ಹಸ್ತ ನಕ್ಷತ್ರದಂದು ಶ್ರೀಬದರೀನಾರಾಯಣಸ್ವಾಮಿ ಜಯಂತಿ ವೈಭವ

KannadaprabhaNewsNetwork |  
Published : Aug 17, 2026, 02:00 AM IST
16ಕೆಎಂಎನ್ ಡಿ25 | Kannada Prabha

ಸಾರಾಂಶ

ಅರವಿಂದವಲ್ಲೀ ಸಮೇತನಾದ ಬದರೀನಾರಾಯಣಸ್ವಾಮಿಗೆ ಬೆಳಗ್ಗೆ ವೇದಮಂತ್ರ ಮತ್ತು ಮಂಗಳವಾದ್ಯದೊಂದಿಗೆ ಅಭಿಷೇಕ ನೆರವೇರಿತು. ಹಾಲು, ಮೊಸರು, ಜೇನು, ಹರಿಷಿಣ ಮುಂತಾದ ಮಂಗಳದ್ರವ್ಯಗಳಿಂದ ಸ್ನಪನಪೂರ್ವಕವಾಗಿ ಅಭಿಷೇಕ ನೆರವೇರಿತು.

ಮೇಲುಕೋಟೆ: ದಕ್ಷಿಣ ಬದರೀಕಾಶ್ರಮವೂ ಕ್ಷೇತ್ರ ದೇವತೆ ಶ್ರೀಬದರೀನಾರಾಯಣಸ್ವಾಮಿ ಜಯಂತಿ ಹಸ್ತ ನಕ್ಷತ್ರದ ಶುಭದಿನವಾದ ಭಾನುವಾರ ವೈಭವದಿಂದ ನೆರವೇರಿತು.

ಚೆಲುವನಾರಾಯಣಸ್ವಾಮಿ ದೇವಾಲಯಕ್ಕಿಂತ ಪುರಾತನವಾದ ದೇಗುಲದ ಶ್ರೀಸ್ವಾಮಿ ಸನ್ನಿದಿಯಲ್ಲಿ ಜಯಂತ್ಯುತ್ಸವದ ಧಾರ್ಮಿಕ ಕೈಂಕರ್ಯಗಳು ಅರ್ಥಪೂರ್ಣವಾಗಿ ನೆರವೇರಿದವು.

ಅರವಿಂದವಲ್ಲೀ ಸಮೇತನಾದ ಬದರೀನಾರಾಯಣಸ್ವಾಮಿಗೆ ಬೆಳಗ್ಗೆ ವೇದಮಂತ್ರ ಮತ್ತು ಮಂಗಳವಾದ್ಯದೊಂದಿಗೆ ಅಭಿಷೇಕ ನೆರವೇರಿತು. ಹಾಲು, ಮೊಸರು, ಜೇನು, ಹರಿಷಿಣ ಮುಂತಾದ ಮಂಗಳದ್ರವ್ಯಗಳಿಂದ ಸ್ನಪನಪೂರ್ವಕವಾಗಿ ಅಭಿಷೇಕ ನೆರವೇರಿತು. ಮಧ್ಯಾಹ್ನ ದಿವ್ಯಪ್ರಬಂಧ ಪಾರಾಯಣ ಹಾಗೂ ಮಹಾ ಮಂಗಳಾರತಿ ಶಾತ್ತುಮೊರೈ ನೆರವೇರಿತು. ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಪರಿಶ್ರಮದಲ್ಲಿ ಬದರೀನಾರಾಯಣಸ್ವಾಮಿ ಜಯಂತ್ಯುತ್ಸವದ ಕಾರ್ಯಕ್ರಮಗಳು ಶ್ರದ್ಧಾಭಕ್ತಿಂದ ನೆರವೇರಿದವು. ಈ ವೇಳೆ ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ನೂರಾರು ಭಕ್ತರು ಭಾಗವಹಿಸಿದ್ದರು.

ದೇಗುಲಕ್ಕೆ ಬೇಕಿದೆ ಕಾಯಕಲ್ಪ:

ರಾಜ್ಯಪ್ರಾಚ್ಯವಸ್ತು ಇಲಾಖೆಗೆ ಸೇರಿದ ಪುರಾತನ ಬದರೀನಾರಾಯಣಸ್ವಾಮಿ ದೇಗುಲ ಮಳೆ ವೇಳೆ ಕೊಳದಂತಾಗುತ್ತಿದ್ದು ತೊಲೆಗಳು ಕುಸಿದಿದ್ದು ಗೋಡೆ ಬಿರುಕು ಬಿಟ್ಟು ಅಪಾಯವನ್ನು ಆಹ್ವಾನಿಸುವ ಹಂತ ತಲುಪಿ ನಾಲ್ಕು ವರ್ಷವಾಗುತ್ತಾ ಬಂದಿದ್ದರೂ ಅಧಿಕಾರಿಗಳು ದೇಗುಲದ ಜೀರ್ಣೋದ್ಧಾರಕ್ಕೆ ಕ್ರಮವಹಿಸಿಲ್ಲ ಎಂದು ಭಕ್ತರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಇಲಾಖೆ ಎಂಜಿನಿಯರ್‌ಗಳು ಸ್ಥಳಪರಿಶೀಲನೆ ಮಾಡಿ ತುರ್ತು ರಿಪೇರಿಗೆ ಇಲಾಖೆಗೆ ವರದಿ ನೀಡಿದ್ದು, ಅಭಿವೃದ್ಧಿಗೆ ಕ್ರಮವಹಿಸಿಲ್ಲ. ಕೂಡಲೇ ಅಧಿಕಾರಿಗಳು ಸನ್ನಿಧಿಯನ್ನು ಜೀರ್ಣೋದ್ಧಾರ ಮಾಡಲು ಕ್ರಮವಹಿಸಬೇಕು ಭಕ್ತರು ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೈಸ್‌ ರಸ್ತೇಲಿ ಟೋಲ್‌ ಸಂಗ್ರಹ ತಕ್ಷಣ ನಿಷೇಧಿಸಿ: ಸಚಿವ ಎಚ್‌ಡಿಕೆ
ಬಿ.ವೈ. ರಾಘವೇಂದ್ರ ಪ್ರಯತ್ನದಿಂದ ಜಿಲ್ಲೆ ಅಭಿವೃದ್ಧಿ: ಶಾಸಕ‌ ಆರಗ ಜ್ಞಾನೇಂದ್ರ