ಕನ್ನಡಪ್ರಭ ವಾರ್ತೆ ಚಾಮರಾಜನಗರ
ಬಂಡೀಪುರ ರಾಷ್ಟ್ರೀಯ ಉದ್ಯಾನ ಅತ್ಯುತ್ತಮ ಹುಲಿ ರಕ್ಷಿತಾರಣ್ಯ ಈ ರಕ್ಷಿತಾರಣ್ಯದಲ್ಲಿ ೧೬೦ಕ್ಕೂ ಹೆಚ್ಚಿನ ಹುಲಿಗಳಿರುವುದು ಹೆಮ್ಮೆಯ ವಿಚಾರ. ಸಾವಿರಕ್ಕೂ ಹೆಚ್ಚು ಆನೆಗಳಿಗೆ ಇದು ನೆಚ್ಚಿನ ತಾಣ. ಹುಲಿಗಳು ಅರಣ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು ಕಾಡು ಸಮತೋಲನ ಕಾಯ್ದುಕೊಂಡಿದೆ. ಹೈಕೋರ್ಟ್ ಮಾತ್ರವಲ್ಲ ಸುಪ್ರೀಂಕೋರ್ಟ್ ಕೂಡ ನಿಷೇಧದ ಆದೇಶವನ್ನು ಎತ್ತಿ ಹಿಡಿದಿದೆ. ಕೆಲವು ರಾಜಕಾರಣಿಗಳು ತಮ್ಮ ರಾಜಕೀಯ ಉದ್ದೇಶಕ್ಕಾಗಿ, ವರಿಷ್ಠರನ್ನು ಓಲೈಸಲಿಕ್ಕಾಗಿ ನಿರ್ಬಂಧ ತೆರವುಗೊಳಿಸಲು ಲಾಬಿ ಮಾಡುವುದು ತರವಲ್ಲ. ಯಾರದೋ ಸ್ವಾರ್ಥಕ್ಕೆ ಮುಗ್ಧ ಪ್ರಾಣಿಗಳನ್ನು ಬಲಿಕೊಡುವುದು ಸರಿಯಲ್ಲ ಎಂದರು.
ಪರಿಸರ, ವನ್ಯಜೀವಿಗಳ ವಿಚಾರದಲ್ಲಿ ಯಾವುದೇ ಲಾಬಿ, ರಾಜಕೀಯಕ್ಕೆ ಅವಕಾಶ ಕೊಡದೇ ಈ ಹಾದಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕಾಗಿದೆ ಎಂದರು. ಮಾನವ ಸರಪಳಿಯಲ್ಲಿ ಸಂಜೀವಿನಿ ಟ್ಟಸ್ಟ್ ಕಾರ್ಯದರ್ಶಿ ಸತೀಶ್ಕುಮಾರ್ ಹಾಗೂ ಪದಾಧಿಕಾರಿಗಳು, ಹಸಿರು ಪಡೆಯ ಗೌರಿ, ಅಕ್ಷತ್, ರಾಧ, ಜ್ಯೋತಿ, ಮೇಘಶ್ರೀ, ಲತಾ, ಲಯನ್ಸ್ ಸಂಸ್ಥೆಯ ಡಾ. ಬಸವರಾಜೇಂದ್ರ, ಡಾ. ಶ್ವೇತಾ, ಚೇತನ್, ರೋಟರಿಯ ನಾಗರಾಜ್, ಸುರೇಶ್, ರೋಟರಿ ಸಿಲ್ಕ್ ಸಿಟಿಯ ಮಾಣಿಕ್ ಚಂದ್ ಸಿರ್ವಿ, ಅಜಯ್, ಇನ್ನರ್ ವ್ಹೀಲ್ ಪೂಜಾ, ಪತಂಜಲಿ ಕುಮಾರಸ್ವಾಮಿ, ನಿಜಗುಣ ಸಿದ್ದರಾಜು, ಯೋಗಾ ಪ್ರಕಾಶ್, ದೊರೆಸ್ವಾಮಿ, ವಿರಾಟ್ ಶಿವು, ರಮೇಶ್, ಮಹಮದ್ ಗೌಸ್, ಔಷಧಿ ವ್ಯಾಪಾರಿ ಸಂಘದ ಆದರ್ಶ, ಹಿರಿಯರಾದ ಎ.ಡಿ. ಸಿಲ್ವಾ, ಇತರರು ಭಾಗವಹಿಸಿದ್ದರು.