ಕಾರವಾರ: ತಾಲೂಕಿನ ಅರಗಾದ ಕದಂಬ ನೌಕಾನೆಲೆಯ ನೇವಿ ಹೌಸ್ನಲ್ಲಿ ಬುಧವಾರ ಭಾರತೀಯ ನೌಕಾ ದಿನ ಕಾರ್ಯಕ್ರಮ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರ ಸಮ್ಮುಖದಲ್ಲಿ ಜರುಗಿತು.ನೌಕಾಸೇನೆಯ ಬ್ಯಾಂಡ್ ತಂಡದಿಂದ ನುಡಿಸಿದ ದೇಶಭಕ್ತಿಗೀತೆ ಕೇಳುಗರ ಮನಸೂರೆಗೊಳಿಸಿತು. ಮಕ್ಕಳ ನೃತ್ಯ ಕಾರ್ಯಕ್ರಮಗಳು ಜನರುಗಿತು.
ಕಾರವಾರ: ನಗರದ ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿ ಡಿ. ೧೮ರಿಂದ ೨೨ರ ವರೆಗೆ ಬೀಚ್ ಕಾರ್ನಿವಲ್, ಕಡಲ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಇಲ್ಲಿನ ಸ್ಟಾರ್ ಚಾಯ್ಸ್ ಸಂಸ್ಥೆಯ ರಾಜನ್ ಬಾನವಾಳಿಕರ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಉತ್ಸವದಲ್ಲಿ ಆಕರ್ಷಕ ಅಮ್ಯೂ ಸ್ಟೆಂಟ್ ಪಾರ್ಕ್ ಮತ್ತು ಸ್ಮಾಲ್ಗಳನ್ನು ಹಾಕಲಾಗುವುದು. ಮಯೂರವರ್ಮ ವೇದಿಕೆಯಲ್ಲಿ ಯಕ್ಷಗಾನ, ಭರತನಾಟ್ಯ, ರೂಪಕ ನೃತ್ಯ, ಡೊಳ್ಳು ಕುಣಿತ, ಜಾನಪದ ಉತ್ಸವ, ರಸಮಂಜರಿಯಂತಹ ಮನರಂಜನಾ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದರು.ಡಿ. ೨೨ರಂದು ಬೆಳಗ್ಗೆ ೭ ಗಂಟೆಗೆ ಬೀಚ್ ರನ್ನಿಂಗ್ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ. ಈ ಐದು ದಿನದ ಕಾರ್ಯಕ್ರಮದಲ್ಲಿ ಬಾಲಿವುಡ್, ಸ್ಯಾಂಡಲ್ವುಡ್ ಗಾಯಕರು ಕಲಾ ಪ್ರದರ್ಶನ ನೀಡಲಿದ್ದಾರೆ ಎಂದರು.ಪ್ರಕಾಶ ನಾಯ್ಕ, ಸುನೀಲ್ ಥಾಮ್ಸೆ, ರೂಪಲ್ ನೇತಳಕರ್, ಶ್ರೀಪಾದ ನಾಯ್ಕ, ರೋಹಿದಾಸ್ ಬಾನಾವಳಿ, ಜ್ಯೋತಿ ನಾಯ್ಕ, ಯಶೋಧ ಶೇಖರ್, ಆಶಾ ನಾಯ್ಕ ಮೊದಲಾದವರು ಇದ್ದರು.