ಕನ್ನಡಪ್ರಭ ವಾರ್ತೆ ಮಂಡ್ಯ
ಈ ವೇಳೆ ಮಾತನಾಡಿದ ಟ್ರಸ್ಟ್ ಅಧ್ಯಕ್ಷೆ ಜಯಶೀಲಮ್ಮ, ಲೋಕ ಕಲ್ಯಾಣಾರ್ಥವಾಗಿ ಇಂದು ದೇವಾಲಯದಲ್ಲಿ ಶ್ರೀವರಸಿದ್ಧಿ ವಿನಾಯಕ ಶ್ರೀಕಂಠೇಶ್ವರ ಮತ್ತು ಪಾವರ್ತಿ ಅಮ್ಮನವರ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರದ್ಧಾಭಕ್ತಿಯಿಂದ ಪ್ರಾರ್ಥನೆ ಸಮರ್ಪಿಸಿದೇವೆ ಎಂದರು.
ಮಹಿಳಾ ಮಂಡಳಿ ಪದಾಧಿಕಾರಿಗಳು ಒಗ್ಗೂಡಿ, ಸಾರ್ವಜನಿಕರು ಮತ್ತು ದಾನಿಗಳ ಸಹಕಾರದಿಂದ ದೇವಾಲಯ ನಿರ್ಮಿಸಿ, ಇಂದಿಗೆ 19 ವರ್ಷಗಳಾಗಿವೆ. ಲೋಕದ ಜನತೆ ನೆಮ್ಮದಿಯಾಗಿ ಬದುಕಲಿ, ಸಕಾಲಕ್ಕೆ ಮಳೆ ಬೆಳೆ ಜನರ ಕೈಸೇರಲಿ, ಕಷ್ಟಗಳು ಪರಿಹಾರವಾಗಲಿ ಎಂಬುದು ನಮ್ಮ ಸದುದ್ದೇಶವಾಗಿದೆ ಎಂದರು.ಇಂದು ಬಿಸಿಲು ಮಾರಮ್ಮ ದೇವಾಲಯದಿಂದ 108 ಕಳಸ ಮೆರವಣಿಗೆ ಮಾಡಲು ಜಾನಪದ ಡೋಳ್ಳು ಮತ್ತು ನಾದ ಮೇಳದೊಂದಿಗೆ ಟಿ.ನರಸೀಪುರದ ತ್ರಿವೇಣಿ ಸಂಗ್ರಮದ ಜಲ ಮತ್ತು ಶ್ರೀರಂಗಪಟ್ಟದ ಲೋಕಪಾವನಿ ಜಲ ತಂದು ವಿಶೇಷವಾಗಿ ಪೂಜೆ ಸಲ್ಲಿಸಿ, ದೇವಾಲಯದ ವರಗೆ ಮಹಿಳೆಯರು ಮತ್ತು ಮಕ್ಕಳು ಮೆರವಣಿಗೆ ನಡೆಸಿದೆವು ಎಂದರು.
ಲಕ್ಷ್ಮೀದೇವಿ ದೇಗುಲ ಲೋಕಾರ್ಪಣೆ ಸುಸಂಪನ್ನ
ಬೋಳಮಾರನಹಳ್ಳಿಯಲ್ಲಿ ನೂತನವಾಗಿ ಲಕ್ಷ್ಮೀದೇವಿ ದೇಗುಲ ಲೋಕಾರ್ಪಣೆ ಪೂಜಾ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.
ಪುಣ್ಯಾವಾಚನ, ತೀರ್ಥಸಂಗ್ರಹ, ರಕ್ಷಾಬಂಧನ, ಅಂಕುರಾರ್ಪಣ, ದೀಪ ಕುಂಭ ಆರಾಧನೆ, ಬೀರಿತಾಂಡವ ಪೂಜೆ, ವಾಸ್ತು ಆರಾಧನೆ, ವಾಸ್ತು, ಗಣಪತಿ, ನವಗ್ರಹ, ಶಾಂತಿಹೋಮ, ಅಷ್ಟಲಕ್ಷ್ಮೀ, ಗ್ರಾಮ ದೇವತಾ ಹೋಮ, ಪಂಚಗವ್ಯಅಮ್ಮನವರಿಗೆ ಬಿಂಬನ್ಯಾಸಾದಿಗಳ, ಆದಿವಾಸಗಳ ಮಹಾಪೂಜೆ, ಸುಪ್ರಭಾತ ಸೇವೆ, ಅಷ್ಟಾವಧಾನ ಸೇವೆ, ಕಲಶ, ನವಗ್ರಹ ಆರಾಧನೆ, ಪ್ರಾಣ ಪ್ರತಿಷ್ಟಾಪನೆ, ನೇತ್ರೋನ್ಮಿಲನ, ಕಳಶಾರಾಧನೆ, ಕುಂಭಾಬಿಷೇಕ, ಪಂಚಾಮೃತ ಸೇವೆ, ಪುಷ್ಪಾಲಂಕಾರ ಸೇವೆ, ಮಹಾ ಮಂಗಳಾರತಿ, ತೀರ್ಥಪ್ರಸಾದ, ಅನ್ನದಾಸೋಹ ಸೇವೆ ವಿಜೃಂಭಣೆಯಿಂದ ಜರುಗಿತು.