ಶ್ರೀರಾಮ ಸೇನೆಯಿಂದ ಅದ್ಧೂರಿ ಮೆರವಣಿಗೆ

KannadaprabhaNewsNetwork |  
Published : Feb 20, 2026, 02:30 AM IST
ಗದಗ ನಗರದಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯೋಂತ್ಯುತ್ಸವ ಹಾಗೂ ಸಂತ ಸೇವಲಾಲ ಜಯಂತಿ ಅಂಗವಾಗಿ ಶ್ರೀರಾಮ ಸೇನೆ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳಿಂದ ಬೃಹತ್‌ ಮೆರವಣಿಗೆ ನಡೆಯಿತು. | Kannada Prabha

ಸಾರಾಂಶ

ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಯುವ ಸಮೂಹ ಮೆರವಣಿಗೆಯುದ್ದಕ್ಕೂ ಜೈ ಶ್ರೀರಾಮ, ಜೈ ಶಿವಾಜಿ ಘೋಷಣೆಗಳು ಮೊಳಗಿದವು. ಮೆರವಣಿಗೆಯಲ್ಲಿ ಶಿವಾಜಿ, ಶ್ರೀರಾಮನ ಕೇಸರಿ ಧ್ವಜಗಳು ರಾರಾಜಿಸಿದವು.

ಗದಗ: ನಗರದಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಹಾಗೂ ಸಂತ ಸೇವಲಾಲ ಜಯಂತಿ ಅಂಗವಾಗಿ ಶ್ರೀರಾಮ ಸೇನೆ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳಿಂದ ಬೃಹತ್‌ ಮೆರವಣಿಗೆ ನಡೆಯಿತು.

ಮೆರವಣಿಗೆಯಲ್ಲಿ ಬೃಹತ್‌ ಶಿವಾಜಿ ಮಹಾರಾಜರ ಮೂರ್ತಿಗಳೊಂದಿಗೆ ಶ್ರೀರಾಮ, ವೀರರಾಣಿ ಕಿತ್ತೂರು ಚೆನ್ನಮ್ಮ, ಸಂತ ಸೇವಲಾಲ, ಇಮ್ಮಡಿ ಪುಲಕೇಶಿ, ವಾಲ್ಮೀಕಿ ಮಹರ್ಷಿ ಮೂರ್ತಿಗಳು ಗಮನ ಸೆಳೆದವು.

ಒಕ್ಕಲಗೇರಿ ಓಣಿಯ ರಾಚೋಟೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ಭವ್ಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ರಸ್ತೆಬದಿ ಕಟ್ಟಡಗಳ ಮೇಲೆ ಕಿಕ್ಕಿರಿದು ಸೇರಿದ್ದ ಯುವ ಸಮೂಹ ಮೆರವಣಿಗೆಯನ್ನ ಕಣ್ತುಂಬಿಕೊಂಡರು. ಬೃಹತ್‌ ಡಿಜೆ ಸದ್ದಿಗೆ ಯುವಕರು ಕುಣಿದು ಕುಪ್ಪಳಿಸಿದರು.

ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಯುವ ಸಮೂಹ ಮೆರವಣಿಗೆಯುದ್ದಕ್ಕೂ ಜೈ ಶ್ರೀರಾಮ, ಜೈ ಶಿವಾಜಿ ಘೋಷಣೆಗಳು ಮೊಳಗಿದವು. ಮೆರವಣಿಗೆಯಲ್ಲಿ ಶಿವಾಜಿ, ಶ್ರೀರಾಮನ ಕೇಸರಿ ಧ್ವಜಗಳು ರಾರಾಜಿಸಿದವು.

ನಗರದ ಮುನ್ಸಿಪಲ್‌ ಮೈದಾನದಲ್ಲಿ ಮೆರವಣಿಗೆ ಸಮಾಪ್ತಿಗೊಂಡಿತು. ಮೆರವಣಿಗೆಗೆ ಬೀಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿತ್ತು.

ಛತ್ರಪತಿ ಶಿವಾಜಿ ಆದರ್ಶ ಪಾಲಿಸಿ

ಮುಳಗುಂದ: ಶಿವಾಜಿ ಮಹಾರಾಜರು ದೇಶದ ಹಿಂದು ಸಂಸ್ಕೃತಿ, ಸಂಪ್ರದಾಯ ರಕ್ಷಣೆಗೆ ಜೀವನವನ್ನೆ ಮುಡುಪಾಗಿಟ್ಟವರು. ಎಲ್ಲರನ್ನು ಸಹೋದರತ್ವ, ಸಮಾನತೆ, ಸಹಿಷ್ಣುತೆಯಿಂದ ನಡೆಸಿಕೊಂಡಿದ್ದಾರೆ ಎಂದು ಕ್ಷತ್ರೀಯ ಮರಾಠ ಸಂಘದ ಅಧ್ಯಕ್ಷ ವೈ.ಕೆ. ಶಿರಹಟ್ಟಿ ತಿಳಿಸಿದರು.ಸ್ಥಳೀಯ ಪಟ್ಟಣ ಪಂಚಾಯ್ತಿ ಕಾರ್ಯಾಲಯದಲ್ಲಿ ಗುರುವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ 399ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಶಿವಾಜಿ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸುವುದರ ಜತೆಗೆ ಅವರನ್ನು ಆರಾಧಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.ಈ ವೇಳೆ ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ, ಮುಖಂಡರಾದ ಮುದಕಪ್ಪ ಬಡಿಗೇರ, ಪರಸಣ್ಣ ಕಳ್ಳಿಮನಿ, ತಿರಕಪ್ಪ ಸಂಭೋಜಿ, ಬಿ.ಎಲ್. ಜಾಧವ, ಮಂಜುನಾಥ ಆರೇರ, ನಿಂಗಪ್ಪ ಕಳ್ಳಿಮನಿ, ಮಾರುತಿ ಜಾಧವ, ಮುನೀರ್ ನದ್ದಿಮುಲ್ಲಾ, ಎಂ.ಸಿ. ಸಜ್ಜನ, ಬಸವರಾಜ ಹೊರಪೇಟಿ ಹಾಗೂ ಮರಾಠ ಸಂಘದ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಟಿ ಕೋಟಿ ಆದಾಯವಿದ್ದರೂ ಬಯಲಲ್ಲೇ ಸ್ನಾನ, ಬಹಿರ್ದೆಸೆ!
ಬ್ಯಾಡಗಿ ಮೆಣಸಿನಕಾಯಿ ದರ ಎಂದಿನಂತೆ ಸ್ಥಿರ