸೆ ಮಾಡಿಸಿಕೊಳ್ಳುವವರು ಬೆಂಗಳೂರಿನ ವಿವೇಕಾನಂದ ಕಣ್ಣಿನ ಆಸ್ಪತ್ರೆಗೆ ಬಂದು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ನಂತರ ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಸಹನಾ ಮಾತನಾಡಿ, ಮಾತೃಭೂಮಿ ಯುವಶಕ್ತಿ ಸಂಘದವರು ಅಚ್ಚುಕಟ್ಟಾಗಿ ಶಿಬಿರ ನಡೆಸಿದ್ದಾರೆ. ಕಣ್ಣಿಲ್ಲದವರಿಗೆ ಶಸ್ತ್ರಚಿಕಿತ್ಸೆ ನೀಡುವ ಮೂಲಕ ವಿವೇಕಾನಂದ ಕಣ್ಣಾಸ್ಪತ್ರೆ ಬೆಳಕಾಗಿದ್ದಾರೆ ಎಂದು ಪ್ರಶಂಶಿಸಿದರು.

ಈ ವೇಳೆ ನೇತ್ರಾಧಿಕಾರಿ ಮುರ್ತುಜಾಸಾಬ್‌, ವಿವೇಕಾನಂದ ಕಣ್ಣಾಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಗೋಪಾಲಕೃಷ್ಣ ಬೆಂಗಳೂರು, ವೈದ್ಯೆ ವಸಂತಾ, ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯ ಮಲ್ಲೇಶಪ್ಪ, ಆರೋಗ್ಯ ಸಹಾಯಕ ರಮೇಶ, ಮಾತೃಭೂಮಿ ಸಂಘದ ಉಪಾಧ್ಯಕ್ಷ ರಮೇಶ ಸೂಡಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!