ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಪರಿಶುದ್ಧ ಹೃದಯದಿಂದ ಮಾತ್ರ ಶ್ರೇಷ್ಠ ಸಾಹಿತ್ಯ ಹೊರಹೊಮ್ಮುತ್ತದೆ ಎಂದು ಪತ್ರಕರ್ತ ಈಶ್ಚರ ಹೋಟಿ ಹೇಳಿದರು.ಕಲಬುರಗಿಯ ಮಣೂರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಪಟ್ಟಣದ ಸೊಗಲ ರಸ್ತೆಯಲ್ಲಿರುವ ತಾಲೂಕು ಪಂಚಾಯತಿ ಸಭಾಭವನದಲ್ಲಿ ಮಕರ ಸಂಕ್ರಾಂತಿ ನಿಮಿತ್ತ ಆಯೋಜಿಸಿದ್ದ ರಾಜ್ಯಮಟ್ಟದ ಕವಿಗೋಷ್ಠಿ ಹಾಗೂ ಶಹಾಬುದ್ದೀನ್ ಕಾಲೇಖಾನ್ ಅವರ ಕಾವ್ಯಸ್ಫೂರ್ತಿ ಕವನ ಸಂಕಲನ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ, ಕಲೆ ಬದುಕಿನ ಆನಂದವನ್ನು ಇಮ್ಮಡಿಗೊಳಿಸುವ, ಮನಸ್ಸಿಗೆ ಆನಂದ ನೀಡುವ ಶಕ್ತಿ ಹೊಂದಿದೆ ಎಂದರು.ಧಾರವಾಡದ ಕೇಂದ್ರ ಕಾರಾಗೃಹದ ಅಧೀಕ್ಷಕ ಪಿ.ಮಹಾದೇವ ನಾಯ್ಕ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿ, ಯುವ ಕವಿಗಳು ಕನ್ನಡ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸಲಿ ಎಂದು ಶುಭಹಾರೈಸಿದರು. ಯರಗಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ರಾಜಶೇಖರ ಬಿರಾದಾರ ಕೃತಿ ಪರಿಚಯಿಸಿ, ಪ್ರಕೃತಿ, ಹಬ್ಬಗಳು, ಶಿಕ್ಷಣ, ಪ್ರೀತಿ ಮುಂತಾದ ವಿಷಯಗಳ ಕುರಿತಾದ ಕವನಗಳು ಚೊಚ್ಚಲ ಕೃತಿಯ ಮೌಲ್ಯ ಹೆಚ್ಚಿಸಿದ್ದು ಕವಿಯ ಎದೆಯೊಳಗೆ ಭಾವನೆಗಳು ಕುಸುಮಗಳಾಗಿ ಅರಳಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಮೋಹನ ಪಾಟೀಲ ಮಾತನಾಡಿ, ಎಲ್ಲ ಕವಿಗಳಿಗೆ ಕಿತ್ತೂರು ಕರ್ನಾಟಕದ ಬೈಲಹೊಂಗಲ ನೆಲದ ಹಿರಿಮೆ ಗರಿಮೆಯನ್ನು ಪರಿಚಯ ಮಾಡಿಕೊಟ್ಟರು. ಕವಿಗಳಿಗೆ ವೇದಿಕೆ ಕಲ್ಪಿಸಿಕೊಟ್ಟು ಮುಖ್ಯವಾಹಿನಿಗೆ ತರುವುದಲ್ಲದೇ ಕೃತಿಗಳನ್ನು ಹೊರತರಲು ಪ್ರೇರಣೆ ನೀಡುವುದು ಕವಿಗೋಷ್ಠಿಯ ಉದ್ದೇಶವಾಗಿದೆ ಎಂದರು.ಕಲಬುರಗಿಯ ಮಣೂರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಂಸ್ಥಾಪಕ ವ್ಯವಸ್ಥಾಪಕ ನಿರ್ದೇಶಕ ಡಾ.ಫಾರೂಕಅಹ್ಮದ್ ಮಣೂರ್ ಮಾತನಾಡಿ, ಸಾಮಾಜಿಕ ಸೇವೆ ಮನಸ್ಸಿಗೆ ತೃಪ್ತಿ ಕೊಡುವುದಲ್ಲದೆ ಬದುಕಿನ ಸಂಭ್ರಮ ಹೆಚ್ಚಿಸುತ್ತದೆ ಎಂದು ತಿಳಿಸಿದರು. ಹುಬ್ಬಳ್ಳಿಯ ಉಪಕಾರಾಗೃಹದ ಅಧೀಕ್ಷಕ ಶಹಾಬುದ್ದೀನ್ ಕಾಲೇಖಾನ್ ಮಾತನಾಡಿ, ವೃತ್ತಿಯ ಜತೆಗೆ ಸಾಹಿತ್ಯ ರಚನೆ ಪ್ರವೃತ್ತಿಯಾದಾಗ ಜೀವನದಲ್ಲಿ ನೆಮ್ಮದಿ ಸಿಗುತ್ತದೆ ಎಂದರು.
ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಮಂಗಲಾ ಶ್ರೀಶೈಲ ಮೆಟಗುಡ್ಡ ಅಧ್ಯಕ್ಷತೆ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಆರ್.ಠಕ್ಕಾಯಿ, ಬೈಲಹೊಂಗಲ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶಾಹೀನ್ ಅಖ್ತರ್ ಪಾಲ್ಗೊಂಡಿದ್ದರು. ಮಲ್ಲಿಕಾರ್ಜುನ ಸದೆಪ್ಪ ಕೋಳಿ, ಚಿಕ್ಕಮಗಳೂರಿನ ಜಿಲ್ಲಾ ಕಾರಾಗೃಹದ ಮುಖ್ಯ ವೀಕ್ಷಕ ಬಸವಂತಪ್ಪ ಬಸಪ್ಪ ಗಡದವರ ನಿರೂಪಿಸಿದರು. ಕವಿ-ಕವಯತ್ರಿಯರು ಕವನ ವಾಚಿಸಿದರು. ಮೆಹಬೂಬ್ ಸುಭಾನಿ ಖಿಲಾರಿ ವಂದಿಸಿದರು.ರಾಜೇಶ ಮೆಂಡಿಗೇರಿ, ಎನ್.ಗುಣಶೀಲ, ನೀರಜಾ ಗಣಾಚಾರಿ, ಬಸವರಾಜ ಕವಾರಿ, ಮಹಾಂತೇಶ ಗೋನಕೊಪ್ಪ, ವಿಜಯಲಕ್ಷ್ಮಿ ತಿರಕನ್ನವರ, ಬಸವಂತಪ್ಪ ಗಡದವರ, ಮಹಾಂತೇಶ, ಬಾಳಿಗಟ್ಟಿ, ಜವಾಹರ ಕನ್ನೂರ, ಕುಂತಲ ವಡೇರ, ಹೇಮಂತರಾಜ ಕೆ.ಸಿ, ವಿನಾಯಕ ಬಡಿಗೇರ, ಸಿದ್ದಲಿಂಗಯ್ಯ ಹಿರೇಮಠ, ರೇಷ್ಮಾ ಸುಧಾ, ಯಲ್ಲಪ್ಪ ಇಟ್ನಾಳ, ಡಾ.ಬಸವರಾಜ ಎಣಗಿ, ಜ್ಯೋತಿ ಚಿನಗುಂಡಿ, ಬಸಪ್ಪ ಇಟ್ಟಣ್ಣವರ, ಶಿಲ್ಪಾ ಉಪಾಧ್ಯೆ, ಈರಣ್ಣ ತಟ್ಟಿಮನಿ, ಯಲ್ಲಪ್ಪ ಕೊಣ್ಣೂರ, ಸರಸ್ವತಿ ಬನ್ನಿಗಿಡದ, ಯಶವಂತ ಉಚಗಾಂವಕರ, ಕಾಡೇಶ ಬಸ್ತವಾಡಿ, ಶೈಲಜಾ ಕೋರಿಶೆಟ್ಟರ, ಮೈಲಾರಪ್ಪ ಗೋವಣ್ಣವರ, ನೇಹಾ ಬಡಿಗೇರ, ಶಿವಕುಮಾರ ಶಿವಶಿಂಪಿ, ಆನಂದ ಕೊಂಡಗುರಿ, ಬಸಪ್ಪ ಶಿಗಿಹಳ್ಳಿ, ಸಾಗರ ಹುನಗುಂದ, ಎಂ.ಎಸ್. ಪರಮೇಶ್ವರಪ್ಪ, ಪ್ರಸನ್ನ ಹೂಗಾರ, ಮಹಾಂತೇಶ ಚಿಕ್ಕಮಠ, ರಮೇಶ ಇಂಗಳಗಿ, ಗೀತಾ ಶೇಠಿ, ಎಸ್.ವಿ.ಕೋರಿಮಠ, ಜ್ಯೋತಿಲಕ್ಷ್ಮಿ ಬಡಿಗೇರ, ನೇತ್ರಾವತಿ ಅಂಗಡಿ, ಎ.ಎಸ್.ಗಡದವರ, ಅಡವೀಶ ದಿಂಡವಾರ, ವೀರಣ್ಣ ಹೂಲಿ, ದೀಪಾ ಜವಳಿ, ಚಂದ್ರಶೇಖರ ಕೊಪ್ಪದ, ಬಾಳಗೌಡ ದೊಡಬಂಗಿ, ದಾನಮ್ಮ ಅಂಗಡಿ, ಗೋದಾವರಿ ಪಾಟೀಲ, ನೇತ್ರಾವತಿ ಬಿಸಲೊಳ್ಳಿ, ಪೂರ್ಣಿಮಾ ಯಲಿಗಾರ, ಮಲ್ಲಮ್ಮ ಪಾಟೀಲ, ಬಸಗೌಡ ನಾಯ್ಕ, ಅನಿಲ ಮಡಿವಾ ಪಾಲ್ಗೊಂಡಿದ್ದರು.