ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ನಗರದ ಸರಸ್ವತಿ ವಿದ್ಯಾಸಂಸ್ಥೆಯ ಆವರಣದಿಂದ ಆರಂಭಗೊಂಡ ಪಥಸಂಚಲನ ಪಟ್ಟಣದ ಕಂಠಿ ಪೇಟೆ, ಗಚ್ಚಿನಕಟ್ಟಿ, ಚೌಬಜಾರ, ಅರಳಿಕಟ್ಟಿ, ಗುಗ್ಗರಿ ಪೇಟೆ, ನೀಲಕಂಠೇಶ್ವರ ದೇವಸ್ಥಾನ, ಪವಾರ ಕ್ರಾಸ್, ಪುರಸಭೆ ಎದುರಿನ ರಸ್ತೆ ಮೂಲಕ ಹಾಯ್ದು ಮಾಹೇಶ್ವರಿ ವಿದ್ಯಾಸಂಸ್ಥೆಯ ಆವರಣ ತಲುಪಿತು. ಪಥಸಂಚಲನದಲ್ಲಿ ಪಟ್ಟಣದ 150ಕ್ಕೂ ಅಧಿಕ ಸ್ವಯಂ ಸೇವಿಕಿಯರು ಘೋಷ ಸಹಿತ ಸಂಚಲನದಲ್ಲಿ ಭಾಗವಹಿಸಿದ್ದರು.
ಪಥಸಂಚಲ ಸಾಗುವ ದಾರಿಗುಂಟ ಸಾರ್ವಜನಿಕರು ರಸ್ತೆಗಳಲ್ಲಿ ರಂಗೋಲಿ, ಹೂವಿನ ಅಲಂಕಾರ ಮಾಡಿ ಪಥ ಸಂಚಲನವನ್ನು ಸ್ವಾಗತಿಸಿದರು. ಸ್ವಯಂ ಸೇವಕಿಯರ ಮೇಲೆ ಹೂಮಳೆಗರೆದು ಹರ್ಷವ್ಯಕ್ತಪಡಿಸಿದರು. ಅಲ್ಲಲ್ಲಿ ಶಿವಾಜಿ, ಸುಭಾಷಚಂದ್ರ ಭೋಸ್, ವಿವೇಕಾನಂದ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ಭಗತ್ ಸಿಂಗ್, ಶ್ರೀರಾಮ, ಕಿತ್ತೂರುರಾಣಿ ಚೆನ್ನಮ್ಮ ಸೇರಿದಂತೆ ವಿವಿಧ ರಾಷ್ಟ್ರನಾಯಕರ ವೇಷಧಾರಿ ಮಕ್ಕಳು ಪಥ ಸಂಚಲನವನ್ನು ಸ್ವಾಗತಿಸಿದರು.ದಾರಿಯುದ್ದಕ್ಕೂ ಮಹಿಳೆಯರ ಆಕರ್ಷಕ ಪಥಸಂಚಲನ ವೀಕ್ಷಿಸಲು ಅಪಾರ ಜನಸ್ತೋಮ ನೆರೆದಿತ್ತು. ದೇಶಾಭಿಮಾನಿಗಳು ಪುಷ್ಪವೃಷ್ಠಿಗೈದರು.ರಸ್ತೆಗಳೆಲ್ಲ ಬಣ್ಣ ಬಣ್ಣದ ರಂಗೋಲಿಗಳಿಂದ ಸಿಂಗಾರಗೊಂಡಿದ್ದವು.
ಮಕ್ಕಳ ಆದರ್ಶ ಭವಿಷ್ಯದ ನಿರ್ಮಾಣ ತಾಯಂದಿರ ಮೇಲಿದೆ. ಮಕ್ಕಳಿಗೆ ಗುಂಣಾತ್ಮಕ ಶಿಕ್ಷಣ, ಉತ್ತಮ ಸಂಸ್ಕಾರ ಕಲಿಸಬೇಕಿದೆ. ಅವರ ಮೂಲಕ ಭಾರತ ವಿಶ್ವ ಗುರುವಾಗಬೇಕಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ತುಂಬಾ ಇದೆ. ಸ್ರ್ರೀ ಶಕ್ತಿ ಸದ್ಭಳಕೆಯಾಗಬೇಕಿದೆ.
ಮಂಜುಳಾ ಚಮಚಿ ಮಾತನಾಡಿದರು. ಸುಧಾ ದೇಸಾಯಿ, ಪ್ರೇಮಾ ಕುಂಬಾರ, ರುಕ್ಮೀಣಿ ಕಂಠಿ, ಶ್ರುತಿ ಕಾರಕೂನ, ಸವಿತಾ ಭಾರತಿಮಠ, ಶಿಲ್ಪಾ ಶೀಲವಂತ, ಜ್ಯೋತಿ ಕದಾಂಪೂರ, ರುಕ್ಮೀಣಿ ಬೊಂಬಲೇಕರ್ ಮೊದಲಾದವರು ಭಾಗವಹಿಸಿದ್ದರು.