ಗಂಡನಮನೆ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ । ರಂಜಿಸಿದ ವಿವಿಧ ಕಲಾತಂಡ । ಬಿಗಿ ಪೊಲೀಸ್ ಬಂದೋಬಸ್ತ್ಕನ್ನಡಪ್ರಭ ವಾರ್ತೆ ಸಾಗರ
ಮೆರವಣಿಗೆಯಲ್ಲಿ ಪಾಲ್ಗೊಂಡ ಶಾಸಕ ಗೋಪಾಲಕೃಷ್ಣ ಬೇಳೂರು ಜನರ ಜೊತೆ ಸೌರ್ಹಾದತೆಯಿಂದ ಬೆರೆಯುವ ಜೊತೆಗೆ ಡೊಳ್ಳು ಕುಣಿತದ ತಂಡದ ಜೊತೆಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಇದರ ಜೊತೆಗೆ ಮೆರವಣಿಗೆಯಲ್ಲಿರುವ ತಂಡಗಳನ್ನು ಶಾಸಕರು ಹುರುದುಂಬಿಸಿದ ದೃಶ್ಯ ಕಂಡು ಬಂದಿತು. ಗಂಡನಮನೆ ದೇವಸ್ಥಾನದ ಎದುರಿನಲ್ಲಿ ನಿರ್ಮಿಸಿರುವ ರಾಜಸ್ಥಾನ ಜೋಧ್ಪುರ ಶೈಲಿಯ ಭವ್ಯ ಮಂಟಪದೊಳಗಿನ ಗದ್ದುಗೆಯಲ್ಲಿ ಅಮ್ಮನವರನ್ನು ಪ್ರತಿಷ್ಠಾಪಿಸಲಾಯಿತು. ನಂತರ ಸಂಪ್ರದಾಯದಂತೆ ಅಮ್ಮನವರಿಗೆ ಕೋರೆಹಲ್ಲು ಬರೆಯುವ ಶಾಸ್ತ್ರ ನಡೆಯಿತು.
ಗಂಡನಮನೆ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ರವಿ ಪೋತರಾಜ ಅವರಿಂದ ವಿಶೇಷ ಪೂಜೆ ನಡೆಯಿತು. ವಿವಿಧ ಸಮಾಜದವರಿಂದ ಅಮ್ಮನವರಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಬುಧವಾರ ಕೂಡ ಅಮ್ಮನವರ ದರ್ಶನ ಹಾಗೂ ಉಡಿತುಂಬುವುದು ಸೇರಿದಂತೆ ವಿವಿಧ ಪೂಜೆ ಸಲ್ಲಿಸಲು ಜನಸಾಗರವೇ ಹರಿದುಬಂದಿತ್ತು. ಬೆಳಗಿನಿಂದ ರಾತ್ರಿಯವರೆಗೂ ಭಕ್ತರು ಸರತಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು. ೪ಕೆ.ಎಸ್.ಎ.ಜಿ.೧ಮಾರಿಕಾಂಬೆ ದೇವಿ ಉತ್ಸವ ಮೂರ್ತಿಯ ಮೆರವಣಿಗೆ.