
ಇಂದರಪಾಶ ಚಿಂಚರಕಿ
ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್ಆರ್ಪಿ) ಬೆಟಾಲಿಯನ್ ಸ್ಥಾಪನೆಗೆ ಭೂಮಿ ಒದಗಿಸುವ ಪ್ರಕ್ರಿಯೆಗೆ ಸರ್ಕಾರ ಅಧಿಕೃತವಾಗಿ ಚಾಲನೆ ನೀಡಿದೆ. ವಟಗಲ್ ಗ್ರಾಮದ ಸರ್ವೆ ನಂ.25ರಲ್ಲಿರುವ 50 ಎಕರೆ ಗೋಮಾಳ ಜಮೀನನ್ನು ಕೆಎಸ್ಆರ್ಪಿ ಬೆಟಾಲಿಯನ್ ಸ್ಥಾಪನೆಗಾಗಿ ಗೃಹ ಇಲಾಖೆಯ ಹೆಸರಿನಲ್ಲಿ ಕಾಯ್ದಿರಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಜಗದೀಶ ಕೆ. ಅವರು ಸೆ.18ರಂದು ಈ ಕುರಿತು ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಭೂ ಕಂದಾಯ ನಿಯಮಗಳು-1966ರ ನಿಯಮ 97 (4)ರನ್ವಯ ಸರ್ವೆ ನಂ.25ರ 50 ಎಕರೆ ಜಮೀನನ್ನು ‘ಗೋಮಾಳ’ ಶೀರ್ಷಿಕೆಯಿಂದ ತಗ್ಗಿಸಿ, ಕೆಎಸ್ಆರ್ಪಿ ಬೆಟಾಲಿಯನ್ ಸ್ಥಾಪನೆ ಉದ್ದೇಶಕ್ಕಾಗಿ ಗೃಹ ಇಲಾಖೆಯ ಹೆಸರಿನಲ್ಲಿ ಕಾಯ್ದಿರಿಸಲು ಅನುಮತಿ ನೀಡಲಾಗಿದೆ.ಜಿಲ್ಲಾಧಿಕಾರಿ ಪ್ರಸ್ತಾವನೆ: ವಟಗಲ್ನಲ್ಲಿ ಕೆಎಸ್ಆರ್ಪಿ ಬೆಟಾಲಿಯನ್ ಸ್ಥಾಪನೆಗೆ ಅಗತ್ಯವಿರುವ ಜಮೀನು ಕಾಯ್ದಿರಿಸುವಂತೆ ರಾಯಚೂರು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಪ್ರಸ್ತಾವನೆಯನ್ನು ಪರಿಶೀಲಿಸಿದ ಬಳಿಕ ಕಂದಾಯ ಇಲಾಖೆ ಭೂಮಿಯ ಬಳಕೆ ಬದಲಾವಣೆ ಹಾಗೂ ಕಾಯ್ದಿರಿಸುವಿಕೆಗೆ ಅನುಮತಿ ನೀಡಿದೆ. ಇದರಿಂದ ಬೆಟಾಲಿಯನ್ ಸ್ಥಾಪನೆಗೆ ಅಗತ್ಯವಿರುವ 50 ಎಕರೆ ಭೂಮಿ ಗುರುತಿಸುವ ಹಾಗೂ ಗೃಹ ಇಲಾಖೆಯ ಹೆಸರಿನಲ್ಲಿ ಕಾಯ್ದಿರಿಸುವ ಪ್ರಮುಖ ಹಂತ ಪೂರ್ಣಗೊಂಡಂತಾಗಿದೆ.
ಮುಂದಿನ ಹಂತವೇನು?: ಸರ್ಕಾರ ಭೂಮಿ ಕಾಯ್ದಿರಿಸಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ, ಮುಂದಿನ ಹಂತದಲ್ಲಿ ಸಂಬಂಧಿಸಿದ ಇಲಾಖೆಗಳ ಮೂಲಕ ಜಮೀನು ಹಸ್ತಾಂತರ, ದಾಖಲೆ ಪ್ರಕ್ರಿಯೆ ಹಾಗೂ ಬೆಟಾಲಿಯನ್ ಸ್ಥಾಪನೆಗೆ ಅಗತ್ಯವಿರುವ ಮೂಲಸೌಕರ್ಯ ಯೋಜನೆಗಳ ಕುರಿತು ಕ್ರಮ ಕೈಗೊಳ್ಳಬೇಕಿದೆ.
ಬಾಕ್ಸ್
ಗ್ರಾಮ: ವಟಗಲ್- ಸರ್ವೆ ನಂ.: 25- ವಿಸ್ತೀರ್ಣ: 50 ಎಕರೆ- ಪ್ರಸ್ತುತ ಸ್ವರೂಪ: ಗೋಮಾಳ- ಉದ್ದೇಶ: ಕೆಎಸ್ಆರ್ಪಿ ಬೆಟಾಲಿಯನ್ ಸ್ಥಾಪನೆ- ಕಾಯ್ದಿರಿಸುವ ಇಲಾಖೆ: ಗೃಹ ಇಲಾಖೆ- ಆದೇಶ: ಸೆ.18, 2026- ಕಾನೂನು ಆಧಾರ: ಕರ್ನಾಟಕ ಭೂ ಕಂದಾಯ ನಿಯಮಗಳು–1966, ನಿಯಮ 97(4)
ಕೋಟ್ :
ಶಾಸಕ ಆರ್ ಬಸನಗೌಡ ತುರುವಿಹಾಳ ಮಸ್ಕಿ.
20-ಎಂ ಎಸ್ ಕೆ -01:ಮಸ್ಕಿ ತಾಲ್ಲೂಕಿನಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್ಆರ್ಪಿ) ಬೆಟಾಲಿಯನ್ ಸ್ಥಾಪನೆಗೆ ಭೂಮಿ ಒದಗಿಸುವ ಪ್ರಕ್ರಿಯೆಗೆ ಸರ್ಕಾರ ಅಧಿಕೃತವಾಗಿ ಆದೇಶ ಮಾಡಿರುವ ಪ್ರತಿ.