ಜಾಗ ನೀಡಿದರೆ ಅಲೆಮಾರಿಗಳ ನಿವೇಶನಕ್ಕೆ ಅನುದಾನ

KannadaprabhaNewsNetwork |  
Published : Jun 29, 2025, 01:32 AM IST
 ೨೮ ಜೆ.ಜಿ.ಎಲ್. ೦೧ : ಜಗಳೂರು : ಶನಿವಾರ ಪಟ್ಟಣದ ಅಶ್ವತ್ ರೆಡ್ಡಿ ನಗರದ ಸಮಿಪ ಬಟ್ಟೆ ಗುಡಿಸಲಲ್ಲಿ ವಾಸಮಾಡುವ ಸ್ಥಳಕ್ಕೆ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿಯ ಅಲೆಮಾರಿ / ಅರೆ ಅಲೇಮಾರಿ ನಿಗಮದ ವ್ಯೆವಸ್ಥಾಪಕ ಮಲ್ಲಿಕಾರ್ಜುನ್  ಭೇಟಿ ನೀಡಿ ಅಹವಾಲು ಆಲಿಸಿದರು. ಪರಿಶಿಷ್ಟ ಜಾತಿಯ ಅಲೆಮಾರಿ / ಅರೆ ಅಲೇಮಾರಿ ಸಮುದಾಯದ ರಾಜ್ಯಾಧ್ಯಕ್ಷ ವೀರೇಶ್ ಇತರರು ಇದ್ದರು. | Kannada Prabha

ಸಾರಾಂಶ

ಪರಿಶಿಷ್ಟ ಜಾತಿಯ ಅಲೆಮಾರಿ/ ಅರೆ ಅಲೇಮಾರಿ ಸಮುದಾಯಗಳಿಗೆ ಸ್ಥಳೀಯ ಆಡಳಿತ ಜಮೀನು ನೀಡಿದರೆ ನಿಗಮದ ವತಿಯಿಂದ ನಿವೇಶನ ಅಭಿವೃದ್ಧಿಪಡಿಸಲು ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿಯ ಅಲೆಮಾರಿ/ ಅರೆ ಅಲೆಮಾರಿ ನಿಗಮ ವ್ಯವಸ್ಥಾಪಕ ಮಲ್ಲಿಕಾರ್ಜುನ್ ಭರವಸೆ ನೀಡಿದ್ದಾರೆ.

- ಸಿಂದೋಳ, ಸಿಂದೋಗಿ ಜನರ ಅಹವಾಲು ಸ್ವೀಕರಿಸಿ ಮಲ್ಲಿಕಾರ್ಜುನ ಭರವಸೆ

- - -

ಕನ್ನಡಪ್ರಭ ವಾರ್ತೆ ಜಗಳೂರು

ಪರಿಶಿಷ್ಟ ಜಾತಿಯ ಅಲೆಮಾರಿ/ ಅರೆ ಅಲೇಮಾರಿ ಸಮುದಾಯಗಳಿಗೆ ಸ್ಥಳೀಯ ಆಡಳಿತ ಜಮೀನು ನೀಡಿದರೆ ನಿಗಮದ ವತಿಯಿಂದ ನಿವೇಶನ ಅಭಿವೃದ್ಧಿಪಡಿಸಲು ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿಯ ಅಲೆಮಾರಿ/ ಅರೆ ಅಲೆಮಾರಿ ನಿಗಮ ವ್ಯವಸ್ಥಾಪಕ ಮಲ್ಲಿಕಾರ್ಜುನ್ ಭರವಸೆ ನೀಡಿದರು.

ಪಟ್ಟಣದ ಹೊಸ ಬಸ್ ನಿಲ್ದಾಣದ ಪಟ್ಟಣ ಪಂಚಾಯಿತಿ ಮಳಿಗೆಗಳಲ್ಲಿ ವಾಸ ಮಾಡುತ್ತಿರುವ ಕೊರಚ ಸಮುದಾಯ ಮತ್ತು ಅಶ್ವಥ್ ರೆಡ್ಡಿ ನಗರದ ಸಮೀಪ ಬಟ್ಟೆ ಗುಡಿಸಲಲ್ಲಿ ವಾಸ ಮಾಡುತ್ತಿರುವ ಸಿಂದೋಳ, ಸಿಂದೋಗಿ ಸಮುದಾಯ ವಾಸ ಮಾಡುವ ಸ್ಥಳಕ್ಕೆ ಶನಿವಾರ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳನ್ನು ಆಲಿಸಿ ಅನಂತರ ಅವರು ಮಾತನಾಡಿದರು.

ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ, ತಹಸೀಲ್ದಾರ್ ಕಚೇರಿಯವರು ಸ್ಥಳೀಯವಾಗಿ ಎಷ್ಟು ಜನ ವಾಸ ಮಾಡುತ್ತಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ಕಲೆ ಹಾಕಿ, ಜಮಿನಿನ ವ್ಯವಸ್ಥೆ ಮಾಡಿಕೊಟ್ಟರೆ, ನಿವೇಶನ ಅಭಿವೃದ್ಧಿಪಡಿಸಲು ಮತ್ತು ಹೊಸ ಜಮೀನು ಖರೀದಿ ಮಾಡಲು ನಿಗಮದಿಂದ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಸ್ವಾಮಿ ಎಂಬವರು, ಸರ್ ನಾವು ೩೦ ವರ್ಷಗಳಿಂದ ಗುಡಿಸಲಲ್ಲಿ ವಾಸ ಮಾಡುತ್ತಿದ್ದೇವೆ. ಇಲ್ಲಿಯವರೆಗೆ ನಮಗೆ ನಿವೇಶನ ಇಲ್ಲ. ಖಾಸಗಿಯವರ ಜಮೀನಿನಲ್ಲಿ ಕೆಲಸ, ಬಟ್ಟೆ ಗುಡಿಸಲಲ್ಲಿ ವಾಸ ಮಾಡುತ್ತಿದ್ದೇವೆ. ಗಾಳಿ, ಚಳಿ, ಮಳೆ, ಬಿಸಿಲು ಎನ್ನದೇ ಜೀವನ ನಡೆಸುತ್ತಿದ್ದೇವೆ. ರಾತ್ರಿವೇಳೆ ವಿಷಜಂತುಗಳ ಹಾವಳಿ ಬೇರೆ ಆಗುತ್ತಿದೆ ಎಂದರು.

ಮನವಿ ಸ್ಪಂದಿಸಿದ ಮಲ್ಲಿಕಾರ್ಜುನ ಅವರು ನಿಗಮ ವತಿಯಿಂದ ಎಲ್ಲರಿಗೂ ಸೋಲಾರ್ ದೀಪದ ವ್ಯವಸ್ಥೆ ಮತ್ತು ಪಾಟುಗಳ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದರು.

ಪರಿಶಿಷ್ಟ ಜಾತಿಯ ಅಲೆಮಾರಿ/ ಅರೆ ಅಲೆಮಾರಿ ಸಮುದಾಯಗಳ ಸಂಘ ರಾಜ್ಯಾಧ್ಯಕ್ಷ ವೀರೇಶ್ ಮಾತನಾಡಿ, ರಾಜ್ಯದಲ್ಲಿ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಸಮುದಾಯದವರು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಸೂರಿನ ವ್ಯವಸ್ಥೆಗೆ ಒತ್ತು ನೀಡಲಾಗುವುದು. ಈಗಾಗಲೇ ಹಾವೇರಿಯಲ್ಲಿ ಸಮುದಾಯದವರಿಗೆ ₹೩೩ ಲಕ್ಷ ಅನುದಾನ ನಿಗಮದ ವ್ಯವಸ್ಥಾಪಕರು ಬಿಡುಗಡೆ ಮಾಡಿದ್ದಾರೆ ಎಂದರು.

ಈ ವೇಳೆ ಅಲೆಮಾರಿ/ ಅರೆ ಅಲೆಮಾರಿ ಸಮುದಾಯದ ತಾಲೂಕು ಅಧ್ಯಕ್ಷ ಕುರಿ ಜಯಣ್ಣ ಮಾತನಾಡಿ, ಪಟ್ಟಣದಿಂದ ದೂರದಲ್ಲಿ ಜಮಿನು ಮಂಜೂರಾಗಿದೆ. ಅಲ್ಲಿ ಸಾರಿಗೆ ವ್ಯವಸ್ಥೆ ಇಲ್ಲ. ಪಟ್ಟಣದ ವೈಭವ್ ಹೋಟೇಲ್ ಹಿಂಭಾಗದಲ್ಲಿ ಜಾಗವಿದ್ದು, ಅಲ್ಲಿ ಅಲೆಮಾರಿ/ ಅರೆ ಅಲೆಮಾರಿ ಸಮುದಾಯಗಳಿಗೆ ಜಾಗ ನೀಡಬೇಕು ಎಂದು ಮನವಿ ಮಾಡಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ವರಪ್ಪ, ಪಟ್ಟಣ ಪಂಚಾಯಿತಿ ಆರ್.ಐ. ಮೋದಿನ್, ಆರೋಗ್ಯ ನೀರಿಕ್ಷಕ ಪ್ರಶಾಂತ್ ಮತ್ತಿತರರು ಹಾಜರಿದ್ದರು.

- - -

-೨೮ಜೆ.ಜಿ.ಎಲ್.೦೧.ಜೆಪಿಜಿ:

ನಿಗಮ ವ್ಯೆವಸ್ಥಾಪಕ ಮಲ್ಲಿಕಾರ್ಜುನ್ ಶನಿವಾರ ಅಹವಾಲು ಆಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ