ಡಂಬಳ: ಪಂಚ ಗ್ಯಾರಂಟಿಗಳ ಯೋಜನೆಗಳ ಮೂಲಕ ಜನರನ್ನು ಆರ್ಥಿಕವಾಗಿ ಮುಖ್ಯವಾಹಿನಿಗೆ ತರಲು ಸರ್ಕಾರ ಶ್ರಮಿಸುತ್ತಿದೆ ಮತ್ತು ಕ್ಷೇತ್ರದ ಹಿತಕ್ಕಾಗಿ ಹತ್ತಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.
ಪಂಚ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಿಗಳು ಬಹಳ ಅಚ್ಚುಕಟ್ಟಾಗಿ ಅನುಷ್ಠಾನ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಮ್ಯ ಅವರು ಬಡವರ ಕುರಿತು ಅಪಾರ ಪ್ರೀತಿ ಹೊಂದಿದ್ದಾರೆ ಎಂದರು.ಡಾ. ಎಚ್.ಬಿ. ಹುಲಗಣ್ಣವರ ಮಾತನಾಡಿ, ರಾಜ್ಯ ಸರ್ಕಾರವು ಗ್ರಾಮೀಣ ಭಾಗದಲ್ಲಿ ಬಸ್, ವೈದ್ಯಕೀಯಕ್ಕೆ ಆದ್ಯತೆ ನೀಡುತ್ತಿದೆ. ಜತೆಗೆ ಜಾನುವಾರುಗಳ ಆರೋಗ್ಯಕ್ಕೂ ಪ್ರಾಧಾನ್ಯ ನೀಡುತ್ತಿದೆ ಎಂದರು.
ಮುಂಡರಗಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ, ತಹಸೀಲ್ದಾರ್ ಯರಿಸ್ವಾಮಿ ಪಿ.ಎಸ್. ಮಾತನಾಡಿದರು. ಕಾರ್ಯಕ್ರಮದಲ್ಲಿ ವಕ್ಫ್ ಬೋರ್ಡ್ ಉಪಾಧ್ಯಕ್ಷ ಯುಸೂಫ್ ಈಟಿ, ಭುವನೇಶ್ವರಿ ಕಲ್ಲಿಕುಟಿಗರ, ಪುಲಕೇಶಗೌಡ ಪಾಟೀಲ, ಬಸವರಾಜ ಕಣವಿ, ತಿಪ್ಪಣ್ಣ ಬಜಮ್ಮನವರ, ಬಸವರಡ್ಡಿ ಬಂಡಿಹಾಳ, ಗೌಸುಸಾಬ್ ಡಂಬಳ, ಪರತಗೌಡ ಪಾಟೀಲ, ಮಹೇಶ ಗಡಗಿ, ಗೋಣಿಬಸಪ್ಪ ಕೊರ್ಲಹಳ್ಳಿ, ಮಲ್ಲಿಕಾರ್ಜುನ ಪ್ಯಾಟಿ, ಸುರೇಶ ಗಡಗಿ, ಬಾಬುಸಾಬ ಮೂಲಿಮನಿ, ಮಾರುತಿ ಹೊಂಬಳ, ರವಿ ಜವಿ, ಬಶೀರಸಾಬ ಒಡ್ಡಟ್ಟಿ, ಮನೋಜಗೌಡ ಪಾಟೀಲ್, ಭೀಮಪ್ಪ ಗದಗಿನ, ಬಸವರಾಜ ಕಣವಿ, ಗ್ರಾಮದ ಹಿರಿಯರು, ಮಹಿಳೆಯರು, ಯುವಕರು ಇದ್ದರು.