ಕನ್ನಡಪ್ರಭ ವಾರ್ತೆ ಕಲ್ಯಾಣಪುರ
ಅವರು ಇಲ್ಲಿನ ಮಿಲಾಗ್ರಿಸ್ ಕಾಲೇಜಿನ ಪ್ರಥಮ ಪ್ರಾಂಶುಪಾಲ ಡಾ.ಗುರುರಾಜ ಭಟ್ ಅವರ ಜನ್ಮ ಶತಮಾನೋತ್ಸವ ಸಮಾರಂಭದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಗುರುರಾಜ ಭಟ್ ಅವರ ಜೀವನ ಚರಿತ್ರೆ, ಕೊಡುಗೆಗಳು ಮತ್ತು ಸಾಧನೆಗಳ ಮಾತನಾಡಿದ ಅವರು, ಭಟ್ಟರು ಶಿಲ್ಪಕಲೆ ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ಸ್ಥಳಗಳಿಗೆ ಮೈಲುಗಟ್ಟಲೇ ಬರಿಗಾಲಿನಲ್ಲಿ ನಡೆದು ಅಧ್ಯಯನ ಮಾಡುತ್ತಿದ್ದರು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ, ಸಾಮಾಜಿಕ ಜಾಲತಾಣಗಳಿಲ್ಲದ ಆ ಐವತ್ತರ ದಶಕದಲ್ಲಿ ಸಂಶೋಧಕ ಗುರುರಾಜ ಭಟ್ ಜಗತ್ತಿಗೆ ತಿಳಿದಿರುವ ವ್ಯಕ್ತಿಯಾಗಿದ್ದು, ನಮ್ಮ ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರದ ಸಂಸ್ಥಾಪಕ ಪ್ರಾಂಶುಪಾಲರಾಗಿದ್ದರು ಎಂಬುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಟ್ರಸ್ಟಿನ ವಿಸ್ವಸ್ಥ ಪರಶುರಾಮ ಭಟ್, ಹಿರಿಯ ಸಾಹಿತ್ಯ ವಿಮರ್ಶಕ ಮುರಳೀಧರ ಉಪಧ್ಯಾಯ, ಡಾ.ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ನಿರ್ದೇಶಕ ಬಿ. ಜಗದೀಶ್ ಶೆಟ್ಟಿ, ಮಾನುಷದ ಉಪಾಧ್ಯಕ್ಷ ರಾಬರ್ಟ್ ರೊಡ್ರಿಗಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.