ಧಾರವಾಡ: ಧರ್ಮಸ್ಥಳದ ವಿರುದ್ಧ ಷಡ್ಯಂತ್ರದಲ್ಲಿ ಸರ್ಕಾರದ ಪಾತ್ರವಿದೆ. ಸಿದ್ದರಾಮಯ್ಯ ನಾಸ್ತಿಕವಾದಿ, ಹಿಂದೂ ವಿರೋಧಿ. ಇದರ ಹಿಂದೆ ಅವರ ಕೈವಾಡ ಇದೆ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ ಆರೋಪಿಸಿದರು.
ಸೆಂಥಿಲ್ ಎಂಬ ಎಂಪಿ ಬಗ್ಗೆ ಸಂಶಯವಿದೆ. ಅವನೊಬ್ಬ ಕ್ರಿಶ್ಚಿಯನ್. ಇವರ ಹೈಕಮಾಂಡ್ ಸೋನಿಯಾ ಗಾಂಧಿ, ಪ್ರಿಯಾಂಕಾ, ರಾಹುಲ್ ಗಾಂಧಿ ಕೂಡ ಕ್ರಿಶ್ಚಿಯನ್. ಇದು ಮುಗಿದ ಮೇಲೆ ಇನ್ನೊಂದು ತೆಗೆದುಕೊಳ್ಳುತ್ತಾರೆ. ಹಿಂದೂ ಶಾಂತ ಇದ್ದಾನೆ ಎಂದು ದುರ್ಲಾಭ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಸಮೀರ್ ಎಂಬಾತ ಮುಸ್ಲಿಮರ ಅತ್ಯಾಚಾರ, ದೌರ್ಜನ್ಯ ಬಗ್ಗೆ ತೋರಿಸಿದ್ದಾನಾ? ಮಸೀದಿ, ಮದರಸಾಗಳಲ್ಲಿ ದೌರ್ಜನ್ಯ ನಡೆದಿದೆ. ಈ ಬಗ್ಗೆ ಏನಾದರೂ ತೋರಿಸಿದ್ದಾನಾ? ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಕ್ರಿಶ್ಚಿಯನ್ನರು, ಕಮ್ಯುನಿಸ್ಟರು, ಮುಸ್ಲಿಮರು ಇದ್ದಾರೆ. ಇವರೊಂದಿಗೆ ಕಾಂಗ್ರೆಸ್ನ ಕೆಲವರು ಕೈಜೋಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.ನಿಮಗೆ ಧರ್ಮಸ್ಥಳವೇ ಏಕೆ ಬೇಕು? ಧರ್ಮಸ್ಥಳ ಹಿಂದೂಗಳ ಪವಿತ್ರ ಸ್ಥಳ, ಹೀಗಾಗಿ ಇದನ್ನು ಮಾಡಲಾಗುತ್ತಿದೆ. ತನಿಖೆ ಆದ ಮೇಲೆ ಕಥೆ ಕಟ್ಟಿದವರು, ಅವರಿಗೆ ಬೆಂಬಲ ನೀಡಿದವರಿಗೆ ಗುಂಡು ಹೊಡೆಯಿರಿ. ಇಲ್ಲದೇ ಹೋದರೆ ಇದೇ ಮುಂದುವರಿಯಲಿದೆ. ಇವತ್ತು ಧರ್ಮಸ್ಥಳ, ನಾಳೆ ತಿರುಪತಿ, ನಾಡಿದ್ದು ಮತ್ತೊಂದು. ನಮ್ಮ ಶ್ರದ್ಧೆ ಭಂಗ ಮಾಡುವ ಷಡ್ಯಂತ್ರ ನಡೆದಿದೆ. ಇದನ್ನು ನಾವು ವಿರೋಧಿಸುತ್ತೇವೆ. ರಾಜ್ಯದ ಜನ ಧರ್ಮಸ್ಥಳ ಪರ ನಿಂತಿದ್ದು ಸಂತಸದ ಸಂಗತಿ. ಅದಕ್ಕೆ ನಾನು ಸ್ವಾಗತಿಸುತ್ತೇನೆ ಎಂದರು.