- ಬಿಜೆಪಿ ಆರೋಪಕ್ಕೆ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಶಾಂತಶೆಟ್ಟಿ, ಜುಬೇದ ಸ್ಪಷ್ಟನೆ
ಪಟ್ಟಣ ಪಂಚಾಯಿತಿ ನಗರೋತ್ತಾನ ವೈಯಕ್ತಿಕ ಫಲಾನುಭವಿಗಳ ಅನುದಾನ 2025 ರ ಡಿಸೆಂಬರ್ 2 ರಂದು ಮಂಜೂ ರಾಗಿದೆ ಎಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಜುಬೇದ ಸ್ಪಷ್ಟನೆ ನೀಡಿದರು.
ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಜಂಟಿ ಸುದ್ದಿ ಗೋಷ್ಠಿಯಲ್ಲಿ ಬಿಜೆಪಿ ನಗರ ಅಧ್ಯಕ್ಷರ ಆರೋಪಕ್ಕೆ ಸ್ಪಷ್ಟನೆ ನೀಡಿದರು. ಪಟ್ಟಣದ 465 ಫಲಾನುಭವಿಗಳಿಗೆ ವೈಯ್ಯಕ್ತಿಕ ಅನುದಾನ ನೀಡಲು ₹77 ಲಕ್ಷ ಮಂಜೂರಾಗಿದ್ದು 3 ತಿಂಗಳ ಹಿಂದೆಯೇ ₹65 ಲಕ್ಷ ಪಟ್ಟಣ ಪಂಚಾಯಿತಿಗೆ ಬಂದಿದೆ. 8 ವಿಕಲಚೇತನರಿಗೆ ತ್ರಿಚಕ್ರ ವಾಹನ ನೀಡಲು₹11.40ಲಕ್ಷ ಜಿಲ್ಲಾಧಿಕಾರಿಗಳ ಖಾತೆಯಲ್ಲೇ ಇದೆ. ಪಟ್ಟಣ ಪಂಚಾಯಿತಿಯಲ್ಲಿ ನೌಕರರ ಕೊರತೆ, ರಸ್ತೆ ಅಗಲೀಕರಣ ಒತ್ತಡ, ಎಸ್.ಐ.ಆರ್, ಜಾತಿ ಗಣತಿಯಲ್ಲಿ ನೌಕರರು ತೊಡಗಿಸಿಕೊಂಡಿದ್ದರಿಂದ ವೈಯಕ್ತಿ ಕ ಅನುದಾನ ನೀಡಲು ವಿಳಂಬವಾಗುತ್ತಿದೆ.465 ಫಲಾನುಭವಿಗಳಲ್ಲಿ ಎಸ್.ಸಿ ಫಲಾನುಭವಿಗಳಿಗೆ ಮನೆ ರಿಪೇರಿ, ಶೌಚಾಲಯ ರಿಪೇರಿ,ವೈದ್ಯಕೀಯ ಚಿಕಿತ್ಸೆ, ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಎಸ್.ಟಿ.ಫಲಾನುಭವಿಗಳಿಗೆ ಮನೆ ರಿಪೇರಿ, ವಿದ್ಯಾರ್ಥಿ ವೇತನ,ಶೌಚಾಲಯ ನಿರ್ಮಾಣ ಹಾಗೂ ಇತರ ಬಡವರಿಗೆ ಮನೆ ದುರಸ್ತಿ, ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲಾಗುತ್ತದೆ. ಅಲ್ಲದೆ 8 ಜನ ವಿಕಲಚೇತನರಿಗೆ ತ್ರಿಚಕ್ರ ವಾಹನ ನೀಡಲಾಗುತ್ತದೆ. ಮುಂದಿನ ಕೆಲವೇ ದಿನಗಳಲ್ಲಿ ದಾಖಲೆ ಸರಿಪಡಿಸಿಕೊಂಡು ಫಲಾನುಭವಿಗಳ ಸಮಾವೇಶ ನಡೆಸಿ ಅನುದಾನ ವಿತರಿಸಲಾಗುತ್ತದೆ ಎಂದರು.
ಜೊತೆಗೆ ಶಾಸಕ ಟಿ.ಡಿ.ರಾಜೇಗೌಡ ಹಾಗೂ ರಾಜ್ಯ ಪ್ರವಾಸೋದ್ಯಮ ನಿಗಮ ಅಧ್ಯಕ್ಷ ಎಂ.ಶ್ರೀನಿವಾಸ್ ಸಹ ಮಂತ್ರಿಗಳ ಮೇಲೆ ಒತ್ತಡ ತಂದಿದ್ದರು. ರಾಜ್ಯದಲ್ಲೇ ಪ್ರಥಮ ಬಾರಿಗೆ ನಗರೋತ್ತಾನ ವೈಯಕ್ತಿಕ ಅನುದಾನ ಎನ್.ಆರ್.ಪುರ ಪಟ್ಟಣ ಪಂಚಾಯಿತಿಗೆ ಬಿಡುಗಡೆಯಾಗಿದೆ ಎಂದು ಸಂಬಂಧಪಟ್ಟ ದಾಖಲೆ ಬಿಡುಗಡೆ ಮಾಡಿದರು.
- ಬಾಕ್ಸ್-