ಗಂಗಾವತಿ:
ಎಚ್.ಆರ್. ಶ್ರೀನಾಥ ಅವರು ಈ ಹಿಂದೆ ಗ್ರಾಮದಲ್ಲಿ ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಡಲು 3 ಎಕರೆ ಜಮೀನನ್ನು ದಾನವಾಗಿ ನೀಡಿದ್ದರು. ಈಗ ಗ್ರಾಮಸ್ಥರು ಮನೆ ನಿರ್ಮಿಸಿಕೊಂಡಿದ್ದು, ಶ್ರೀನಾಥ ಹೆಸರಿನಲ್ಲಿ ಕಾಲನಿ ನಾಮಫಲಕ ಹಾಕಿದ್ದಾರೆ.
ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ಮಾಜಿ ಸಂಸದ ಎಚ್.ಜಿ. ರಾಮುಲು ಮತ್ತು ಅವರ ಪುತ್ರ ಎಚ್.ಆರ್. ಶ್ರೀನಾಥ ಕುಟುಂಬ ಮೊದಲಿನಿಂದಲು ದಾನ, ಧರ್ಮ ಮಾಡುತ್ತಾ ಬಂದಿದೆ. ರಾಮುಲು ಅವರು ಈ ಹಿಂದೆ ಸಂಸದರಾಗಿ, ಶಾಸಕರಾಗಿ ಜನಪರ ಕೆಲಸ ಮಾಡಿದ್ದಾರೆ. ಧಾರ್ಮಿಕತೆಗೂ ಹೆಚ್ಚಿನ ಒಲವು ನೀಡುತ್ತಾ, ಕ್ಷೇತ್ರದಲ್ಲಿ ಶಾಂತಿ ಕಾಪಾಡುವ ನಾಯಕರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಡೆಯೋಣ ಎಂದರು.ಈ ಗ್ರಾಮ ತೀರಾ ಹಿಂದುಳಿದ ಪ್ರದೇಶವಾಗಿದೆ. ಈ ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವ ಮೂಲಕ ಬರುವ ದಿನಗಳಲ್ಲಿ ಸರ್ಕಾರದ ಯೋಜನೆ ತಲುಪಿಸಲಾಗುವುದು ಎಂದ ಅವರು, ಈ ಪ್ರದೇಶದ ವ್ಯಾಪ್ತಿಯಲ್ಲಿ ಕುಮ್ಮಟದುರ್ಗಾ, ಹಿರೇಬೆಣಕಲ್ , ಹೇಮಗುಡ್ಡ ಸೇರಿದಂತೆ ಪ್ರಸಿದ್ಧ ಐತಿಹಾಸಿಕ ಸ್ಥಳಗಳು ಬರುತ್ತಿದ್ದು, ಇವುಗಳ ಸರ್ವಾಂಗಿಣ ಅಭಿವೃದ್ಧಿಗೆ ಅನುದಾನ ತಂದು ಪ್ರವಾಸಿಗರು ಹೋಗಿ ಬರಲು ಅನುಕೂಲ ಮಾಡಿಕೊಡಲಾಗುತ್ತದೆ ಎಂದರು.