ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಕಾಯಕದೊಂದಿಗೆ ಸತ್ಯಾಗ್ರಹ:
ಮನೆಯೊಳಗಿನ ಯಂತ್ರಗಳನ್ನು ಸತ್ಯಾಗ್ರಹ ಸ್ಥಳಕ್ಕೆ ತಂದು ನೂಲು ಸುತ್ತುವ ಮೂಲಕ ಹೋರಾಟಕ್ಕೆ ಇಳಿದಿರುವುದು ವಿಶೇಷ. ಉದ್ಯೋಗ ಭದ್ರತೆಗೆ ಅವಕಾಶ ನೀಡಬೇಕು. ಸಾಲ ಸೌಲಭ್ಯಕ್ಕೆ ಸರ್ಕಾರ ಸೂಕ್ತ ದಾಖಲೆ ಒದಗಿಸುವ ಮೂಲಕ ಸಹಕಾರ ನೀಡುವಂತೆ ಸತ್ಯಾಗ್ರಹಿಗಳ ಒತ್ತಾಯವಾಗಿದೆ.ಡಚ್ ಯೋಜನೆಯಡಿ ೩೦೦ಕ್ಕೂ ಅಧಿಕ ಮನೆಗಳು ನಿರ್ಮಾಣವಾಗಿ ೨೦ ವರ್ಷಗಳೇ ಗತಿಸಿವೆ. ಇಂದಿಗೂ ಉತಾರ ಹಂಚಿಕೆಯಾಗಿಲ್ಲ. ನೂರಕ್ಕೂ ಅಧಿಕ ಕುಟುಂಬಗಳು ಬಾಡಿಗೆ ಮನೆಯಲ್ಲಿ ವಾಸವಿದ್ದು, ಅಂಥವರಿಗೆ ಸೂರು ಇಲ್ಲದ ಕಾರಣ ಬಾಡಿಗೆ ಹಣ ನೀಡಿ ಕುಟುಂಬ ನಿರ್ವಹಣೆ ಮಾಡುವುದು ನೇಕಾರ ವರ್ಗಕ್ಕೆ ಸಮಸ್ಯೆ ತೀವೃವಾಗಿದೆ ಎಂದು ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರ್ಕಿ ತಿಳಿಸಿದರು.
ವೈಯಕ್ತಿಕ ಶೌಚ ನಿರ್ಮಾಣಕ್ಕೆ ಸರ್ಕಾರದ ನೆರವಿಲ್ಲ. ಸರ್ಕಾರದ ಯೋಜನೆಗಳಂತು ನೇಪಥ್ಯಕ್ಕೆ ಸರಿದಿವೆ. ಹೀಗಾಗಿ ನೇಕಾರರು ಭದ್ರತೆಯಿಲ್ಲದ ಬದುಕು ಸಾಗಿಸುತ್ತಿದ್ದು, ಸರ್ಕಾರ ಹಾಗೂ ನಿಗಮ ಶೀಘ್ರವೇ ಮಧ್ಯಸ್ಥಿಕೆ ವಹಿಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಮನವಿ ಮಾಡಿದರು.ಕಳೆದ ಆರು ದಿನಗಳಿಂದ ಧರಣಿ ನಡೆಸುತ್ತಿದ್ದೇವೆ. ಯಾವೊಬ್ಬ ಪ್ರತಿನಿಧಿ ಅಥವಾ ಅಧಿಕಾರಿ ಸ್ಪಂದನೆ ನೀಡದಿರುವುದು ಬೇಸರ ತಂದಿದೆ. ನೇಕಾರನ ಮರ್ಯಾದೆ ಅಳಿಯುವ ಸಂದರ್ಭ ಸಹಾಯಕ್ಕೆ ಬಾರದಿರುವುದು ನಾಚಿಕೆಗೇಡಿನ ಸಂಗತಿ.
ದ್ರಾಕ್ಷಾಯಿಣಿ ಅಂಬಿ, ನೇಕಾರ ಮಹಿಳೆ ಬನಹಟ್ಟಿ